ಯೋಗಿ ಸರ್ಕಾರ ಬಂದ್ರೆ ಅಲ್ಲಾಹು ಬಳಿ ಹೋಗ್ತೇನೆ ಎಂದಿದ್ದ ಮುನವ್ವರ್ ಆರೋಗ್ಯ ಏರುಪೇರು!

By Suvarna NewsFirst Published Mar 10, 2022, 1:46 PM IST
Highlights

* ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ್ರೆ ಯುಪಿ ಬಿಡುತ್ತೇನೆಂದಿದ್ದ ಮುನವ್ವರ್ ರಾಣಾ
* ರಾಣಾ ಆರೋಗ್ಯ ಸ್ಥಿತಿ ಏರುಪೇರು'
* ಯೋಗಿ ವಿರುದ್ಧ ಕಿಡಿ ಕಾರಿದ್ದ ವಿವಾದಿತ ಕವಿ

ಲಕ್ನೋ(ಮಾ.10): ಯುಪಿ ಅಸೆಂಬ್ಲಿ ಚುನಾವಣೆ 2022 ರಲ್ಲಿ ಬಿಜೆಪಿಯ ಗೆಲುವಿನ ನಂತರ ಉತ್ತರ ಪ್ರದೇಶ ತೊರೆಯುವುದಾಗಿ ಘೋಷಿಸಿದ ಖ್ಯಾತ ಕವಿ ಮುನವ್ವರ್ ರಾಣಾ ಅವರ ಆರೋಗ್ಯ ಹದಗೆಟ್ಟಿದೆ. ಹೌದು ಯುಪಿ ಚುನಾವಣೆ ಫಲಿತಾಂಶಕ್ಕೂ ಮುನ್ನವೇ ಮುನವ್ವರ್ ರಾಣಾ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಇನ್ನು ಟ್ರೆಂಡ್‌ಗಳ ಅನ್ವಯ ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಘಾಉವುದು ಸ್ಪಚಷ್ಟವಾಗುತ್ತಿರುವ ಸಂದರ್ಭದಲ್ಲಿ, ಈ ವಿಚಾರವಾಗಿ ಯಾವುದೇ ಬಗೆಯ ಹೇಳಿಕೆ ನೀಡಲು ಮುನವ್ವರ್ ನಿರಾಕರಿಸಿದ್ದಾರೆ.

ಮೂರು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿದ್ದು, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯುಪಿಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವ ಬೆಳವಣಿಗೆ ಕಂಡುಬರುವುದರಿಂದ, ಮುನವ್ವರ್ ರಾಣಾ ಅವರು ತಮ್ಮ ಭರವಸೆಗೆ ಬದ್ಧರಾಗುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ, ಅವರ ಹೇಳಿಕೆ ಕುರಿತು ಮಾಧ್ಯಮದವರು ಅವರನ್ನು ಸಂಪರ್ಕಿಸಿದಾಗ, ಅವರು ಮಾಧ್ಯಮ ಪ್ರತಿನಿಧಿಗಳಿಂದ ದೂರ ಉಳಿದಿದ್ದಾರೆ. ಅಲ್ಲದೇ ಏನನ್ನೂ ಮಾತನಾಡಲು ನಿರಾಕರಿಸಿದರು. ಈ ಹಿಂದೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾದರೆ ಉತ್ತರ ಪ್ರದೇಶ ಬಿಟ್ಟು ಹೋಗುತ್ತೇನೆ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು.

Latest Videos

ಐದು ವರ್ಷಗಳಲ್ಲಿ ನಾವು ಬದುಕುಳಿದಿದ್ದೇವೆ, ಆದರೆ ಮುಂದಿನ ಐದು ವರ್ಷಗಳಲ್ಲಿ ಯೋಗಿ ಬಂದರೆ ನಾವು ಉಳಿಯುವುದಿಲ್ಲ ಎಂದು ಖ್ಯಾತ ಕವಿ ಮುನವ್ವರ್ ರಾಣಾ ಹೇಳಿದ್ದರು. ಸಾಯುವುದು ಹೇಗಿದ್ದರೂ ಇದೆ, ಆದರೆ ಆದರೆ ಶಾಶ್ವತವಾಗಿ ಸಾಯಲು ಬಯಸುವುದಿಲ್ಲ. ಬಿಜೆಪಿ ನಾಯಕರು ಪಶ್ಚಿಮ ಯುಪಿಯಲ್ಲಿ ವಲಸಿಗರನ್ನು ಹುಡುಕುತ್ತಿದ್ದಾರೆ, ಆದರೆ ನಾನು ಓಡಿಹೋಗಲು ಇಲ್ಲಿ ಕುಳಿತಿದ್ದೇನೆ, ನನಗೆ ಯಾರೂ ಸಿಗುತ್ತಿಲ್ಲ ಎಂದಿದ್ದಾರೆ.'

ಅಲ್ಲಾಹು ಬಳಿ ಹೋಗುತ್ತೇನೆ ಎಂದಿದ್ದ ಮುನವ್ವರ್ ರಾಣಾ

ಎಕ್ಸಿಟ್ ಪೋಲ್‌ಗಳು ಭಾರತೀಯ ಜನತಾ ಪಕ್ಷದ ಸರ್ಕಾರ ಮತ್ತೆ ರಚನೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅದರ ನಂತರ ಏಷ್ಯಾನೆಟ್ ತಂಡವು ಖ್ಯಾತ ಕವಿ ಮುನವ್ವರ್ ರಾಣಾ ಅವರೊಂದಿಗಿನ ಸಂವಾದದ ಸಮಯದಲ್ಲಿ, ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿಯಾದರೆ ನೀವು ಎಲ್ಲಿಗೆ ಹೋಗುತ್ತೀರಿ? ಎಂದು ಪ್ರಶ್ನಿಸಿತ್ತು. ಈ ಪ್ರಶ್ನೆಗೆ ಉತ್ತರವಾಗಿ, ತಾನೆಲ್ಲಿಗೆ ಹೋಗುತ್ತೇನೆ ಎಂದು ಹೇಳಲಾಗುವುದಿಲ್ಲ. ಇದೀಗ ನನ್ನ ಆರೋಗ್ಯ ಕೆಟ್ಟಿದೆ, ನಾನು ಅಲ್ಲಾನ ಸ್ಥಳಕ್ಕೆ ಹೋಗುತ್ತೇನೆ ಎಂದು ತೋರುತ್ತದೆ ಎಂದಿದ್ದರು

ಯುಪಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕರು ಪ್ರತಿಪಕ್ಷಗಳ ಬಗ್ಗೆ ಹೇಳಿಕೆ ನೀಡಲು ಹಿಂಜರಿಯುವುದಿಲ್ಲ, ಹೀಗಿರುವಾಗಲೇ ವಿವಾದಗಳಿಂದಲೇ ಸದ್ದು ಮಾಡುತ್ತಿದ್ದ ಖ್ಯಾತ ಕವಿ ಮುನವ್ವರ್ ರಾಣಾ ಯುಪಿ ವಿಧಾನಸಭಾ ಚುನಾವಣೆಗೂ ಮುನ್ನವೇ ಸಿಎಂ ಯೋಗಿ ಆದಿತ್ಯನಾಥ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. . ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮತ್ತೆ ಮುಖ್ಯಮಂತ್ರಿಯಾದರೆ ಯುಪಿ ತೊರೆಯುವುದಾಗಿ ಹೇಳಿದ್ದರು. ಯೋಗಿ ಆದಿತ್ಯನಾಥ್ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವುದಾಗಿ ರಾಣಾ ಹೇಳಿದ್ದು ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗಿದೆ.

ಇದು ಬಿಜೆಪಿಗೆ ನಾಚಿಕೆಗೇಡಿನ ಸಂಗತಿ ಎಂದರು

ಕವಿ ಮುನವ್ವರ್ ರಾಣಾ ಅವರು ಬಿಜೆಪಿ ನನಗೆ ಕಿರುಕುಳ ನೀಡಿಲ್ಲ, ಆದರೆ ಯೋಗಿ ತನ್ನ ವಿರುದ್ಧ ಕೇಸ್ ಮಾಡಿ, ರೇಡ್ ಮಾಡಿದ್ದಾರೆ, ಮಗನಿಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಸಿದ್ಧಾಂತಗಳು ಪರಸ್ಪರ ಘರ್ಷಣೆಯಾಗುತ್ತವೆ, ಆದರೆ ಇಲ್ಲಿ ದ್ವೇಷದ ಮೂಲಕ, ಸಾಮಾನ್ಯ ಮತ್ತು ಬಡವರನ್ನು ಮಾಫಿಯಾದಂತೆ ನಡೆಸಿಕೊಳ್ಳಲಾಗುತ್ತದೆ. ಇದು ನಾಚಿಕೆಗೇಡಿನ ಸಂಗತಿ. ಇದರೊಂದಿಗೆ ಬಿಜೆಪಿಗೂ ಇದು ನಾಚಿಕೆಗೇಡಿನ ಸಂಗತಿ ಎಂದು ಕಮಲಪಾಳಯವನ್ನು ಅವರು ದೂರಿದ್ದರು. 

click me!