ಲವ್ ಜಿಹಾದ್ ನಿಷೇಧಕ್ಕೆ ಸಿಎಂ ಯೋಗಿ ಸುಗ್ರೀವಾಜ್ಞೆ?

Published : Sep 19, 2020, 07:43 AM ISTUpdated : Sep 19, 2020, 09:58 AM IST
ಲವ್ ಜಿಹಾದ್ ನಿಷೇಧಕ್ಕೆ ಸಿಎಂ ಯೋಗಿ ಸುಗ್ರೀವಾಜ್ಞೆ?

ಸಾರಾಂಶ

ಲವ್‌ ಜಿಹಾದ್‌ ನಿಷೇ​ಧಕ್ಕೆ ಸಿಎಂ ಯೋಗಿ ಸುಗ್ರೀ​ವಾಜ್ಞೆ ಚಿಂತ​ನೆ!| ಕಠಿಣ ನಿಯಮ ರೂಪಿ​ಸು​ವಂತೆ ಯೋಗಿ ಸೂಚ​ನೆ

ಲಖ​ನೌ(ಸೆ.19): ಪ್ರೀತಿ ಪ್ರೇಮದ ಹೆಸ​ರಿ​ನಲ್ಲಿ ಮತಾಂತ​ರಕ್ಕೆ ಪ್ರಚೋ​ದಿ​ಸು​ವ ‘ಲವ್‌ ಜಿಹಾದ್‌’ ನಿಷೇ​ಧಿಸಿ ಸುಗ್ರೀ​ವಾಜ್ಞೆ ಹೊರ​ಡಿ​ಸ​ಲು ಉತ್ತರ ಪ್ರದೇ​ಶದ ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ಚಿಂತನೆ ನಡೆ​ಸಿ​ದ್ದಾರೆ.

ಯೋಗಿ ರಾಜ್ಯದಲ್ಲಿ ಚುನಾವಣಾ ಸ್ಪರ್ಧಿಗಳಿಗೆ ಎರಡು ಷರತ್ತು, ಅಶಿಕ್ಷಿತರಿಗಿಲ್ಲ ಟಿಕೆಟ್!

‘ಲವ್‌ ಜಿಹಾದ್‌ ವಿರುದ್ಧ ಕಠಿಣ ನಿಯ​ಮ​ಗ​ಳನ್ನು ಸಿದ್ಧ​ಪ​ಡಿಸಿ. ಅಗತ್ಯ ಬಿದ್ದರೆ ಸುಗ್ರೀ​ವಾಜ್ಞೆ ಹೊರ​ಡಿ​ಸಲು ಸಿದ್ಧತೆ ಮಾಡಿ​ಕೊ​ಳ್ಳಿ’ ಎಂದು ಆದಿ​ತ್ಯ​ನಾಥ್‌ ಸೂಚಿ​ಸಿ​ದ್ದಾರೆ ಎಂದು ಅಧಿ​ಕಾ​ರಿಯೊ​ಬ್ಬರು ತಿಳಿ​ಸಿ​ದ್ದಾ​ರೆ.

‘ಪ್ರೀತಿ-ಪ್ರೇಮದ ನಾಟ​ಕ​ವಾಡಿ ಯುವ​ತಿ​ಯ​ರನ್ನು ಕೆಲ​ವರು ಮದುವೆ ಆಗು​ತ್ತಾರೆ. ನಂತರ ಬಲ​ವಂತ​ವಾಗಿ ಯುವ​ತಿ​ಯ​ರನ್ನು ಮತಾಂತ​ರಿ​ಸು​ತ್ತಾರೆ ಹಾಗೂ ದೌರ್ಜ​ನ್ಯ​ವೆ​ಸ​ಗು​ತ್ತಾರೆ. ಇಂಥ ಪ್ರಕ​ರ​ಣ​ಗಳಲ್ಲಿ ಕೊಲೆ​ಗಳೂ ನಡೆ​ದಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವ ಉದ್ದೇ​ಶ​ದಿಂದ ನಿಯ​ಮ​ಗ​ಳನ್ನು ಸಿದ್ಧ​ಪ​ಡಿ​ಸು​ವಂತೆ ಮುಖ್ಯ​ಮಂತ್ರಿ​ಗಳು ಸೂಚಿ​ಸಿ​ದ್ದಾರೆ. ಅಗ​ತ್ಯ​ಬಿ​ದ್ದರೆ ಸುಗ್ರೀ​ವಾಜ್ಞೆ ಹೊರ​ಡಿ​ಸ​ಲಾ​ಗು​ತ್ತ​ದೆ’ ಎಂದು ಅವರು ಹೇಳಿ​ದ್ದಾ​ರೆ.

ಲವ್ ಜಿಹಾದ್ ತಡೆಯಲು ಸಿಎಂ ಯೋಗಿ ದಿಟ್ಟ ಆದೇಶ!

ಕಳೆದ ವರ್ಷ ಉತ್ತರ ಪ್ರದೇಶ ಕಾನೂನು ಆಯೋ​ಗ​ವು, ಬಲ​ವಂತದ ಮತಾಂತರ ನಿಷೇ​ಧಕ್ಕೆ ಹೊಸ ಕಾನೂನು ರೂಪಿ​ಸ​ಬೇಕು ಎಂದು ಸರ್ಕಾ​ರಕ್ಕೆ ಶಿಫಾ​ರಸು ಮಾಡಿ​ತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ
India Latest News Live: ಅಮೆರಿಕ ತೆರಿಗೆ ದಾಳಿಗೆ ಒಳಗಾದ ದೇಶಗಳಿಂದ ಮಾದರಿಯಾದ ಚೀನಾ; ಟ್ರಂಪ್‌ಗೆ ಶಾಕ್ ನೀಡಿ ದಾಖಲೆ ಬರೆದ ಡ್ರ್ಯಾಗನ್