ಆರೈಕೆಯಲ್ಲಿದ್ದ ಮಗು ಸಾವು; ಯುಎಇಯಲ್ಲಿ ಮರಣದಂಡನೆ ಪಡೆದಿದ್ದ ಭಾರತೀಯ ಮಹಿಳೆಗೆ ಗುಂಡು ಹಾರಿಸಿ ಶಿಕ್ಷೆ!

Published : Mar 03, 2025, 06:05 PM ISTUpdated : Mar 03, 2025, 06:36 PM IST
ಆರೈಕೆಯಲ್ಲಿದ್ದ ಮಗು ಸಾವು; ಯುಎಇಯಲ್ಲಿ ಮರಣದಂಡನೆ ಪಡೆದಿದ್ದ ಭಾರತೀಯ ಮಹಿಳೆಗೆ ಗುಂಡು ಹಾರಿಸಿ ಶಿಕ್ಷೆ!

ಸಾರಾಂಶ

ಉತ್ತರ ಪ್ರದೇಶದ ಶಹಜಾದಿ ಖಾನ್ ಎಂಬ ಮಹಿಳೆಗೆ ಯುಎಇಯಲ್ಲಿ ಮರಣದಂಡನೆ ವಿಧಿಸಲಾಗಿದೆ. ಲಸಿಕೆ ಹಾಕಿದ ಬಳಿಕ ಮಗು ಸಾವನ್ನಪ್ಪಿದ ಪ್ರಕರಣದಲ್ಲಿ ಈ ಶಿಕ್ಷೆ ನೀಡಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ನವದೆಹಲಿ (ಮಾ.3): ಉತ್ತರ ಪ್ರದೇಶದ ಬಂಡಾದ 33 ವರ್ಷದ ಮಹಿಳೆ ಶಹಜಾದಿ ಖಾನ್ ಅವರಿಗೆ ಯುಎಇಯಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿ ಮಾಡಲಾಗಿದೆ. ಫೆ. 15ರಂದೇ ಆಕೆಗೆ ಶಿಕ್ಷೆಯನ್ನು ಜಾರಿ ಮಾಡಲಾಗಿದೆ ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. ಲಸಿಕೆ ಹಾಕಿದ ನಂತರ ಅವರ ಆರೈಕೆಯಲ್ಲಿ ನಾಲ್ಕು ತಿಂಗಳ ಮಗು ಸಾವನ್ನಪ್ಪಿತ್ತು. ಈ ಪ್ರಕರಣದಲ್ಲಿ ಅವರಿಗೆ  ಮರಣದಂಡನೆ ಶಿಕ್ಷೆಯನ್ನು ಯುಎಇ ಅಗ್ರ ಕೋರ್ಟ್‌ ನೀಡಿತ್ತು. ಅವರಿಗೆ ಫೆ.15 ರಂದು ಗುಂಡು ಹಾರಿಸಿ    ಶಿಕ್ಷೆ ಜಾರಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಶಹ್ಜಾದಿ ಖಾನ್ ಅವರನ್ನು, ತಮ್ಮ ಜತೆಗಿದ್ದ ನಾಲ್ಕು ತಿಂಗಳ ಮಗುವಿನ ಮರಣಕ್ಕಾಗಿ ದೋಷಾರೋಪಣೆ ಮಾಡಲಾಗಿತ್ತು. ಡಿಸೆಂಬರ್ 2022ರಲ್ಲಿ ಈ ಘಟನೆ ಸಂಭವಿಸಿದಾಗ, ಅವರು ಅಬು ಧಾಬಿಯಲ್ಲಿ ಮಕ್ಕಳ ಆರೈಕೆ ಕೆಲಸ ಮಾಡುತ್ತಿದ್ದರು. ಮಗುವು ನಿಯಮಿತ ಲಸಿಕೆ ಪಡೆದುಕೊಂಡ ಬಳಿಕ ಸಾವನ್ನಪ್ಪಿದ್ದು, ಈ ಮರಣಕ್ಕೆ ಕಾರಣರಾದ ಆರೋಪದಲ್ಲಿ ಅವರನ್ನು ದೋಷಿ ಎಂದು ಗುರುತಿಸಿ ಶಿಕ್ಷೆ ನೀಡಲಾಗಿತ್ತು.

ಶನಿವಾರ, ಶಹ್ಜಾದಿ ಖಾನ್ ಅವರ ತಂದೆ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಅವರ ಈಗಿನ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಬಂಧಿತ ಸರ್ಕಾರಿ ಅಧಿಕಾರಿಗಳಿಗೆ ಪ್ರಕಟಣೆ ಹೊರಡಿಸಲು ನಿರ್ದೇಶನ ನೀಡುವಂತೆ ಮನವಿ ಮಾಡಿದರು.

ಪ್ರೀತಿಸಿ ಮದುವೆಯಾದ ಜೋಡಿ ಹತ್ಯೆಗೈದ 4 ಜನರಿಗೆ ಮರಣದಂಡನೆ ಕೊಟ್ಟ ಕೋರ್ಟ್!

ಸರ್ಕಾರದ ಪ್ರಕಾರ, ಉತ್ತರ ಪ್ರದೇಶದ ಬಂಡಾ ಜಿಲ್ಲೆಗೆ ಸೇರಿದ ಶಹ್ಜಾದಿ ಅವರನ್ನು ಫೆಬ್ರವರಿ 15ರಂದು ಗುಂಡು ಹಾರಿಸಿ ಶಿಕ್ಷೆ ಜಾರಿ ಮಾಡಲಾಗಿದ್ದು, ಅವರ ಅಂತ್ಯಸಂಸ್ಕಾರವನ್ನು ಮಾರ್ಚ್ 5 ರಂದು ನಡೆಸಲು ಉದ್ದೇಶಿಸಲಾಗಿದೆ. ಫೆಬ್ರವರಿ 28 ರಂದು ಈ ವಿಷಯದ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮಾಹಿತಿ ಲಭ್ಯವಾಗಿದೆ ಎಂದು ಹೈಕೋರ್ಟ್‌ಗೆ ತಿಳಿಸಲಾಗಿದೆ.

 

ಕೇರಳದ ಯುವತಿ ಗ್ರೀಷ್ಮಾಗೆ ಗಲ್ಲು ಶಿಕ್ಷೆ ಬರೆದ ಬಳಿಕ ಜಡ್ಜ್ ಪೆನ್ನಿನ ನಿಬ್ ಮುರಿದದ್ದೇಕೆ?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..