350 Kg ಗಾಂಜಾ ಜೊತೆ ಸಿಕ್ಕಿಬಿದ್ದವನಿಗೆ ಜಾಮೀನು

Published : Oct 28, 2021, 02:24 PM IST
350 Kg ಗಾಂಜಾ ಜೊತೆ ಸಿಕ್ಕಿಬಿದ್ದವನಿಗೆ ಜಾಮೀನು

ಸಾರಾಂಶ

350 Kg ಗಾಂಜಾ(350 Kg Ganja) ಜೊತೆ ಸಿಕ್ಕಿಬಿದ್ದಾತನಿಗೆ ಜಾಮೀನು(Bail) ಸಿಕ್ಕಿಬಿದ್ದಾತನಿಗೆ ಜಾಮೀನು ನೀಡಿದ ಅಲಹಬಾದ್ ಹೈಕೋರ್ಟ್(Allahabad HC)

ಅಲಹಾಬಾದ್(ಅ.28): ದೇಶದಲ್ಲಿ ಭಾರೀ ಸುದ್ದಿಯಾಗಿದ್ದ 350 ಕೆಜಿ ಗಾಂಜಾ(Ganja) ಪ್ರಕರಣದಲ್ಲಿ ವ್ಯಕ್ತಿಗೆ ಜಾಮೀನು ನೀಡಲಾಗಿದೆ. ಸುಮಾರು 350 ಕೆಜಿ ಗಾಂಜಾವನ್ನು ಇಟ್ಟುಕೊಂಡಿದ್ದ ಆರೋಪದ ಮೇಲೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಬಂಧಿಸಲ್ಪಟ್ಟಿದ್ದ ಅಯೋಧ್ಯೆಯ ವ್ಯಕ್ತಿಗೆ ಅಲಹಾಬಾದ್(Allahabad HC)ಹೈಕೋರ್ಟ್ ಜಾಮೀನು ನೀಡಿದೆ.

2019 ರ ಜನವರಿಯಲ್ಲಿ ಎನ್‌ಡಿಪಿಎಸ್(NDPS) ಕಾಯಿದೆಯ ಕಟ್ಟುನಿಟ್ಟಿನ ನಿಬಂಧನೆಗಳ ಅಡಿಯಲ್ಲಿ ಅಯೋಧ್ಯೆ ನಿವಾಸಿ ಕಲೀಮ್‌ ವಿರುದ್ಧ ದೂರು ದಾಖಲಾಗಿತ್ತು. ಈಗ ಹೈಕೋರ್ಟ್‌ನ ಲಕ್ನೋ ಪೀಠವು ಕಲೀಮ್‌ಗೆ ಜಾಮೀನು ಮಂಜೂರು ಮಾಡಿದೆ. ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕು ಒಳಗೊಂಡ ಭಾರತದ ಸಂವಿಧಾನದ 21 ನೇ ವಿಧಿಯ ಪ್ರಕಾರ ಜಾಮೀನಿಗೆ ಸೂಕ್ತ ಎಂದು ತೀರ್ಪು ನೀಡಿತು.

ಅಕ್ಟೋಬರ್ 21 ರಂದು ಆರೋಪಿಗಳಿಗೆ ಜಾಮೀನು ನೀಡುವಾಗ, ನ್ಯಾಯಮೂರ್ತಿ ಸಿದ್ಧಾರ್ಥ್ ಅವರ ಪೀಠವು ಆರೋಪಗಳ ಸ್ವರೂಪ ಮತ್ತು ಅದಕ್ಕೆ ಪೂರಕವಾದ ಸಾಕ್ಷ್ಯದ ಸ್ವರೂಪದ ದೃಷ್ಟಿಯಿಂದ ಆರೋಪಿಯನ್ನು ಜಾಮೀನಿನ ಮೇಲೆ ವಿಸ್ತರಿಸುವ ಮೌಲ್ಯದ ಪ್ರಕರಣವನ್ನು ಪರಿಗಣಿಸಿತು.

 

ಆರೋಪಿಗಳು ಜನವರಿ 18, 2019 ರಿಂದ ಜೈಲಿನಲ್ಲಿದ್ದ. ಎನ್‌ಸಿಬಿಯು(NCB) ಆರೋಪಿಯನ್ನು ಭಾರೀ ಅಕ್ರಮ ಗಾಂಜಾ ಸ್ಟಾಕ್ ಜೊತೆ ಬಂಧಿಸಿತ್ತು. ಆದ್ದರಿಂದ ಆತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಅಯೋಧ್ಯೆ ಜಿಲ್ಲೆಯ ಎನ್‌ಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಎಫ್‌ಐಆರ್ ದಾಖಲಾಗಿದೆ.

ಆರೋಪಿಯು ತನ್ನ ಜಾಮೀನು ಅರ್ಜಿಯಲ್ಲಿ, ಅಲ್ಲಿ ಯಾರೂ ಸ್ವತಂತ್ರ ಸಾಕ್ಷಿಗಳಿರಲಿಲ್ಲ. ತಾನು ನಿರಪರಾಧಿ ಎಂದು ಪ್ರತಿಪಾದಿಸಿದ್ದಾನೆ. 
ಡ್ರಗ್ಸ್ ಸೀಜ್ ಮಾಡಿರುವುದಕ್ಕೆ ಯಾವುದೇ ಸ್ವತಂತ್ರ ಸಾಕ್ಷಿಗಳಿಲ್ಲ ಎಂದು ಅವರು ಜಾಮೀನು ಅರ್ಜಿಯಲ್ಲಿ ತಿಳಿಸಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾದರೆ, ಜಾಮೀನಿನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಅವರು ಪೀಠಕ್ಕೆ ಭರವಸೆ ನೀಡಿದ್ದಾರೆ. ಜಾಮೀನು ಅರ್ಜಿಯನ್ನು ವಿರೋಧಿಸಿದ ಎನ್‌ಸಿಬಿ ವಕೀಲರು, ಆರೋಪಿಗಳ ಮೇಲೆ ಅಂತಹ ಭಾರೀ ನಿಷಿದ್ಧ ಗಾಂಜಾವನ್ನು ಹೋಗಿ ಇಡುವ ಯಾವುದೇ ಸಂದರ್ಭವಿರಲಿಲ್ಲ ಎಂದು ವಾದಿಸಿದ್ದಾರೆ. ಪ್ರಕರಣದ ಪೂರ್ವ-ವಿಚಾರಣಾ ಹಂತದಲ್ಲಿ ಆರೋಪಿಯ ಮುಗ್ಧತೆಯನ್ನು ನಿರ್ಣಯಿಸಲು ಸಾಧ್ಯವಿಲ್ಲ ಎಂದು ಎನ್‌ಸಿಬಿ ವಕೀಲರು ವಾದಿಸಿದರು.

ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ, ಅವನು ಇದೇ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾನೆ ಎಂದು ಎನ್‌ಸಿಬಿ ವಕೀಲರು ವಾದಿಸಿದ್ದರು. ಆದರೂ ಪೀಠವು ಜಾಮೀನು ಅರ್ಜಿಯನ್ನು ಅಂಗೀಕರಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!