'ಮಿಸ್ಟರ್ ಮಿನಿಸ್ಟರ್,  ಇದು ಪ್ರಧಾನಿಯ ಕರ್ತವ್ಯ, ಪುಕ್ಕಟೆ ಪ್ರಚಾರ ಬದಿಗಿಡಿ'

Published : Apr 26, 2021, 03:14 PM IST
'ಮಿಸ್ಟರ್ ಮಿನಿಸ್ಟರ್,  ಇದು ಪ್ರಧಾನಿಯ ಕರ್ತವ್ಯ, ಪುಕ್ಕಟೆ ಪ್ರಚಾರ ಬದಿಗಿಡಿ'

ಸಾರಾಂಶ

ದೇಶದಲ್ಲಿ ಕೊರೋನಾ ಎರಡನೇ ಅಲೆ ಅಬ್ಬರ/ ರೈಲ್ವೆ ಸಚಿವ ಪಿಯೂಶ್ ಗೋಯಲ್ ಗೆ ಅದ್ಭುತ ಸಲಹೆ/ ಪ್ರಧಾನ ಮಂತ್ರಿಗಳು ಅವರ ಕರ್ತವ್ಯ ಮಾಡಿದ್ದಾರೆ/  ಈ ರೀತಿ ಹೊಗಳುತ್ತ ಸಾಗಿದರೆ  ಅಂತ್ಯ ಎಲ್ಲಿ?

ನವದೆಹಲಿ (ಏ. 26)  ಕೊರೋನಾ  ಎರಡನೇ ಅಲೆ ಇಡೀ ದೇಶವನ್ನು ವ್ಯಾಪಿಸುತ್ತಿದೆ.  ಈ  ನಡುವೆ ಟ್ವಿಟರ್ ನಲ್ಲಿ ಸಣ್ಣ ಮಟ್ಟದ ಸಲಹಾ ಸಮರವೂ ನಡೆದಿದೆ.  ಕೇಂದ್ರ ರೈಲ್ವೆ ಸಚಿವರಿಗೆ ಅದ್ಭುತ ಸಲಹೆ ನೀಡಲಾಗಿದೆ.

ಟ್ವೀಟ್ ಮಾಡಿದ್ದ ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ , ಆಕ್ಸಿಜನ್  ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳ ಮೇಲಿನ ಕಸ್ಟಮ್ ಡ್ಯೂಟಿ ಮತ್ತು ಸೆಸ್ ತೆಗೆದು ಹಾಕಿದ ಪ್ರಧಾನಿ ಮೋದಿ ಅವರಿಗೆ ಧನ್ಯವಾದ. ಕೊರೋನಾ ಲಸಿಕೆಗಳು ಸಹ ಕಸ್ಟಮ್ ಡ್ಯೂಟಿಯಿಂದ ಮುಕ್ತವಾಗಿವೆ.  ಇದು ಕಡಿಮೆ ದರದಲ್ಲಿ ಎಲ್ಲ ಕಡೆ ಸಿಗುವಂತೆ ಆಗಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದ್ದರು. 

ಮತ್ತೆ ಲಾಕ್ ಡೌನ್, ಯಾವುದಕ್ಕೆ ಮಾತ್ರ ಅವಕಾಶ?

ಆದರೆ ಇದಕ್ಕೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ ಮೇಜರ್ ಜನರಲ್ ಡಾ. ಯಶ್ ಮೋರ್,  ಇದು ಅವರ ಕರ್ತವ್ಯ ಮಿಸ್ಟರ್ ಮಿನಿಸ್ಟರ್, ಎಲ್ಲ ಸಂಸ್ಥೆಗಳು ಈ ರೀತಿ ಹೊಗಳುವುದು, ಪೂಜೆ ಮಾಡುವುದನ್ನು ಆರಂಭಿಸಿದರೆ ಇದಕ್ಕೊಂದು ಅಂತ್ಯ ಇದೆಯೇ?  ಪ್ರಚಾರವನ್ನು ಬದಿಗಿಟ್ಟು ಕೆಲಸದಲ್ಲಿ ತೊಡಗಿಕೊಳ್ಳಿ.  ಈ ರೀತಿ ವ್ಯಕ್ತಿ ಹೊಗಳಿಕೆ ನೆಗೆಟಿವ್ ಪರಿಣಾಮ ಉಂಟುಮಾಡಬಲ್ಲದು.  ದೇಶವೇ ವಿಪತ್ತು ಎದುರಿಸುತ್ತಿರುವಾಗ ಇದೆಲ್ಲ ಬೇಡ.. ದಯವಿಟ್ಟು ನನ್ನ ಸಲಹೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ, ಎಂದು ಸಲಹೆ ಕೊಟ್ಟಿದ್ದಾರೆ. 

ಆಕ್ಸಿನಕ್ ಗೆ ಸಂಬಂಧಿಸಿದ ವಸ್ತುಗಳು ಸೆಸ್ ನಿಂದ ಮುಕ್ತವಾದವು ಎನ್ನುವುದು ಒಂದು ಸುದ್ದಿಯಾದರೆ ರಾಷ್ಟ್ರೀಯ ಪವಿಪತ್ತು ಸಂದರ್ಭದಲ್ಲಿ ಅಧಿಕಾರದಲ್ಲಿ ಇರುವವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮೇಜರ್ ತಿಳಿಸಿಕೊಟ್ಟಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು