Bhagirath Choudhary: ಸೌತೆಕಾಯಿಗೆ ₹99 ಲಕ್ಷ ಸಬ್ಸಿಡಿ ಪಡೆದ ಸಚಿವನಿಂದ ಹಣ ವಾಪಸ್‌!

Kannadaprabha News   | Kannada Prabha
Published : Jul 29, 2026, 05:35 AM IST
Union Minister Bhagirath Choudhary who received a Rs 99 lakh subsidy for cucumbers returns the money rav

ಸಾರಾಂಶ

ತಮ್ಮ ರಾಜಸ್ಥಾನದ ಜಮೀನಿನಲ್ಲಿ ಸೌತೆಕಾಯಿ ಬೆಳೆಯಲೆಂದು ತಮ್ಮದೇ ಸಚಿವಾಲಯದ ಒಂದು ಯೋಜನೆಯಡಿ 99 ಲಕ್ಷ ರು. ಸಬ್ಸಿಡಿ ಪಡೆದಿದ್ದ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ಕೇಂದ್ರ ರಾಜ್ಯ ಸಚಿವ ಭಗೀರಥ್ ಚೌಧರಿ, ಇದೀಗ ಅಷ್ಟೂ ಹಣ ಮರಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

ನವದೆಹಲಿ (ಜು.29): ತಮ್ಮ ರಾಜಸ್ಥಾನದ ಜಮೀನಿನಲ್ಲಿ ಸೌತೆಕಾಯಿ ಬೆಳೆಯಲೆಂದು ತಮ್ಮದೇ ಸಚಿವಾಲಯದ ಒಂದು ಯೋಜನೆಯಡಿ 99 ಲಕ್ಷ ರು. ಸಬ್ಸಿಡಿ ಪಡೆದಿದ್ದ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ಕೇಂದ್ರ ರಾಜ್ಯ ಸಚಿವ ಭಗೀರಥ್ ಚೌಧರಿ, ಇದೀಗ ಅಷ್ಟೂ ಹಣವನ್ನು ಮರಳಿಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರವು ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.

ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ಅವರು ಕೇಳಿದ್ದ ಪ್ರಶ್ನೆಗೆ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ ರಾಮನಾಥ್‌ ಠಾಕೂರ್‌ ಲಿಖಿತ ರೂಪದಲ್ಲಿ ಉತ್ತರಿಸಿದ್ದಾರೆ. ‘ಸ್ಕೀಂಗೆ ಸಂಬಂಧಿಸಿದ ಬ್ಯಾಂಕ್‌ ಖಾತೆಗೆ ಹಣವನ್ನು ಮರಳಿಸಿದ್ದಾಗಿ ಚೌಧರಿ ತಿಳಿಸಿದ್ದಾರೆ. ಆ ಮೊತ್ತವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಗೆ(ಎನ್‌ಎಚ್‌ಬಿ) ವರ್ಗಾಯಿಸುವಂತೆ ಬ್ಯಾಂಕ್‌ಗೆ ಸೂಚಿಸಲಾಗಿದೆ’ ಎಂದು ತಿಳಿಸಲಾಗಿದೆ.

ವಾಣಿಜ್ಯ ತೋಟಗಾರಿಕೆಯ ಅಭಿವೃದ್ಧಿ ಯೋಜನೆಯಡಿ ಸಲ್ಲಿಕೆಯಾಗಿದ್ದ 467 ಅರ್ಜಿಗಳಿಗೆ, 2025ರಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಅನುಮೋದನೆ ನೀಡಿತ್ತು. ಇದರಲ್ಲಿ ಚೌಧರಿಯವರ 16,592 ಚದರ ಮೀ.ನ ಜಮೀನೂ ಸೇರಿತ್ತು. ಇದಕ್ಕೆ, ‘ನಾನೂ ರೈತ’ ಎಂಬ ಸ್ಪಷ್ಟನೆ ಅವರಿಂದ ಬಂದಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಫ್‌ಐಆರ್‌ ಕುರಿತಾದ ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಒಪ್ಪಲ್ಲ ಎಂದ ಸಿಜೆಪಿ!
ಬೆಂಗಳೂರು ಸೇರಿ ಮೆಟ್ರೋ ಸಿಟಿಗಳನ್ನು ಹಿಂದಿಕ್ಕಿದ ಸಣ್ಣ ಪಟ್ಟಣಗಳು: ಹೆಚ್ಚು ವೇತನ ನೀಡುವುದರಲ್ಲಿ ಈ ನಗರವೇ ಟಾಪ್!