ಪುದು​ಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ: ಕೇಂದ್ರ ಘೋಷಣೆ!

Published : Feb 25, 2021, 09:15 AM ISTUpdated : Feb 25, 2021, 09:32 AM IST
ಪುದು​ಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ: ಕೇಂದ್ರ ಘೋಷಣೆ!

ಸಾರಾಂಶ

ಕಾಂಗ್ರೆಸ್‌ ಮತ್ತು ಅದರ ಮೈತ್ರಿ ಪಕ್ಷ​ಗಳ ಶಾಸ​ಕರ ರಾಜೀ​ನಾಮೆ ಪರ್ವ​ದಿಂದ ಪುದು​ಚೇರಿ ಮಾಜಿ ಮುಖ್ಯ​ಮಂತ್ರಿ ನಾರಾ​ಯಣ ಸಾಮಿ ಸರ್ಕಾರ ಪತ​ನ| ಪುದು​ಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ: ಕೇಂದ್ರ ಘೋಷಣೆ

ನವ​ದೆ​ಹ​ಲಿ(ಫೆ.25): ಕಾಂಗ್ರೆಸ್‌ ಮತ್ತು ಅದರ ಮೈತ್ರಿ ಪಕ್ಷ​ಗಳ ಶಾಸ​ಕರ ರಾಜೀ​ನಾಮೆ ಪರ್ವ​ದಿಂದ ಪುದು​ಚೇರಿ ಮಾಜಿ ಮುಖ್ಯ​ಮಂತ್ರಿ ನಾರಾ​ಯಣ ಸಾಮಿ ಸರ್ಕಾರ ಪತ​ನದ ಬೆನ್ನಲ್ಲೇ, ಕೇಂದ್ರಾ​ಡ​ಳಿತ ಪ್ರದೇ​ಶ​ವಾದ ಪುದು​ಚೇರಿ ಮೇಲೆ ಕೇಂದ್ರ ಸರ್ಕಾರ ರಾಷ್ಟ್ರ​ಪತಿ ಆಳ್ವಿಕೆ ಜಾರಿ ಮಾಡಿದೆ.

ಕಾಂಗ್ರೆಸ್‌ ನೇತೃ​ತ್ವದ ಮೈತ್ರಿ ಸರ್ಕಾ​ರದ ಪತ​ನದ ಬಳಿಕ ಯಾವೊಂದು ಪಕ್ಷವೂ ಸರ್ಕಾರ ರಚ​ನೆಗೆ ಮುಂದೆ ಬಂದಿಲ್ಲ. ಹೀಗಾಗಿ ಪುದು​ಚೇರಿ ಮೇಲೆ ರಾಷ್ಟ್ರ​ಪತಿ ಆಳ್ವಿಕೆ ಮಾಡ​ಬೇ​ಕೆಂಬ ಅಲ್ಲಿನ ಉಪ ರಾಜ್ಯ​ಪಾಲೆ ತಮಿ​ಳಿಸೈ ಸೌಂದರ​ರಾ​ಜನ್‌ ಅವ​ರು ಕೇಂದ್ರಕ್ಕೆ ಶಿಫಾ​ರಸು ಮಾಡಿ​ದ್ದರು. ಈ ಪ್ರಸ್ತಾ​ವ​ನೆಗೆ ಬುಧ​ವಾರ ಕೇಂದ್ರ ಸಚಿವ ಸಂಪುಟ ಅಂಗೀ​ಕಾರ ನೀಡಿದೆ. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿದ ಕೇಂದ್ರ ಸಚಿವ ಪ್ರಕಾಶ್‌ ಜಾವ​ಡೇ​ಕರ್‌ ಅವರು, ರಾಷ್ಟ್ರ​ಪ​ತಿ​ಗಳ ಅನು​ಮೋ​ದನೆ ಬಳಿಕ ಪುದು​ಚೇರಿ ವಿಧಾ​ನ​ಸ​ಭೆ​ಯನ್ನು ವಿಸ​ರ್ಜಿ​ಸ​ಲಾ​ಗು​ತ್ತದೆ ಎಂದರು.

ತನ್ಮೂ​ಲಕ ನಾರಾ​ಯ​ಣ​ಸಾಮಿ ರಾಜೀ​ನಾಮೆ ಬಳಿಕ ಎಐ​ಎ​ಡಿ​ಎಂಕೆ ಮತ್ತು ಬಿಜೆಪಿ ಮೈತ್ರಿ​ಯಲ್ಲಿ ಸರ್ಕಾರ ರಚ​ನೆ​ಯಾ​ಗ​ಬ​ಹು​ದೆಂಬ ಕುತೂ​ಹ​ಲಕ್ಕೆ ತೆರೆ​ಬಿ​ದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Jharkhan Student Protest: ರಾಹುಲ್ ಗಾಂಧಿಗೆ ಬಿಸಿ ತುಪ್ಪವಾದ ಜಾರ್ಖಂಡ್‌ನ ವಿದ್ಯಾರ್ಥಿ ಹೋರಾಟ!
India Latest News Live: Jharkhan Student Protest - ರಾಹುಲ್ ಗಾಂಧಿಗೆ ಬಿಸಿ ತುಪ್ಪವಾದ ಜಾರ್ಖಂಡ್‌ನ ವಿದ್ಯಾರ್ಥಿ ಹೋರಾಟ!