ಪಾಕಿಸ್ತಾನದ ಹುಟ್ಟಡಗಿಸಿದ್ದ ಬಾಲಾ​ಕೋ​ಟ್‌ ವೈಮಾ​ನಿಕ ದಾಳಿಗೆ 2 ವರ್ಷ!

Published : Feb 27, 2021, 08:32 AM ISTUpdated : Feb 27, 2021, 08:38 AM IST
ಪಾಕಿಸ್ತಾನದ ಹುಟ್ಟಡಗಿಸಿದ್ದ ಬಾಲಾ​ಕೋ​ಟ್‌ ವೈಮಾ​ನಿಕ ದಾಳಿಗೆ 2 ವರ್ಷ!

ಸಾರಾಂಶ

ಬಾಲಾ​ಕೋ​ಟ್‌ ವೈಮಾ​ನಿಕ ದಾಳಿಗೆ 2 ವರ್ಷ| ಪುಲ್ವಾಮ ದಾಳಿಗೆ ಪ್ರತಿ​ಯಾಗಿ ವಾಯು​ಪಡೆ ನಡೆ​ಸಿದ್ದ ದಾಳಿ

ನವ​ದೆ​ಹ​ಲಿ(ಫೆ.27): 40ಕ್ಕೂ ಹೆಚ್ಚು ಯೋಧರ ಬಲಿ​ಪ​ಡೆದ ಪುಲ್ವಾಮಾ ಉಗ್ರರ ದಾಳಿಗೆ ಪ್ರತಿ​ಯಾಗಿ ಭಾರ​ತೀಯ ವಾಯು​ಪ​ಡೆಯು ಪಾಕಿ​ಸ್ತಾ​ನದೊಳಗೆ ನುಗ್ಗಿ ಉಗ್ರರ ಸೇನಾ ನೆಲೆ​ಗ​ಳನ್ನು ಧ್ವಂಸ ಮಾಡಿದ ಬಾಲಾ​ಕೋಟ್‌ ವೈಮಾ​ನಿಕ ದಾಳಿಗೆ ಶುಕ್ರವಾರಕ್ಕೆ 2 ವರ್ಷ ಸಂದಿತು.

ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಹಾಗೂ ಕೇಂದ್ರ ಗೃಹ ಸಚಿವ ರಾಜ​ನಾಥ್‌ ಸಿಂಗ್‌ ಅವರು ಪುಲ್ವಾ​ಮಾ​ದಲ್ಲಿ ಹುತಾ​ತ್ಮ​ರಾದ ಯೋಧ​ರಿಗೆ ಗೌರವ ಸಲ್ಲಿ​ಸಿ​ದರು. ಅಲ್ಲದೆ ಬಾಲಾ​ಕೋಟ್‌ನಲ್ಲಿದ್ದ ಉಗ್ರರ ನೆಲೆ​ಗ​ಳನ್ನು ನೆಲ​ಸ​ಮ​ಗೊ​ಳಿ​ಸಿದ ವಾಯು​ಪ​ಡೆ ಸಾಮ​ರ್ಥ್ಯದ ಬಗ್ಗೆ ಕೊಂಡಾ​ಡಿ​ದರು.

2019ರ ಫೆ.14ರಂದು ಜೈಷ್‌-ಎ-ಮೊಹ​ಮ್ಮದ್‌ ಉಗ್ರ ಸಂಘ​ಟನೆ ಪುಲ್ವಾ​ಮಾ​ದ​ಲ್ಲಿ ಎಸ​ಗಿದ ವಿಧ್ವಂಸಕ ಕೃತ್ಯ​ದಿಂದ 40ಕ್ಕೂ ಹೆಚ್ಚು ಸಿಆ​ರ್‌​ಪಿ​ಎಫ್‌ ಯೋಧರು ಬಲಿ​ಯಾ​ಗಿ​ದ್ದರು. ಇದಕ್ಕೆ ಪ್ರತಿ​ಯಾಗಿ ಫೆ.26ರಂದು ಭಾರ​ತೀಯ ವಾಯು​ಪಡೆ ಪಾಕಿ​ಸ್ತಾ​ನದ ಗಡಿ ನುಗ್ಗಿ ಬಾಲಾ​ಕೋ​ಟ್‌​ನಲ್ಲಿದ್ದ ಉಗ್ರರ ನೆಲೆ​ಗ​ಳನ್ನು ಧ್ವಂಸ ಮಾಡಿತ್ತು.

ಈ ಸಂಬಂಧ ಶುಕ್ರ​ವಾರ ಟ್ವೀಟ್‌ ಮಾಡಿದ ರಕ್ಷಣಾ ಸಚಿವ ರಾಜ​ನಾಥ್‌ ಸಿಂಗ್‌ ಅವರು, ‘ಪಾಕಿ​ಸ್ತಾ​ನದ ಭಾಗ​ದಲ್ಲಿ ನೆಲೆ​ಯೂ​ರಿದ್ದ ಉಗ್ರ​ರನ್ನು ಸಂಹಾರ ಮಾಡಿದ ಬಾಲಾ​ಕೋಟ್‌ ದಾಳಿ ಘಟ​ನೆಗೆ ಇಂದು 2ನೇ ವರ್ಷ. ಭಾರ​ತದ ವಾಯು​ಪ​ಡೆಯ ಧೈರ್ಯ ಮತ್ತು ಸಾಹ​ಸಕ್ಕೆ ನಾನು ಸೆಲ್ಯೂಟ್‌ ಮಾಡು​ತ್ತೇನೆ. ಯಶಸ್ವಿ ಬಾಲಾ​ಕೋಟ್‌ ಕಾರಾರ‍ಯ​ಚ​ರ​ಣೆಯು ಭಯೋ​ತ್ಪಾ​ದನೆ ವಿರು​ದ್ಧದ ಭಾರ​ತದ ಸಾಮ​ರ್ಥ್ಯವನ್ನು ಎತ್ತಿ ತೋರಿದೆ. ನಮ್ಮ ದೇಶದ ರಕ್ಷ​ಣೆ​ಗಾಗಿ ಶ್ರಮಿ​ಸು​ತ್ತಿ​ರುವ ನಮ್ಮ ಸೈನಿ​ಕರ ಬಗ್ಗೆ ಹೆಮ್ಮೆ​ಯಿ​ದೆ’ ಎಂದು ಹೇಳಿ​ದ್ದಾರೆ.

ಈ ಘಟ​ನೆಯು ಭಯೋ​ತ್ಪಾ​ದನೆ ವಿರುದ್ಧ ಹೊಸ ಭಾರ​ತದ ನಿಲುವು ಏನು ಎಂಬ ಸ್ಪಷ್ಟಸಂದೇ​ಶ​ವನ್ನು ರವಾ​ನಿ​ಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡ​ಳಿ​ತ​ದಲ್ಲಿ ದೇಶ ಮತ್ತು ಯೋಧರು ಸುರ​ಕ್ಷಿ​ತ​ವಾ​ಗಿ​ದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿ​ದ್ದಾರೆ. ಅಲ್ಲದೆ ಪುಲ್ವಾಮಾ ದಾಳಿ​ಯಲ್ಲಿ ಹುತಾ​ತ್ಮ​ರಾದ ಯೋಧ​ರಿಗೂ ಶಾ ಗೌರವ ನಮನ ಸಲ್ಲಿ​ಸಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Mobile Tower Stolen: ಮೊಬೈಲ್‌ ಅಲ್ರೀ.. 40 ಅಡಿ ಟವರ್‌ ಕದ್ದ ಕಳ್ಳರು! ಖಾಲಿ ಜಾಗ ನೋಡಿ ಎಲ್ರೂ ಕಂಗಾಲು!
demographic changes: ಗಡಿ ಪ್ರದೇಶಗಳಿಗೆ ಭೇಟಿನೀಡಿ ಜನಸಂಖ್ಯಾ ಬದಲು ಪರಿಶೀಲಿಸಲು ಅಮಿತ್ ಶಾ ಮಹತ್ವದ ಆದೇಶ!