'ಕೃಷಿ ಕಾಯ್ದೆಗಳ ಪರಿಣಾಮ ತಿಳಿಯಲು 2 ವರ್ಷ ಕಾಯಿರಿ!'

Published : Dec 28, 2020, 09:25 AM ISTUpdated : Dec 28, 2020, 09:45 AM IST
'ಕೃಷಿ ಕಾಯ್ದೆಗಳ ಪರಿಣಾಮ ತಿಳಿಯಲು 2 ವರ್ಷ ಕಾಯಿರಿ!'

ಸಾರಾಂಶ

ಕೃಷಿ ಕಾಯ್ದೆಗಳ ಪರಿಣಾಮ ತಿಳಿಯಲು 2 ವರ್ಷ ಕಾಯಿರಿ| 91ರ ಸುಧಾರಣೆ ಫಲಿತಾಂಶ 5 ವರ್ಷ ಬಳಿಕ ಗೊತ್ತಾಗಿತ್ತು|  ಹೀಗಾಗಿ ಈಗ 2 ವರ್ಷವಾದರೂ ಕಾಯಬೇಕು: ರಾಜನಾಥ್‌

 

ಶಿಮ್ಲಾ(ಡಿ.28): 1991ರಲ್ಲಿ ಅಂದಿನ ವಿತ್ತ ಸಚಿವ ಮನಮೋಹನ ಸಿಂಗ್‌ ಹಾಗೂ ನಂತರ ಅಧಿಕಾರಕ್ಕೆ ಬಂದ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣಾ ಕ್ರಮಗಳು ಧನಾತ್ಮಕ ಪರಿಣಾಮ ಬೀರಲು 4-5 ವರ್ಷ ಬೇಕಾಯಿತು. ಹೀಗಾಗಿ ಮೋದಿ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ಧನಾತ್ಮಕ ಪರಿಣಾಮ ಬೀರಲು ರೈತರು 2 ವರ್ಷ ಕಾಯಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮನವಿ ಮಾಡಿದ್ದಾರೆ.

ಹಿಮಾಚಲ ಪ್ರದೇಶದ ಜೈರಾಂ ಠಾಕೂರ್‌ ಸರ್ಕಾರದ ಮೊದಲ ವರ್ಷಾಚರಣೆ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ‘1991ರಲ್ಲಿ ಪಿ.ವಿ. ನರಸಿಂಹರಾವ್‌ ಅವಧಿಯಲ್ಲಿ ವಿತ್ತ ಸಚಿವರಾಗಿದ್ದ ಮನಮೋಹನ ಸಿಂಗ್‌ ಹಾಗೂ ನಂತರದ ಅಟಲ್‌ ಸರ್ಕಾರ ಕೈಗೊಂಡ ಆರ್ಥಿಕ ಸುಧಾರಣೆಗಳು ಪರಿಣಾಮ ಬೀರಲು 4-5 ವರ್ಷ ಬೇಕಾಯಿತು. ಈಗ 4-5 ವರ್ಷ ಕಾಯಲು ಸಾಧ್ಯವಿಲ್ಲ ಎಂದಾದರೆ, ಕನಿಷ್ಠ 2 ವರ್ಷವಾದರೂ ಕಾಯೋಣ. ಆಗ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಕೃಷಿ ಸುಧಾರಣಾ ನೀತಿಗಳ ಧನಾತ್ಮಕ ಪರಿಣಾಮ ಕಾಣಲು ಸಾಧ್ಯ’ ಎಂದರು. ಇದೇ ವೇಳೆ, ‘ಧನಾತ್ಮಕ ಪರಿಣಾಮ ಆಗದೇ ಹೋದರೆ ಮಾತುಕತೆ ಮೂಲಕ ಸುಧಾರಣೆ ಮಾಡಿಕೊಳ್ಳೋಣ’ ಎಂದೂ ಅವರು ರೈತರಿಗೆ ಆಹ್ವಾನ ನೀಡಿದರು.

‘ಕೃಷಿ ಕಾಯ್ದೆಗಳನ್ನು ಜಾರಿ ಮಾಡಲು ಬಿಡಿ. ಇವುಗಳ ಪರಿಣಾಮದ ಗುಣ-ಅವಗುಣ ಅವಲೋಕನಕ್ಕೆ 2 ವರ್ಷ ಕಾಯಿರಿ. ಕಾಯ್ದೆಗಳು ಮಾರಕವಾಗಿವೆ ಎಂದಾದರೆ, ಅವುಗಳಲ್ಲಿನ ಮಾರಕ ಅಂಶಗಳ ತಿದ್ದುಪಡಿಗೆ ನಮ್ಮ ಸರ್ಕಾರ ಸಿದ್ಧ’ ಎಂದು ಇತ್ತೀಚೆಗೆ ರಾಜನಾಥ್‌ ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?