ಕೆಲಸ, ಹಣ ಇಲ್ಲದೇ ಮೊಬೈಲ್‌ ಮಾರಿ ಕೊನೆಗೆ ಆತ್ಮಹತ್ಯೆಗೆ ಶರಣು!

Published : Apr 19, 2020, 10:21 AM ISTUpdated : Apr 19, 2020, 10:53 AM IST
ಕೆಲಸ, ಹಣ ಇಲ್ಲದೇ ಮೊಬೈಲ್‌ ಮಾರಿ ಕೊನೆಗೆ ಆತ್ಮಹತ್ಯೆಗೆ ಶರಣು!

ಸಾರಾಂಶ

ಕೆಲಸ, ಹಣ ಇಲ್ಲದೇ ಮೊಬೈಲ್‌ ಮಾರಿ ಕೊನೆಗೆ ಆತ್ಮಹತ್ಯೆಗೆ ಶರಣು| ಪತ್ನಿ, ತಂದೆ-ತಾಯಿ ಹಾಗೂ ಐದು ತಿಂಗಳ ಮಗು ಸೇರಿ ನಾಲ್ಕು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸವಿದ್ದ ಚಾಬು ಕುಟುಂಬ

ಗುರುಂಗಾವ್(ಏ.19):  ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದೇ ತುತ್ತು ಅನ್ನಕ್ಕಾಗಿ ಕಾರ್ಮಿಕನೊಬ್ಬ ಮೊಬೈಲ್‌ ಮಾರಿದ ಘಟನೆ ಇಲ್ಲಿ ನಡೆದಿದೆ. ಮೊಬೈಲ್‌ ಮಾರಿ ಬಂದ 2500 ರು. ನಿಂದ ಒಂದು ಫ್ಯಾನ್‌ ಹಾಗೂ ಉಳಿದ ಹಣದಿಂದ ದಿನಸಿ ಖರೀದಿಸಿದ್ದಾನೆ. ಬಳಿಕ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಾಬು ಮಂಡಲ್‌ (35) ಎಂಬಾತನೇ ಈ ನತದೃಷ್ಟ.

ಪತ್ನಿ, ತಂದೆ-ತಾಯಿ ಹಾಗೂ ಐದು ತಿಂಗಳ ಮಗು ಸೇರಿ ನಾಲ್ಕು ಮಕ್ಕಳೊಂದಿಗೆ ಗುಡಿಸಲಿನಲ್ಲಿ ವಾಸವಿದ್ದ ಚಾಬು ಕುಟುಂಬ ಕೂಲಿ ಇಲ್ಲದೇ ಹಲವು ದಿನಗಳಿಂದ ಹಸಿವೆಯಿಂದಿತ್ತು. ಹಾಗಾಗಿ ಮೊಬೈಲ್‌ ಮಾರಿ ಬಂದ ಹಣದಿಂದ ಒಂದು ಫ್ಯಾನ್‌ ಹಾಗೂ ಉಳಿದ ಹಣದಿಂದ ದಿನಸಿ ಖರೀದಿ ಮಾಡಿದ್ದಾನೆ.

ಲಾಕ್‌ಡೌನ್‌ ನಡುವೆಯೂ ಕಾವೇರಿ ನದಿ ಸ್ವಚ್ಛತೆ

ಪತಿಯ ಕೈನಿಂದ ದಿನಸಿ ವಸ್ತುಗಳನ್ನು ಪಡೆದುಕೊಂಡ ಪತ್ನಿ, ಅಡಿಗೆಗೂ ಮುನ್ನ ಶೌಚಕ್ಕೆ ತೆರಳಿದ್ದಾಳೆ. ತಾಯಿ ಜೋಪಡಿ ಪಕ್ಕದಲ್ಲಿರುವ ಮರದ ಕೆಳಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾಳೆ. ಈ ವೇಳೆ ಚಾಬೂ ಕೋಣೆಯೊಂದರಲ್ಲಿ ನೇಣಿಗೆ ಕೊರಳೊಡ್ಡಿದ್ದಾನೆ. ಆತ ಮಾನಸಿಕವಾಗಿ ಖಿನ್ನನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌
ಲೋಕಸಭೆಯಲ್ಲಿ ಮತಚೋರಿ ಕದನ : ಕೈ ಮತಗಳವಿಂದ ಅಂಬೇಡ್ಕರ್‌ಗೆ ಸೋಲು-ಬಿಜೆಪಿ