
ಮುಂಬೈ [ಫೆ.08]: ಬಸ್ಸು, ಕಾರಿನಂತೆ ಮುಂದೆ ಹೋದ ರೈಲು ಎಂದಾದರೂ ವಾಪಸ್ ಬಂದಿದ್ದು ಉಂಟೇ? ಆದರೆ, ಪ್ರಯಾಣಿಕನೊಬ್ಬನ್ನು ರಕ್ಷಿಸಲು ರೈಲೊಂದು 1 ಕಿ.ಮೀ. ಹಿಮ್ಮುಖವಾಗಿ ಚಲಿಸಿದ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ನಡೆದಿದೆ.
ದೇವಲಾಲಿನಿಂದ ಭೂಸಾವಲ್ಗೆ ತರಳುತ್ತಿದ್ದ ರೈಲು ಪರ್ಧಂಡೆ ಮತ್ತು ಮಹೆಜಿ ರೈಲ್ವೆ ನಿಲ್ದಾಣಗಳ ಮಧ್ಯೆ ಮುಂಜಾನೆ 9.30ರ ವೇಳೆಗೆ ಸಂಚರಿಸುತ್ತಿದ್ದ ವೇಳೆ ರಾಹುಲ್ ಪಾಟೀಲ್ ಎಂಬ ವ್ಯಕ್ತಿ ಕೆಳಕ್ಕೆ ಬಿದ್ದಿದ್ದ.
ವಿಜಯಪುರ- ಮಂಗಳೂರು: ಸ್ಪೆಷಲ್ ರೈಲು ಸೇವೆ...
ತಕ್ಷಣವೇ ಸ್ನೇಹಿತರು ಅಲರಾಂ ಚೈನ್ ಅನ್ನು ಎಳೆದು ರೈಲನ್ನು ನಿಲ್ಲಿಸಿದ್ದರು. ಬಳಿಕ ಚಾಲಕ ಹಿಮ್ಮುಖವಾಗಿ ರೈಲು ಓಡಿಸಿ ಗಾಯಾಳುವನ್ನು ರಕ್ಷಣೆ ಮಾಡಿದ್ದಾರೆ. ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ