ತನ್ನ ಮೂರ್ತಿಯನ್ನು ತಾನೇ ನಿರ್ಮಿಸಿದ ಟಿಎಂಸಿ ಶಾಸಕ!| 71 ವರ್ಷದ ದಕ್ಷಿಣ 24 ಪರಗಣ ಜಿಲ್ಲೆಯ ಶಾಸಕ ಜಯಂತ್ ನಾಸ್ಕರ್
ಕೋಲ್ಕತ್ತಾ[ಮಾ.15]: ದೇಶಕ್ಕೆ ಕೊಡುಗೆ ನೀಡಿದ ಮಹಾನ್ ನಾಯಕರನ್ನು ಸ್ಮರಿಸಲು ಅಂಥವರ ಪ್ರತಿಮೆಗಳನ್ನು ನಿರ್ಮಿಸುತ್ತೇವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಶಾಸಕನೊಬ್ಬ ತನ್ನ ಪ್ರತಿಮೆಯನ್ನು ತಾನೇ ನಿರ್ಮಿಸಿಕೊಂಡಿದ್ದಾನೆ.
ಒಂದು ವೇಳೆ ತಾನು ಸಾವನ್ನಪ್ಪಿದರೆ ಮುಂದಿನ ಪೀಳಿಗೆಯವರೂ ತನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬುದು 71 ವರ್ಷದ ದಕ್ಷಿಣ 24 ಪರಗಣ ಜಿಲ್ಲೆಯ ಶಾಸಕ ಜಯಂತ್ ನಾಸ್ಕರ್ ಅವರ ಮಹದಾಸೆ. ಹೀಗಾಗಿ ಕೋಲ್ಕತಾದಿಂದ ಶಿಲ್ಪಿಗಳನ್ನು ಕರೆತಂದು ತನ್ನಷ್ಟೇ ಗಾತ್ರದ ಎರಡು ಪ್ರತಿಮೆಗಳನ್ನು ನಿರ್ಮಿಸಿಕೊಂಡಿದ್ದಾನೆ.
ತನಗೆ ಹಲವು ವೈರಿಗಳಿದ್ದಾರೆ. ಟಿಎಂಸಿಯಲ್ಲೂ ತನಗೆ ವೈರಿಗಳಿದ್ದಾರೆ. ಒಂದು ವೇಳೆ ನನ್ನನ್ನು ಕೊಲೆ ಮಾಡಿದರೆ ಮುಂದಿನ ಪೀಳಿಗೆಯವರು ಈ ಮೂರ್ತಿಗಳ ಮೂಲಕ ತನ್ನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಮೂರ್ತಿಗಳನ್ನು ನಿರ್ಮಿಸಿದ್ದೇನೆ ಎಂದು ಜಯಂತ್ ಹೇಳಿದ್ದಾರೆ.