
ತಿಹಾರ್(ಏ.15) ಕೊರೋನಾ ಎಂಬ ಮಹಾಮಾರಿ ಜನ ಸಾಮಾನ್ಯರ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ನೈಟ್ ಕರ್ಫ್ಯೂ, ಲಾಕ್ಡೌನ್ ಹೀಗೇ ನಾನಾ ನಿಯಮಗಳಿಂದ ಜನರ ಜೀವನ ಶೈಲಿಯೆ ಬದಲಾಗಿದೆ. ಮಹಾಮಾರಿಯಿಂದಾಗಿ ಅನೇಕ ಮಂದಿ ತಮ್ಮ ಆಪ್ತರನ್ನು ಕಳೆದುಕೊಂಡರೆ, ಇನ್ನು ಕೆಲವರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈ ಮಹಾಂಆಋಇಯ ಭಯ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಸದ್ಯ ಈ ಕೊರೋನಾದಿಂದಾಗಿ ದಕ್ಷಿಣ ಏಷ್ಯಾದ ತಿಹಾರ್ ಜೈಲಿನ ಕೈದಿಗಳೂ ನಾಪತ್ತೆಯಾಗಿದ್ದಾರೆ. ಕೊರೋನಾದಿಂದಾಗಿ ಪೆರೋಲ್ ಮೇಲೆ ಹೊರಗೆ ಕಳುಹಿಸಿದ್ದ ಕೈದಿಗಳು ಮರಳಿ ಬಂದೇ ಇಲ್ಲ.
ಹೌದು ದೇಶಾದ್ಯಂತ ಅಬ್ಬರಿಸುತ್ತಿದ್ದ ಕೊರೋನಾದಿಂದ ಪಾತರಾಗಲು ಗುಂಪು ಸೇರದಿರುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಹೀಗಿರುವಾಗ 2020ರಲ್ಲಿ ಎಚ್ಐವಿ, ಕ್ಯಾನ್ಸರ್, ಕಿಡ್ನಿ ಕಸಿ, ಅಸ್ತಮಾ, ಟಿ ಬಿ ಇಂಥ ರೋಗಗಳಿಂದ ಬಳಲುತ್ತಿದ್ದ ತಿಹಾರ್ ಜೈಲಿನ 6,740 ಮಂದಿ ಕೈದಿಗಳನ್ನು ಪೆರೋಲ್ ಮೇಲೆ ಹೊರ ಕಳುಹಿಸಲಾಗಿತ್ತು. ಆದರೆ ಇವರಲ್ಲಿ 3,468 ಕೈದಿಗಳು ಹಿಂತಿರುಗಿಲ್ಲ.
ಕೊರೋನಾತಂಕದ ನಡುವೆ ಕೈದಿಗಳು ಹಿಂತಿರುಗದಿರುವುದು ತಿಹಾರ್ ಜೈಲು ಅಧಿಕಾರಿಗಳಿಗೆ ಮತ್ತೊಂದು ತಲೆ ನೋವಾಗಿದೆ. ಕೈದಿಗಳನ್ನು ಮರಳಿ ಹೇಗೆ ಜೈಲಿಗೆ ಕರೆತರುವುದು ಎಂದು ತಿಳಿಯದ ಜೈಲು ಅಧಿಕಾರಿಗಳು ಸಹಾಯಕ್ಕಾಗಿ ದೆಹಲಿ ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಸದ್ಯ ದೇಶದಲ್ಲಿ ಕೊರೋನಾ ಎರಡನೇ ಅಲೆ ಎ<ಟ್ರಿ ನೀಡಿದ್ದು, ಇದು ಮೊದಲ ಅಲೆಗಿಂತಲೂ ಅಪಾಯಕಾರಿ ಎನ್ನಲಾಗಿದೆ. ಹೀಗಿರುವಾಗಲೇ ತಿಹಾರ್ ಜೈಲಿನಲ್ಲಿ 67 ಮಂದಿ ಈ ಕೊರೋನಾ ಸೋಂಕಿಗಡ ತುತ್ತಾಗಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ