ಪ್ರವಾಸಿಗರು ಹೆಚ್ಚಿದ್ದ ಕಾರಣ ಬೈಸರಣ್‌ ಆಯ್ಕೆ ಮಾಡಿದ್ದಉಗ್ರರು : ಎನ್‌ಐಎ

Kannadaprabha News   | Kannada Prabha
Published : Aug 29, 2025, 03:11 AM IST
Pahalgam

ಸಾರಾಂಶ

‘ಪಹಲ್ಗಾಂ ಉಗ್ರ ದಾಳಿ ನಡೆಸಿದ ಪಾಕಿಸ್ತಾನದ ಉಗ್ರರು, ಪ್ರವಾಸಿಗರು ಹೆಚ್ಚಿರುವ ಕಾರಣ ಪಹಲ್ಗಾಂನ ಬೈಸರಣ್‌ನನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.

ನವದೆಹಲಿ: ‘ಪಹಲ್ಗಾಂ ಉಗ್ರ ದಾಳಿ ನಡೆಸಿದ ಪಾಕಿಸ್ತಾನದ ಉಗ್ರರು, ಪ್ರವಾಸಿಗರು ಹೆಚ್ಚಿರುವ ಕಾರಣ ಪಹಲ್ಗಾಂನ ಬೈಸರಣ್‌ನನ್ನು ಆಯ್ಕೆ ಮಾಡಿಕೊಂಡಿದ್ದರು’ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.

ಗುರುವಾರ ಹೇಳಿಕೆ ಬಿಡುಗಡೆ ಮಾಡಿದ ಎನ್‌ಐಎ, ‘ಏ.22ರಂದು 26 ಜನರನ್ನು ಬಲಿಪಡೆದ ಉಗ್ರರು ಅಲ್ಲಿ ಹೆಚ್ಚಿನ ಪ್ರವಾಸಿಗರು ಬರುತ್ತಾರೆ, ಬೈಸರಣ್‌ ಪ್ರದೇಶವು ಹೊರ ವಲಯದಲ್ಲಿದ್ದ ಕಾರಣ ಭದ್ರತಾ ಪಡೆಗಳು ಪ್ರತಿಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕೆ ಮೂವರು ಉಗ್ರರು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲಿ ಕುದುರೆ ಸವಾರಿ ಮಾಡುತ್ತಿದ್ದ, ಪಿಕ್ನಿಕ್‌ಗೆ ಬಂದಿದ್ದ ಪ್ರವಾಸಿಗರಲ್ಲಿ ಪುರುಷರನ್ನು ಹೊಡೆದುರುಳಿಸಿದರು’ ಎಂದು ಎನ್‌ಐಎ ತಿಳಿಸಿದೆ.

‘ಇದಕ್ಕೆ ಪ್ರತಿಯಾಗಿ ಉಗ್ರರಿಗೆ ಆಶ್ರಯ ನೀಡಿದ್ದ ಪರ್ವೇಜ್‌ ಅಹ್ಮದ್‌ ಜೊಥಾರ್‌ ಮತ್ತು ಬಶೀರ್‌ ಅಹ್ಮದ್‌ ಜೊಥಾರ್‌ ಎಂಬುವರನ್ನು ಬಂಧಿಸಲಾಗಿದೆ’ ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ