ಕೊರೋನಾ ಹೋರಾಟಕ್ಕಾಗಿ ಸಿಎಂ ನಿಧಿಗೆ ತಿಂಗಳ ಸಂಬಳ ನೀಡಿದ ವಾಚ್‌ಮ್ಯಾನ್

Published : May 15, 2021, 10:15 AM ISTUpdated : May 15, 2021, 12:49 PM IST
ಕೊರೋನಾ ಹೋರಾಟಕ್ಕಾಗಿ ಸಿಎಂ ನಿಧಿಗೆ ತಿಂಗಳ ಸಂಬಳ ನೀಡಿದ ವಾಚ್‌ಮ್ಯಾನ್

ಸಾರಾಂಶ

ಕೊರೋನಾ ಹೋರಾಟಕ್ಕೆ ಒಂದು ತಿಂಗಳ ಸಂಬಳ ನೀಡಿದ ವ್ಯಾಚ್‌ಮ್ಯಾನ್ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇಳಿಕೊಂಡ ಸಿಎಂ

ಚೆನ್ನೈ(ಮೇ.15): ಕೋವಿಡ್ -19 ಎದುರಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಮುಖ್ಯಮಂತ್ರಿ ಪರಿಹಾರ ನಿಧಿಗೆ (ಸಿಎಂಪಿಆರ್ಎಫ್) ಕೊಡುಗೆ ನೀಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಮನವಿಯನ್ನು ಅನುಸರಿಸಿ 59 ವರ್ಷದ ವ್ಯಾಚ್‌ಮ್ಯಾನ್ ತನ್ನ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದಾರೆ.

ಚೆನ್ನೈನ ರಾತ್ರಿ ಕಾವಲುಗಾರ ತಂಗದುರೈ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 10,101 ರೂ. ನೀಡಿದ್ದಾರೆ. ಆ ವ್ಯಕ್ತಿಯ ಕೊಡುಗೆಯನ್ನು ಕೇಳಿದ ಮುಖ್ಯಮಂತ್ರಿ ತಂಗದುರೈ ಅವರನ್ನು ಸಿಎಂ ಕಚೇರಿಯಲ್ಲಿ ಭೇಟಿಯಾಗಿ ಎಂ ಕರುಣಾನಿಧಿ ಅವರ ತಿರುಕುರಲ್ ಪುಸ್ತಕದ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ರಜನಿ ಪುತ್ರಿಯಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ನೆರವು, ನಟ ಅಜಿತ್‌ನಿಂದ 25 ಲಕ್ಷ

ಟ್ವಿಟ್ಟರ್‌ನಲ್ಲಿ ಇದನ್ನು ಶೇರ್ ಮಾಡಿ, ಮೊದಲಿಗೆ ನನ್ನನ್ನು ಭೇಟಿಯಾಗಲು ಸಾಧ್ಯವಾಗದ ರಾತ್ರಿ ಕಾವಲುಗಾರ ತಂಗದುರೈ ಅವರು ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳವನ್ನು ದೇಣಿಗೆ ನೀಡಿದ್ದರು. ಈ ಬಗ್ಗೆ ತಿಳಿದುಕೊಂಡ ನಂತರ, ನಾನು ಅವರನ್ನು ಭೇಟಿಯಾಗಲು ವಿನಂತಿಸಿದೆ. ಮತ್ತು ನಾನು ಅವರಿಗೆ ಕಲೈನಾರ್ ಬರೆದ ತಿರುಕುರಲ್ ಎಂಬ ಪುಸ್ತಕವನ್ನು ಕೊಟ್ಟಿದ್ದೇನೆ ಎಂದಿದ್ದಾರೆ.

ನಾನು ಸಿಎಂ ಅವರನ್ನು ಭೇಟಿಯಾದಾಗ, ನಾನು ಎಲ್ಲಿಂದ ಬಂದಿದ್ದೇನೆ ಎಂದು ಕೇಳಿದರು. ನನ್ನ ಒಂದು ತಿಂಗಳ ಸಂಬಳವನ್ನು ನಾನು ದಾನ ಮಾಡುತ್ತಿದ್ದೇನೆ ಎಂದು ತಿಳಿದ ನಂತರ ಪುಸ್ತಕವನ್ನು ನೀಡಿದ್ದಾರೆ ಎಂದು ತಂಗದುರೈ ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ
ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!