
ಬೆಂಗಳೂರು(ಆ.20): ಆಫ್ಘಾನಿಸ್ತಾನ ತಾಲಿಬಾನ್ ಕೈವಶವಾದ ಬಳಿಕ ಇದೀಗ ಮುಗ್ದ ಜನ ನರಳಾಡುತ್ತಿದ್ದಾರೆ. ಹೊಸ ಆಡಳಿತ ನೀಡುವುದಾಗಿ ತಾಲಿಬಾನ್ ಹೇಳಿದ್ದರೂ ಅಮಾಯಕರ ಮೇಲೆ ದಾಳಿ ನಡೆಯುತ್ತಲೇ ಇದೆ. ಈ ಬೆಳವಣಿಗೆಗಳ ಕುರಿತು ಆಫ್ಘಾನಿಸ್ತಾನ ಸರ್ಕಾರದ ಸಲಹೆಹಾರ ಜೋವಿಟಟ್ಟ ಥಾಮಸ್ ಜೊತೆ ಏಷ್ಯಾನೆಟ್ ಸುವರ್ಣನ್ಯೂಸ್ Exclusive ಸಂದರ್ಶನ ನಡೆಸಿದೆ.
"
ತಾಲಿಬಾನ್ ಮಾತು ನಂಬಲೇಬೇಡಿ. ಭಾರತ ಅತ್ಯಂತ ಎಚ್ಚರಿಕೆವಹಿಸುವ ಅಗತ್ಯವಿದೆ ಎಂದು ಆಫ್ಗಾನ್ ಅಡ್ವೈಸರ್ ಹೇಳಿದ್ದಾರೆ. ತಾಲಿಬಾನ್ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ. ಮಾಜಿ ಅಧ್ಯಕ್ಷ ಕರ್ಜೈ ಬಳಸಿ ಸರ್ಕಾರ ರಚಿಸಿದರೂ ಪರಿಸ್ಥಿತಿ ಬದಲಾಗಲ್ಲ ಎಂದು ಜೋವಿಟ್ಟ ಥಾಮಸ್ ಹೇಳಿದ್ದಾರೆ. ಆಫ್ಘಾನಿಸ್ತಾನ ಜನತೆ ಭಾರತ ಪ್ರೀತಿಸುತ್ತಾರೆ, ಪಾಕ್ ದ್ವೇಷಿಸುತ್ತಾರೆ. ತಾಲಿಬಾನ್, ಪಾಕಿಸ್ತಾನ, ಚೀನಾ ಕುರಿತು ಎಚ್ಚರಿಕೆ ಅಗತ್ಯ ಎಂದಿದ್ದಾರೆ.
ಕೇರಳ ಮೂಲದ ಜೋವಿಟ್ಟ ಥಾಮಸ್ ಆಫ್ಘಾನ್ ಸರ್ಕಾರದ ಅಡ್ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಫ್ಘಾನಿಸ್ತಾನದ ಮೂರು ಸಚಿವಾಲದ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸದ್ಯದ ಅಫ್ಘಾನಿಸ್ತಾನ ಪರಿಸ್ಥಿತಿ, ತಾಲಿಬಾನ್ ಆಕ್ರಮಣ ಹಾಗೂ ಆಫ್ಘಾನ್ ಸೇನೆ ತಾಲಿಬಾನ್ ಆಕ್ರಣ ತಡೆಯುವಲ್ಲಿ ಯಾಕೆ ವಿಫಲವಾಯಿತು ಅನ್ನೋ ಕುರಿತು ಜೋವಿಟ್ಟ ಥಾಮಸ್ ನೈಜ ಚಿತ್ರಣ ನೀಡಿದ್ದಾರೆ. ಏಷ್ಯಾನೆಟ್ ಸುವರ್ಣನ್ಯೂಸ್ Exclusive ಸಂದರ್ಶನದ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ