ಬಿಜೆಪಿ ಸಚಿವನ ಅಮಾನತು ಮಾಡಿದ ಸುಪ್ರೀಂ!

Published : Mar 19, 2020, 04:18 PM IST
ಬಿಜೆಪಿ ಸಚಿವನ ಅಮಾನತು ಮಾಡಿದ ಸುಪ್ರೀಂ!

ಸಾರಾಂಶ

ಮಣಿಪುರ ಬಿಜೆಪಿ ಸಚಿವನ ಅಮಾನತು ಮಾಡಿದ ಸುಪ್ರೀಂ!| ಸಂವಿಧಾನದ 142 ಪರಿಚ್ಛೇದದನ್ವಯ ಇರುವ ವಿಶೇಷಾಧಿಕಾರವನ್ನು ಬಳಸಿ ಅಮಾನತು

ನವದೆಹಲಿ[ಮಾ.19]: ಅತ್ಯಪರೂದಪ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ ತನ್ನ ಪರಮಾಧಿಕಾರ ಬಳಸಿ ಮಣಿಪುರ ಬಿಜೆಪಿ ಸರ್ಕಾರದ ಸಚಿವನನ್ನು ಅಮಾನತು ಮಾಡಿದೆ.

ಸಂವಿಧಾನದ 142 ಪರಿಚ್ಛೇದದನ್ವಯ ಇರುವ ವಿಶೇಷಾಧಿಕಾರವನ್ನು ಬಳಸಿ, ಅರಣ್ಯ ಸಚಿವ ಶ್ಯಾಮ್‌ ಕುಮಾರ್‌ರನ್ನು ಮುಂದಿನ ಆದೇಶದ ವರೆಗೆ ಅಮಾನತು ಮಾಡಿದೆ.

2017ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಶ್ಯಾಮ್‌ ಕುಮಾರ್‌ ಬಳಿಕ ಬಿಜೆಪಿ ಸೇರಿ ಮಂತ್ರಿಯಾಗಿದ್ದರು. ಏತನ್ಮಧ್ಯೆ ಅವರನ್ನು ಅನರ್ಹ ಮಾಡಬೇಕು ಎಂದು ಕೋರಿ ಕಾಂಗ್ರೆಸ್‌ ಸ್ಪೀಕರ್‌ಗೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥವಾಗದೇ ಉಳಿದಿದೆ. ಹಾಗಾಗಿ ಸುಪ್ರೀಂ, ಶ್ಯಾಮ್‌ ಕುಮಾರ್‌ಗೆ ವಿಧಾನಸಭೆ ಪ್ರವೇಶ ನಿಷೇಧ ಹಾಗೂ ಸಚಿವ ಸ್ಥಾನದಿಂದ ಅಮಾನತು ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್