ಕಳೆದ ವರ್ಷ ಜೂನ್ 3 ರಂದು ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್ ವಲಯ’ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ನವದೆಹಲಿ (ಏಪ್ರಿಲ್ 27, 2023): ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್ ವಲಯ’ ಎಂದು ಪರಿಗಣಿಸಬೇಕು ಎಂಬ ತನ್ನ ಆದೇಶದಲ್ಲಿ ಕೊಂಚ ಮಾರ್ಪಾಟು ಮಾಡಿರುವ ಸುಪ್ರೀಂ ಕೋರ್ಟ್, ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ ನೀಡಿದೆ.
ಆದರೆ, ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ನಡೆಯಬಾರದು. ಕಾರ್ಖಾನೆಗಳು ತಲೆಯೆತ್ತಕೂಡದು ಹಾಗೂ ಭಾರೀ ಪ್ರಮಾಣದ ಕಟ್ಟಡ ಕಾಮಗಾರಿಗಳು ನಡೆಯಕೂಡದು ಎಂಬ ತನ್ನ ಆದೇಶದಲ್ಲಿ ಯಾವುದೇ ಬದಲಾವಣೆ ತರದೇ ಇರಲು ನಿರ್ಧರಿಸಿದೆ.
ಇದನ್ನು ಓದಿ: ರಾಜಕೀಯ ಪಕ್ಷಗಳಿಗೆ ಶಾಕ್: ಮೀಸಲಾತಿ ಮಿತಿ ಶೇ. 50 ಮೀರಿಸಲು ಸುಪ್ರೀಂಕೋರ್ಟ್ ನಕಾರ
ಕಳೆದ ವರ್ಷ ಜೂನ್ 3 ರಂದು ರಾಷ್ಟ್ರೀಯ ಉದ್ಯಾನಗಳು ಹಾಗೂ ವನ್ಯಜೀವಿ ರಕ್ಷಿತಾರಣ್ಯಗಳ ಸುತ್ತಲಿನ 1 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ‘ಬಫರ್ ವಲಯ’ ಎಂದು ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದನ್ನು ಮರುಪರಿಶೀಲಿಸುವಂತೆ ಕೋರಿದ್ದ ಕೇಂದ್ರ ಸರ್ಕಾರ, ‘ಸಂಪೂರ್ಣ ನಿಷೇಧದಿಂದ ಜನಜೀವನಕ್ಕೆ ತೊಂದರೆ ಆಗಲಿದೆ. ಈಗಾಗಲೇ 2011ರ ಫೆಬ್ರವರಿ 9 ರಂದು ರಕ್ಷಿತಾರಣ್ಯಗಳ ಸುತ್ತಲಿನ ಬಫರ್ ವಲಯಗಳ ಚಟುವಟಿಕೆ ಬಗ್ಗೆ ಅಧಿಸೂಚನೆ ಹೊರಡಿಸಲಾಗಿತ್ತು. ಅದನ್ನು ಜಾರಿಗೊಳಿಸಿದರೆ ಸಾಕು’ ಎಂದು ಹೇಳಿತ್ತು.
ಇದಕ್ಕೆ ಬುಧವಾರ ಒಪ್ಪಿಗೆ ನೀಡಿರುವ ಸುಪ್ರೀಂ ಕೋರ್ಟ್, ‘ರಕ್ಷಿತಾರಣ್ಯಗಳ ಗಣಿಗಾರಿಕೆ, ಭಾರಿ ಪ್ರಮಾಣದ ಕಟ್ಟಡ ಕಾಮಗಾರಿಗಳು ಹಾಗೂ ಬೃಹತ್ ಕಾರ್ಖಾನೆಗಳು ಈ ವಲಯದಲ್ಲಿ ತಲೆಯೆತ್ತಬಾರದು. ಮಿಕ್ಕ ಸಣ್ಣಪುಟ್ಟ ನಿರ್ಮಾಣ ಕಾಮಗಾರಿಗಳು ನಡೆಯಬಹುದು. ಆದರೆ ರಾಷ್ಟ್ರೀಯ ಉದ್ಯಾನ ಸುತ್ತಲಿನ ನಿಷೇಧದ ಆದೇಶ ಮುಂದುವರಿಯಲಿದೆ’ ಎಂದು ಹೇಳಿದೆ.
ಇದನ್ನೂ ಓದಿ: ಸರ್ಕಾರದ ಟೀಕೆ, ದೇಶ ವಿರೋಧಿಯಲ್ಲ; ಪತ್ರಿಕಾ ಸ್ವಾತಂತ್ರ ಕಡಿತಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಸುಪ್ರೀಂ