Supreme court ಜಡ್ಜ್ ದಿಲ್ಲಿ ಮನೆ ಮುಂದೆ ಕನ್ನಡ ಬೋರ್ಡ್, ಕನ್ನಡಿಗರು ಫುಲ್ ಖುಷ್

Published : Jan 05, 2025, 10:48 PM ISTUpdated : Jan 06, 2025, 10:37 AM IST
Supreme court ಜಡ್ಜ್ ದಿಲ್ಲಿ ಮನೆ ಮುಂದೆ ಕನ್ನಡ ಬೋರ್ಡ್, ಕನ್ನಡಿಗರು ಫುಲ್ ಖುಷ್

ಸಾರಾಂಶ

ಬೆಂಗಳೂರು ಮೂಲದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ತಮ್ಮ ದೆಹಲಿ ನಿವಾಸದಲ್ಲಿ ಕನ್ನಡ ನಾಮಫಲಕ ಅಳವಡಿಸಿ, ಕನ್ನಡ ಪ್ರೇಮ ಮೆರೆದಿದ್ದಾರೆ. 2027ರಲ್ಲಿ ನಿವೃತ್ತಿ ಹೊಂದಲಿರುವ ಇವರು, ನ್ಯಾಯಾಂಗದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಕರ್ನಾಟಕ ಹಾಗೂ ಗುಜರಾತ್ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕಾನೂನು ಶಿಕ್ಷಣದ ಪ್ರೋತ್ಸಾಹ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ.

ದೆಹಲಿಯಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯೊಬ್ಬರ ಕನ್ನಡ ಪ್ರೇಮದ ಬಗ್ಗೆ ಕನ್ನಡಿಗರು ಫುಲ್‌ ಖುಷ್‌ ಆಗಿದ್ದಾರೆ. ರಾಜ್ಯದ ಅನೇಕ ಮಂದಿ ರಾಜಕಾರಣಿಗಳು, ಸಂಸದರು, ಮಂತ್ರಿಗಳು, ಸರ್ಕಾರಿ ಅಧಿಕಾರಿಗಳು ಬೇರೆ ಬೇರೆ ಹುದ್ದೆಯಲ್ಲಿದ್ದಾರೆ. ಆದರೆ ದೆಹಲಿಯ ಯಾವುದೇ ರಸ್ತೆ ಕನ್ನಡದಲ್ಲಿ ಒಂದು ಬೋರ್ಡ್ ಕೂಡ ಕಾಣಿಸುವುದಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿಯ ಸಫ್ದರ್ಜಂಗ್ ರಸ್ತೆಯಲ್ಲಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಕನ್ನಡಿಗ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ತಮ್ಮ ಮನೆಯ ಗೇಟಿನಲ್ಲಿ ಕನ್ನಡದಲ್ಲಿಯೇ ನಾಮಫಲಕ ಹಾಕಿದ್ದಾರೆ. 2023ರಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಅಧಿಕಾರ ವಹಿಸಿಕೊಂಡ ಅವರು ಜುಲೈ 13, 2027ರಂದು ನಿವೃತ್ತಿ ಹೊಂದಲಿದ್ದಾರೆ.

ಕನ್ನಡಿಗರೊಬ್ಬರು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾಗಿರುವುದು ಕನ್ನಡಿಗರಿಗೆ ಹೆಮ್ಮೆ, ಇದರ ನಡುವೆಯೇ ತಾನು ವಾಸವಿರುವ ದೆಹಲಿಯ ಮನೆಗೆ ಕನ್ನಡದಲ್ಲಿ ನಾಮ ಫಲಕ ಹಾಕಿರುವುದು ಅವರ ಕನ್ನಡ ಪ್ರೇಮವನ್ನು ಎತ್ತಿ ತೋರಿಸುತ್ತದೆ. ಇದು ಕನ್ನಡಿಗರಿಗೂ ಬಹಳದ ಸಂತೋಷದ ವಿಷ್ಯ.

80 ಕೋಟಿ ಆಸ್ತಿ, ಮಗ ಉದ್ಯಮಿ, ಮಗಳು ಸುಪ್ರೀಂ ಕೋರ್ಟ್ ವಕೀಲೆ; ಅನಾಥ ಹೆಣವಾದ 400 ಪುಸ್ತಕಗಳ ಲೇಖಕ

ನಮ್ಮ ಬೆಂಗಳೂರಿನವರು: ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು 14-07-1962 ರಂದು  ಬೆಂಗಳೂರಿನಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಬೆಂಗಳೂರಿನಲ್ಲಿಯೇ ಪೂರೈಸಿದ್ದಾರೆ. ಬಳಿಕ ವಿವಿ ಪುರಂ  ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ.

1987ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ಇವರು ಸಿವಿಲ್ ಕೋರ್ಟ್‌ಗಳು, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಮಂಡಳಿಗಳಲ್ಲಿ ಸುಮಾರು 4 ವರ್ಷಗಳ ಕಾಲ ವಕಾಲತು ಮಾಡಿದರು. 1991ರಲ್ಲಿ ಹೈಕೋರ್ಟ್‌‌ನಲ್ಲಿ ವಕಾಲತು ಆರಂಭಿಸಿದರು. ನಂತರ  1999ರಲ್ಲಿ ಕರ್ನಾಟಕದ ಹೈಕೋರ್ಟಿನಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ  ಸ್ಥಾಯಿ ವಕೀಲರಾಗಿ ಮತ್ತು 11 ವರ್ಷಗಳ ಕಾಲ ಆದಾಯ ತೆರಿಗೆ ಇಲಾಖೆ ಸ್ಥಾಯಿ ವಕೀಲರಾಗಿ ನೇಮಕಗೊಂಡರು. ನಂತರ ನ್ಯಾಯಮೂರ್ತಿ ಕುಮಾರ್ ಅವರನ್ನು 2002ರಲ್ಲಿ ಪ್ರಾದೇಶಿಕ ನೇರ ತೆರಿಗೆ ಸಲಹಾ ಸಮಿತಿಯ ಸದಸ್ಯರಾಗಿ ನೇಮಸಲಾಯ್ತು. ಬಳಿಕ ಅರವಿಂದ್ ಕುಮಾರ್ ಅವರನ್ನು 2005ರಲ್ಲಿ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ನೇಮಿಸಲಾಯಿತು. 

ಅರವಿಂದ್ ಕುಮಾರ್ ಅವರು ಕಾನೂನು ಶಿಕ್ಷಣವನ್ನು ಉತ್ತೇಜಿಸಲು, ಯುವ ವಕೀಲರಿಗೆ ತರಬೇತಿ ನೀಡಲು, ವಕೀಲರಿಗೆ ವಿವಿಧ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ನಡೆಸಲು, ನೇಮಕಾತಿಯನ್ನು ಬಯಸುವ ಯುವ ವಕೀಲರಿಗೆ ಓರಿಯಂಟೇಶನ್ ಕೋರ್ಸ್‌ಗಳನ್ನು ನಡೆಸಲು ಪ್ರತಿಷ್ಠಿತ ಹಿರಿಯ ವಕೀಲರಿಂದ ಉತ್ತೇಜಿಸಲ್ಪಟ್ಟ ಲಹರಿ ವಕೀಲರ ವೇದಿಕೆಯ ಸಂಸ್ಥಾಪಕ ಸದಸ್ಯ ಮತ್ತು ಉಪಾಧ್ಯಕ್ಷರಲ್ಲೊಬ್ಬರು. ನ್ಯಾಯಾಂಗ ಅಧಿಕಾರಿಗಳಂತೆ ನ್ಯಾ ಅರವಿಂದ್ ಕುಮಾರ್ ಅವರು ವಿವಿಧ ಶಾಸನಬದ್ಧ ನಿಗಮಗಳು ಮತ್ತು ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಅಧಿಕಾರ ನೀಡುವವರೆಗೆ ಅವರು ಕೇಂದ್ರೀಯ ತನಿಖಾ ದಳಕ್ಕೆ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ನೀಟ್‌ - ಯುಜಿ ಪರೀಕ್ಷೆ ಸುಧಾರಣೆಗೆ ತಜ್ಞರ ಸಮಿತಿ ಶಿಫಾರಸು ಜಾರಿ: ಕೇಂದ್ರ ಸರ್ಕಾರ

2009 ರಲ್ಲಿ ನ್ಯಾ. ಅರವಿಂದ್‌ ಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು 2012 ರಲ್ಲಿ ಅವರು ಖಾಯಂ ನ್ಯಾಯಾಧೀಶರಾದರು. ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ, ನ್ಯಾಯಮೂರ್ತಿ ಕುಮಾರ್ ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದರು.

ಅಕ್ಟೋಬರ್ 2021ರಲ್ಲಿ ಗುಜರಾತ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, ಈ ಸಮಯದಲ್ಲಿ ಅವರು ಬಾಕಿ ಇರುವ ಪ್ರಕರಣಗಳ  ಸಮಸ್ಯೆಯನ್ನು ನಿಭಾಯಿಸಲು ಬದ್ಧರಾಗಿದ್ದರು. ಅವರು ಪ್ರತಿ ನ್ಯಾಯಾಲಯದ ಕೊಠಡಿಯಲ್ಲಿ ನ್ಯಾಯ ಗಡಿಯಾರಗಳನ್ನು ಸ್ಥಾಪಿಸಿ ಪ್ರಕರಣಗಳ ಬಾಕಿಯನ್ನು ಪತ್ತೆಹಚ್ಚಲು ಮತ್ತು ಅವುಗಳನ್ನು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡುವ ಕ್ರಮಕೈಗೊಂಡವರಲ್ಲಿ ಪ್ರಮುಖರು. ಅವರ ಅಧಿಕಾರಾವಧಿಯಲ್ಲಿ, ತ್ರೈಮಾಸಿಕ ಪ್ರಕರಣಗಳ ಕ್ಲಿಯರೆನ್ಸ್ ಶೇ.85ಕ್ಕಿಂತ ಹೆಚ್ಚಿತ್ತು.

ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಭಿಕ್ಷೆ ಬೇಡುವ ಮಕ್ಕಳಿಗೆ ಶಿಕ್ಷಣ ನೀಡಲು ಗುಜರಾತ್ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸಿಗ್ನಲ್ ಶಾಲೆಗಳನ್ನು ಸ್ಥಾಪಿಸುವ ಮೂಲಕ ಕಾನೂನು ಅರಿವು ಮೂಡಿಸುವಲ್ಲಿ ಯತ್ನಿಸಿದವರಲ್ಲಿ ಪ್ರಮುಖರು. ನ್ಯಾಯಮೂರ್ತಿ ಕುಮಾರ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಕರ್ತವ್ಯದಲ್ಲಿದ್ದಾಗ ಇದೇ ರೀತಿಯ ಕಾರ್ಯಕ್ರಮವನ್ನು ಮೊದಲು ಸ್ಥಾಪಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..