
ಆಸ್ತಿಗೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ನಿಂದ ಮಹತ್ವದ ತೀರ್ಪೊಂದು ಪ್ರಕಟಗೊಂಡಿದೆ. ಅದೇನೆಂದರೆ, ಮಾವನ ನಿಧನದ ಬಳಿಕ, ಸೊಸೆ ವಿಧವೆಯಾದರೂ ಆಕೆಯಗೆ ಮಾವನ ಆಸ್ತಿಯಲ್ಲಿ ಜೀವನಾಂಶ ಪಡೆಯುವ ಹಕ್ಕು ಇದೆ ಎನ್ನುವ ತೀರ್ಪನ್ನು ಕೋರ್ಟ್ ನೀಡಿದೆ. ಒಂದು ವೇಳೆ ಮಾವನ ಜೀವಿತಾವಧಿಯಲ್ಲಿ ಸೊಸೆ ವಿಧವೆಯಾದರೆ ಆಕೆಗೆ ಮಾವನಿಂದ ಜೀವನಾಂಶ ಪಡೆಯಬಹುದಾಗಿತ್ತು. ಆದರೆ, ಮಾವ ಸತ್ತ ಬಳಿಕ, ಸೊಸೆ ವಿಧವೆಯಾಗಿದ್ದರೂ ಆಕೆ ಇದಕ್ಕೆ ಅರ್ಹಳು ಹೌದೋ ಅಲ್ಲವೋ ಎನ್ನುವ ಬಹುದೊಡ್ಡ ಕಾನೂನು ಗೊಂದಲಕ್ಕೆ ಸುಪ್ರೀಂಕೋರ್ಟ್ ಇದೀಗ ತೆರೆ ಇಳಿದಿದೆ. ಮಾವನ ನಿಧನದ ಬಳಿಕ, ಆತನ ಸೊಸೆ ವಿಧವೆಯಾದರೆ, ಆಕೆಗೆ ಈ ಹಕ್ಕು ಇಲ್ಲ ಎಂದಿದ್ದ ಕೆಳಹಂತದ ಕೋರ್ಟ್ ಆದೇಶವನ್ನು ವಜಾ ಮಾಡುವ ಮೂಲಕ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದೆ.
ತನ್ನ ಮಾವನ ಮರಣದ ನಂತರ ವಿಧವೆಯಾದ ಹೆಂಡತಿ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ರ ಪ್ರಕಾರ ತನ್ನ ಮಾವನ ಆಸ್ತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಎಸ್ವಿಎನ್ ಭಟ್ಟಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ. ಈ ಬಗ್ಗೆ ಇದ್ದ ಕಾನೂನು ಗೊಂದಲಕ್ಕೆ ಕೋರ್ಟ್ ತೆರೆ ಎಳೆದಿದೆ. ಇದೇ ವೇಳೆ ಮನುಸ್ಮೃತಿಯಲ್ಲಿ ಉಲ್ಲೇಖವಾಗಿರುವ ಅಂಶಗಳನ್ನೂ ತೀರ್ಪಿನಲ್ಲಿ ತಿಳಿಸಿರುವ ನ್ಯಾಯಮೂರ್ತಿಗಳು, ಇಂಥ ಒಂದು ಹಕ್ಕು ವಿಧವೆ ಸೊಸೆಗೆ ಇದೆ ಎಂದು ತಿಳಿಸಿದೆ.
ಮಾವ ಜೀವಂತ ಇದ್ದರೆ ಮಾತ್ರ, ಆತನ ಮಗ ಸತ್ತರೆ ವಿಧವೆ ಸೊಸೆಗೆ ಅಧಿಕಾರ ಇದೆ ಎಂದೇ ಹೇಳಲಾಗುತ್ತಿತ್ತು. ಇದನ್ನೇ ವಕೀಲರು ಕೂಡ ವಾದಿಸಿದ್ದರು. ಮಾವನ ನಿಧನದ ಬಳಿಕ ಸೊಸೆ ವಿಧವೆಯಾದರೆ ಆಕೆಗೆ ಮಾವನ ಆಸ್ತಿಯಲ್ಲಿ ಜೀವನಾಂಶದ ಹಕ್ಕು ಇಲ್ಲ ಎನ್ನುವುದು ಅವರ ವಾದವಾಗಿತ್ತು. ಆದರೆ ಇದನ್ನು ಕೋರ್ಟ್ ಮಾನ್ಯ ಮಾಡಲಿಲ್ಲ. ಮಾವನ ನಿಧನದ ಮೊದಲು ಮತ್ತು ನಂತರ ಎನ್ನುವಂಥ ತಾರತಮ್ಯ ಮಾಡುವುದು ತರ್ಕಹೀನವಾದದ್ದು. ಇದು ಸಂವಿಧಾನ ಬಾಹಿರವಾಗಿದೆ ಎಂದಿರುವ ನ್ಯಾಯಮೂರ್ತಿಗಳು, ಮಾವ ಬದುಕಿರಲಿ, ಇಲ್ಲದೇ ಇರಲಿ ವಿಧವೆ ಸೊಸೆಯ ಹಕ್ಕು ಕಸಿದುಕೊಳ್ಳಲಾಗದು ಎಂದಿದ್ದಾರೆ.
ಇದೇ ವೇಳೆ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ, 1956 ರ ಸೆಕ್ಷನ್ 22 ಅನ್ನು ಕೂಡ ಉಲ್ಲೇಖಿಸಿರುವ ಪೀಠವು, ಈ ನಿಬಂಧನೆಯು ಮೃತ ಹಿಂದುವಿನ ಅವಲಂಬಿತರ ಜೀವನಾಂಶದ ಬಗ್ಗೆ ಉಲ್ಲೇಖಿಸುತ್ತದೆ. ಮೃತರ ಎಲ್ಲಾ ಉತ್ತರಾಧಿಕಾರಿಗಳು ವಿಧವೆಯಾದ ಸೊಸೆ ಸೇರಿದಂತೆ ತಮ್ಮ ಅವಲಂಬಿತರನ್ನು ಮೃತರ ಆಸ್ತಿಯಿಂದ ಬೆಂಬಲಿಸಲು ಬದ್ಧರಾಗಿರುತ್ತಾರೆ ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ