ಕಾರಣ ನೀಡಿಲ್ಲ ಎಂಬ ನೆಪ ಕೊಟ್ಟು ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಬೇಡ: ಸುಪ್ರೀಂ

Published : Oct 05, 2021, 08:39 AM IST
ಕಾರಣ ನೀಡಿಲ್ಲ ಎಂಬ ನೆಪ ಕೊಟ್ಟು ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಬೇಡ: ಸುಪ್ರೀಂ

ಸಾರಾಂಶ

* ಸಾವಿನ ಕಾರಣ ನೀಡಿಲ್ಲ ಎಂಬ ನೆಪ ಹೇಳ​ಕೂ​ಡ​ದು * ರಾಜ್ಯ​ಗ​ಳಿಗೆ ನ್ಯಾಯ​ಪೀಠ ಸೂಚ​ನೆ * ಕೋವಿಡ್‌ ಪರಿ​ಹಾರ ನಿರಾ​ಕ​ರಣೆ ಮಾಡ​ಕೂ​ಡ​ದು: ಸುಪ್ರೀಂ

ನವದೆಹಲಿ(ಅ.05): ‘ಮರಣ ಪ್ರಮಾಣ ಪತ್ರದಲ್ಲಿ(Death Certificate) ಸಾವಿಗೆ ಕಾರಣ ನೀಡಿಲ್ಲ’ ಎಂಬ ಕಾರಣ ನೀಡಿ ಕೋವಿಡ್‌ನಿಂದ ಮೃತಪಟ್ಟವರಿಗೆ 50 ಸಾವಿರ ರು. ಪರಿಹಾರ ನೀಡುವುದನ್ನು ಯಾವ ರಾಜ್ಯವೂ ತಡೆಹಿಡಿಯಬಾರದು ಎಂದು ಸುಪ್ರೀಂಕೋರ್ಟ್‌(Supreme Court) ಸೋಮವಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಶಿಫಾರಸಿನಂತೆ ಕೋವಿಡ್‌ನಿಂದ(Covid 19) ಮೃತಪಟ್ಟವರಿಗೆ 50 ಸಾವಿರ ಪರಿಹಾರ ನೀಡಬೇಕು. ಕೋವಿಡ್‌ನಿಂದ ಸಾವು ಸಂಭವಿಸಿದೆ ಎಂದು ಪ್ರಮಾಣಪತ್ರ ಸಲ್ಲಿಸಿದ 30 ದಿನದೊಳಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಈ ಪರಿಹಾರ ಕೊಡಬೇಕು ಎಂದು ನ್ಯಾ| ಎಂ.ಆರ್‌.ಶಾ, ಎ.ಎಸ್‌.ಬೋಪಣ್ಣ ಅವರಿದ್ದ ಪೀಠ ಸೂಚಿಸಿತು. ಅಲ್ಲದೇ, ಈ ಯೋಜನೆಯ ಬಗ್ಗೆ ಪತ್ರಿಕೆ, ಟೀವಿಗಳಲ್ಲಿ ಪ್ರಚಾರ ನೀಡಬೇಕು ಎಂದು ಹೇಳಿತು.

ಅರ್‌ಟಿಪಿಸಿಆರ್‌(RT-PCR) ಪರೀಕ್ಷೆಯಂತಹ ಅಗತ್ಯ ದಾಖಲೆಗಳ ಮೂಲಕ ಸಂಬಂಧಪಟ್ಟಪ್ರಾಧಿಕಾರವು ಮರಣ ಪ್ರಮಾಣಪತ್ರವನ್ನು ಬದಲಿಸಬಹುದು ಎಂದ ಪೀಠ, ಸಾವಿನ ಕಾರಣ ಸರಿ​ಯಾಗಿ ನಮೂ​ದಾ​ಗ​ದಿದ್ದ ಪಕ್ಷ​ದ​ಲ್ಲಿ ​ಸಂಬಂಧಿತ ಕುಟುಂಬ​ಗಳು ಕುಂದುಕೊರೆತ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದು. ಸಮಿ​ತಿಯು ಆಸ್ಪ​ತ್ರೆ​ಗ​ಳಿಂದ ನೇರ​ವಾಗಿ ದಾಖ​ಲೆ​ಗ​ಳನ್ನು ಪಡೆದು ಮೃತ ವ್ಯಕ್ತಿಯ ಸಾವಿನ ಕಾರಣ ತಿಳಿ​ಯ​ಬ​ಹು​ದು ಎಂದಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು