ಲಸಿಕೆ ಪಡೆದವರು ಸಂಪೂರ್ಣ ಸೇಫ್; ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.0.06; ಅಧ್ಯಯನ ವರದಿ!

Published : May 16, 2021, 09:53 PM ISTUpdated : May 16, 2021, 10:03 PM IST
ಲಸಿಕೆ ಪಡೆದವರು ಸಂಪೂರ್ಣ ಸೇಫ್; ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.0.06; ಅಧ್ಯಯನ ವರದಿ!

ಸಾರಾಂಶ

ಕೊರೋನಾ ಲಸಿಕೆ ಪಡೆವರು ಸಂಪೂರ್ಣ ಸೇಫ್ ಅಧ್ಯಯನ ವರದಿಯಿಂದ ಸುರಕ್ಷತಾ ರಿಪೋರ್ಟ್ ಬಹಿರಂಗ

ನವದೆಹಲಿ(ಮೇ.16): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಸಿಕೆಯೊಂದೇ ಪ್ರಮುಖ ಮಾರ್ಗ. ಇದೀಗ ಕೊರೋನಾ ಲಸಿಕೆ ಎಷ್ಟು ಪರಿಣಾಮಕಾರಿ ಅನ್ನೋ ಹಲವು ವರದಿಗಳು ಈಗಾಗಲೇ ಬಹಿರಂಗವಾಗಿದೆ. ಆದರೆ ಇದೀಗ ಲಸಿಕೆ ಪಡೆದವರು ಕೊರೋನಾದಿಂದ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇಕಡಾ 0.06 ಮಾತ್ರ. ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ನಡೆಸಿದ ಅಧ್ಯಯನ ವರದಿಯಲ್ಲಿ ಈ ವಿಚಾರ ಧೃಢಪಟ್ಟಿದೆ.

ರೂಪಾಂತರಿ ವೈರಸ್ ಆತಂಕ ಬೇಡ; 2 ಕೊರೋನಾ ಲಸಿಕೆ ಪರಿಣಾಮಕಾರಿ ಎಂದ ಅಧ್ಯಯನ ವರದಿ

ಲಸಿಕೆ ಪಡೆದವರಿಗೆ ಮತ್ತೆ ಕೊರೋನಾ ಭಾದಿಸುವ ಹಾಗೂ ಸಂಕಷ್ಟಕ್ಕೀಡು ಮಾಡುವ ಸಾಧ್ಯತೆಗಳು  ತೀರಾ ಕಡಿಮೆ. ಅಧ್ಯಯನ ವರದಿ ಪ್ರಕಾರ, ಶೇಕಡಾ 97.38 ಮಂದಿಗೆ ಕೊರೋನಾ ಭಾದಿಸುವುದಿಲ್ಲ. ಒಂದು ವೇಳೆ ಕೊರೋನಾ ಅಂಟಿಕೊಂಡರೂ ಸಮಸ್ಯೆ ಇಲ್ಲವೇ ಇಲ್ಲ. ಕಾರಣ ಆಸ್ಪತ್ರೆ ದಾಖಲಾಗುವ ಸಾಧ್ಯತೆ ಶೇ.0.06% ಮಾತ್ರ.

ಇದಕ್ಕಾಗಿ ಕೋವಿಶೀಲ್ಡ್ ಲಸಿಕೆ ಹಾಕಿದವರಲ್ಲಿ ಮೊದಲ 100 ದಿನಗಳಲ್ಲಿ ರೋಗ ಲಕ್ಷಣದ ವರದಿ ದಾಖಲಾಗಿಲ್ಲ. ಆರಂಭಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ವ್ಯಾಕ್ಸಿನ್ ಹಾಕಲಾಗಿತ್ತು. ಇವರ ಮೇಲೆ ಅಧ್ಯಯನ ನಡೆಸಲಾಗಿದೆ. ಈ ವರದಿಯಲ್ಲಿ ಕೋವಿಶೀಲ್ಡ್ ಲಸಿಕೆ ಹಾಕಿದ ಆರೋಗ್ಯ ಕಾರ್ಯಕರ್ತರಿಗೆ ಮತ್ತೆ ಕೊರೋನಾ ಬಾಧಿಸಿಲ್ಲ. ಕೇವಲ ಶೇ.0.06%  ಮಂದಿ ಮೈಲ್ಡ್ ಸಿಂಪ್ಟಮ್ಸ್ ಮೂಲಕ ಮನೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 

 ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಗೆ ರೋಗಲಕ್ಷಣದ ಕೋವಿಡ್ -19 ನೊಂದಿಗೆ ವರದಿ ಮಾಡಿದ ಆರೋಗ್ಯ ಕಾರ್ಯಕರ್ತರ ಮೇಲೆ ಈ ಅಧ್ಯಯನವನ್ನು ನಡೆಸಲಾಯಿತು.  

ಈ ಅಧ್ಯಯನ ವರದಿ ಇದೀಗ ಭಾರತೀಯರ ಆತ್ಮವಿಶ್ವಾಸ ಹೆಚ್ಚಿಸಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಯಶಸ್ಸು ಸಾಧಿಸಲಿದೆ ಅನ್ನೋ ಮುನ್ಸೂಚನೆ ನೀಡಿದೆ.

ಕೋವಿಡ್ -19 ವ್ಯಾಕ್ಸಿನೇಷನ್ 100 ಪ್ರತಿಶತದಷ್ಟು ರೋಗನಿರೋಧಕ ಶಕ್ತಿಯನ್ನು ಒದಗಿಸುವುದಿಲ್ಲ ಎಂದು ಅಧ್ಯಯನಗಳು ಸೂಚಿಸಿವೆ. ಆದರೆ ಲಸಿಕೆಯಿಂದ ಮತ್ತೆ ಕೊರೋನಾ ಬಾಧಿಸುವ ಇಲ್ಲ ಶೇಕಡಾ 97.38 ರಷ್ಟು ಇಲ್ಲ. ವ್ಯಾಕ್ಸಿನೇಷನ್‌ನಿಂದ ತೀವ್ರ ಕಾಯಿಲೆಗೆ ಗುರಿಯಾಗುವುದಿಲ್ಲ. . ಐಸಿಯು ಪ್ರವೇಶ ಅಥವಾ ಸಾವು ಇಲ್ಲವೇ ಇಲ್ಲ.  ನಮ್ಮ ಅಧ್ಯಯನವು ವ್ಯಾಕ್ಸಿನೇಷನ್ ಅಭಿಯಾನಕ್ಕೆ ಮತ್ತಷ್ಟು ಪುಷ್ಠಿ ನೀಡಲಿದೆ ಎಂದು ಪೀಡಿಯಾಟ್ರಿಕ್ ಗ್ಯಾಸ್ಟ್ರೋಎಂಟರಾಲಜಿಯ ಹಿರಿಯ ಸಲಹೆಗಾರ ಡಾ. ಸಿಬಲ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!