ರಾಷ್ಟ್ರಪತಿ, ಪ್ರಧಾನಿ ಸಂಚಾರಕ್ಕೆ ಹೊಸ ವಿಮಾನ : ಏನಿದರ ವಿಶೇಷತೆ

Kannadaprabha News   | Asianet News
Published : Oct 02, 2020, 10:38 AM ISTUpdated : Oct 02, 2020, 10:48 AM IST
ರಾಷ್ಟ್ರಪತಿ, ಪ್ರಧಾನಿ ಸಂಚಾರಕ್ಕೆ ಹೊಸ ವಿಮಾನ : ಏನಿದರ ವಿಶೇಷತೆ

ಸಾರಾಂಶ

ಪ್ರಧಾನಮಂತ್ರಿಯಂತಹ ಗಣ್ಯಾತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಮಾನವೊಂದು ಅಮೆರಿಕದಿಂದ ದೆಹಲಿಗೆ ಬಂದಿಳಿದಿದೆ.  

ನವದೆಹಲಿ (ಅ.02):  ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯಂತಹ ಗಣ್ಯಾತಿಗಣ್ಯ ವ್ಯಕ್ತಿಗಳ ಓಡಾಟಕ್ಕೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ವಿಮಾನವೊಂದು ಅಮೆರಿಕದಿಂದ ಗುರುವಾರ ದೆಹಲಿಗೆ ಬಂದಿಳಿದಿದೆ.

ಕ್ಷಿಪಣಿ ದಾಳಿ ನಡೆದರೂ ಜಗ್ಗದ ಈ ವಿಮಾನ ಅಮೆರಿಕ ಅಧ್ಯಕ್ಷರು ಬಳಸುವ ‘ಏರ್‌ಫೋರ್ಸ್‌ ಒನ್‌’ ರೀತಿಯೇ ಭದ್ರತಾ ಸೌಕರ್ಯ ಹೊಂದಿದೆ. ಇದನ್ನು ‘ಏರ್‌ ಇಂಡಿಯಾ ಒನ್‌’ ಎಂದು ಸಂಬೋಧಿಸಲಾಗುತ್ತದೆ.

ಗಣ್ಯರ ಸಂಚಾರಕ್ಕೆ ಹಲವು ಭದ್ರತಾ ಅಂಶಗಳನ್ನು ಹೊಂದಿದ ಎರಡು ವಿಮಾನಗಳನ್ನು ಮೀಸಲಿಡಲು ಸರ್ಕಾರ ನಿರ್ಧರಿಸಿತ್ತು. ಅದರ ಭಾಗವಾಗಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾದಲ್ಲಿ ಪ್ರಯಾಣಿಕ ಸೇವೆಯಲ್ಲಿ ನಿರತವಾಗಿದ್ದ ಎರಡು ವಿಮಾನಗಳನ್ನು ಅಮೆರಿಕದ ಬೋಯಿಂಗ್‌ ಕಂಪನಿಗೆ 2018ರಲ್ಲಿ ಕಳುಹಿಸಿ, ಮಾರ್ಪಾಡು ಮಾಡಲು ಸೂಚಿಸಲಾಗಿತ್ತು. ಈ ವಿಮಾನಗಳು ಜುಲೈನಲ್ಲೇ ಭಾರತಕ್ಕೆ ಸಿಗಬೇಕಾಗಿದ್ದವು. ಆದರೆ ಕೊರೋನಾ ಕಾರಣ ಜುಲೈನಲ್ಲಿ, ತಾಂತ್ರಿಕ ಕಾರಣ ಆಗಸ್ಟ್‌ನಲ್ಲಿ ಹಸ್ತಾಂತರ ಮುಂದಕ್ಕೆ ಹೋಗಿತ್ತು.

ಇದೀಗ ಗುರುವಾರ ಮಧ್ಯಾಹ್ನ 3ಕ್ಕೆ ಅಮೆರಿಕದ ಟೆಕ್ಸಾಸ್‌ನಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ಒಂದು ವಿಮಾನ ಬಂದಿಳಿದಿದೆ. ಇನ್ನೊಂದು ಶೀಘ್ರದಲ್ಲೇ ಬರಲಿದೆ. ವಿಮಾನ ಖರೀದಿ, ವಿವಿಐಪಿಗಳ ಓಡಾಟಕ್ಕೆ ತಕ್ಕಂತೆ ಬದಲಾವಣೆ ಮಾಡಲು 8400 ಕೋಟಿ ರು. ಖರ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾನಂಗಳದಲ್ಲಿ ಫೋಟೋಶೂಟ್; ಲೋಹದ ಹಕ್ಕಿಗಳಿಂದ ಸಖತ್ ಪೋಸ್; ಫೋಟೋಗ್ರಾಫರ್‌ಗೆ ಶಹಬ್ಬಾಸ್! ..

ಬಿ777 ಎಂಬ ಹೆಸರಿನ ಈ ವಿಮಾನಗಳು ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಹೊಂದಿದೆ. ‘ಲಾಜ್‌ರ್‍ ಏರ್‌ಕ್ರಾಫ್ಟ್‌ ಇನ್‌ಫ್ರಾರೆಡ್‌ ಕೌಂಟರ್‌ಮೆಸ​ರ್‍ಸ್’ (ಲೆಎಐಆರ್‌ಸಿಎಂ) ಹಾಗೂ ‘ಸೆಲ್ಪ್‌ ಪ್ರೊಟೆಕ್ಷನ್‌ ಸೂಟ್ಸ್‌’ (ಎಸ್‌ಪಿಎಸ್‌)ಗಳು ಈ ವಿಮಾನದಲ್ಲಿದ್ದು, ಸಮಾಜ ವಿದ್ರೋಹಿ ಶಕ್ತಿಗಳು ಹೆಗಲ ಮೇಲಿಟ್ಟು ನಡೆಸುವ ಕ್ಷಿಪಣಿ ದಾಳಿಯಿಂದ ರಕ್ಷಣೆ ಒದಗಿಸಲಿದೆ. ಈ ಸಾಧನಗಳನ್ನು 1400 ಕೋಟಿ ರು. ವೆಚ್ಚದಲ್ಲಿ ಭಾರತಕ್ಕೆ ಒದಗಿಸಲು ಫೆಬ್ರವರಿಯಲ್ಲಿ ಅಮೆರಿಕ ನಿರ್ಧಾರ ಕೈಗೊಂಡಿತ್ತು.

ಏರ್‌ ಇಂಡಿಯಾ ವಿಮಾನದ ಪೈಲಟ್‌ಗಳ ಬದಲಿಗೆ ಹೊಸ ವಿಮಾನವನ್ನು ವಾಯುಪಡೆ ಪೈಲಟ್‌ಗಳು ಚಾಲನೆ ಮಾಡಲಿದ್ದಾರೆ. ಸದ್ಯ ದೇಶದ ವಿವಿಐಪಿಗಳು ತಮ್ಮ ವಿಮಾನ ಸಂಚಾರಕ್ಕೆ ಏರ್‌ ಇಂಡಿಯಾದ ಬಿ 747 ವಿಮಾನವನ್ನು ಬಳಕೆ ಮಾಡುತ್ತಿದ್ದಾರೆ. ಅದನ್ನೂ ಏರ್‌ ಇಂಡಿಯಾ ಒನ್‌ ಎಂದು ಕರೆಯಲಾಗುತ್ತದೆ. ಗಣ್ಯರ ಸಂಚಾರ ಇಲ್ಲದ ಸಂದರ್ಭದಲ್ಲಿ ಏರ್‌ ಇಂಡಿಯಾ ಸಂಸ್ಥೆ ಈ ವಿಮಾನಗಳನ್ನು ಪ್ರಯಾಣಿಕರ ಸಂಚಾರಕ್ಕೆ ನಿಯೋಜನೆ ಮಾಡುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು