ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ಶೀಲ್ಡ್ ಕೊಟ್ಟ ಸೋನು ಸೂದ್..!

Suvarna News   | Asianet News
Published : Jul 17, 2020, 03:39 PM IST
ಮಹಾರಾಷ್ಟ್ರ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ಶೀಲ್ಡ್ ಕೊಟ್ಟ ಸೋನು ಸೂದ್..!

ಸಾರಾಂಶ

ಕೊರೋನಾ ಕಷ್ಟಕಾಲ ಆರಂಭವಾದಾಗಿನಿಂದ ಜನರ ಸೇವೆಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ತಮ್ಮ ಮಾನವೀಯ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್‌ ಸಿಬ್ಬಂದಿಗೆ ಸುಮಾರು 25 ಸಾವಿರ ಮುಖಗವಸುಗಳನ್ನು ವಿತರಿಸಿದ್ದಾರೆ.

ಕೊರೋನಾ ಕಷ್ಟಕಾಲ ಆರಂಭವಾದಾಗಿನಿಂದ ಜನರ ಸೇವೆಗೆ ನಿಂತಿರುವ ಬಾಲಿವುಡ್ ನಟ ಸೋನು ಸೂದ್ ಮತ್ತೊಮ್ಮೆ ತಮ್ಮ ಮಾನವೀಯ ಕೆಲಸದ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪೊಲೀಸ್‌ ಸಿಬ್ಬಂದಿಗೆ ಸುಮಾರು 25 ಸಾವಿರ ಮುಖಗವಸುಗಳನ್ನು ವಿತರಿಸಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ ಶೀಳ್ಡ್ ನೀಡಿರುವುದಾಗಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ ತಿಳಿಸಿದ್ದಾರೆ. ಸೋನು ಸೂದ್‌ಗೆ ಥ್ಯಾಂಕ್ಸ್ ಹೇಳಿರುವ ಸಚಿವರು ಅವರೊಂದಿಗಿನ ಫೋಟೋವನ್ನು ಶೇರ್ ಮಾಡಿದ್ದಾರೆ.

ಬಾಲಿವುಡ್ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ಸ್‌ಗೆ ರೇಷನ್ ಕಿಟ್ ನೀಡಿದ ಸೋನು ಸೂದ್

ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ ಶೀಲ್ಡ್ ಕೊಟ್ಟ ನಟ ಸೋಜು ಸೂದ್‌ ಜೀ ಅವರಿಗೆ ಧನ್ಯವಾದಗಳು ಎಂದು ಅವರು ಬರೆದುಕೊಂಡಿದ್ದಾರೆ. ಕೊರೋನಾ ಭಾರತಕ್ಕೆ ಕಾಲಿಟ್ಟಾಗಿನಿಂದಲೂ ಜನರಿಗೆ ನೆರವಾಗುತ್ತಲೇ ಬಂದಿದ್ದಾರೆ ಸೋನು ಸೂದ್. ಲಾಕ್‌ಡೌನ್ ಸಂದರ್ಭ ಬಹಳಷ್ಟು ಜನರಿಗೆ ತವರು ಸೇರಲು ಬಸ್, ರೈಲು, ವಿಮಾನಗಳ ವ್ಯವಸ್ಥೆಯನ್ನೂ ಮಾಡಿದ್ದರು. ಇದೀಗ ಈ ಸಂಬಂಧವೇ ಪುಸ್ತಕವನ್ನು ಹೊರತರುವ ಸಿದ್ಧತೆಯಲ್ಲಿದ್ದಾರೆ ನಟ.

ಕಳೆದ ಮೂರು ತಿಂಗಳು ನನ್ನ ಪಾಲಿಗೆ ಬದುಕು ಬದಲಾಯಿಸುವ ಅನುಭವವಾಗಿತ್ತು. ವಲಸಿಗರ ಜೊತೆ ದಿನದ 16-18 ಗಂಟೆ ಕಳೆದ ಅನುಭವ ಅವರ ನೋವನ್ನು ಅರ್ಥ ಮಾಡಿಸಿದೆ. ಅವರು ಅವರ ಮನೆ ಕಡೆ ಹೊರಟು ನಿಂತಾಗ ನನ್ನ ಮನಸಿಗಾದ ಸಮಾಧಾನ, ಖುಷಿ ಅಪಾರ. ಅವರ ನಗುವಿನ ಮುಖ, ಸಂತೋಷದ ಕಣ್ಣೀರು ನನ್ನ ಜೀವನದ ವಿಶೇಷ ಅನುಭವ. ಕೊನೆಯ ಕಾರ್ಮಿಕನು ತನ್ನ ಪ್ರೀತಿಯ ಮನೆಯನ್ನು ಸೇರುವ ತನಕ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಅವರು ನಟ ಸೋನು ಹೇಳಿದ್ದಾರೆ.

ಆರತಿ ಬೆಳಗಿ ಸೋನು ಸೂದ್‌ಗೆ ಇಡ್ಲಿ ಮಾರಾಟಗಾರರ ಧನ್ಯವಾದ

ನಾನು ಈ ಕೆಲಸ ಮಾಡುವುದ್ಕಾಗಿಯೇ ಮುಂಬೈಗೆ ಬಂದಿದ್ದೇನೇನೋ ಎಂದೆನಿಸುತ್ತದೆ. ನನ್ನ ಹೃದಯ ಮುಂಬೈನಲ್ಲಿ ಮಿಡಿಯುವಾಗ ಅದರ ಸಣ್ಣ ಭಾಗಗಳು ಉತ್ತರ ಪ್ರದೇಶ, ಬಿಹಾರ, ಝಾರ್ಖಂಡ್, ಅಸ್ಸಾಂ ಮತ್ತು ಇತರ ರಾಜ್ಯದಲ್ಲಿಯೂ ಇದೆ ಎನಿಸುತ್ತಿದೆ. ಅಲ್ಲೆಲ್ಲವೂ ನನಗೆ ಹೊಸ ಸ್ನೇಹಿತರಿದ್ದಾರೆ, ಅವರೊಂದಿಗೆ ಆಳವಾದ ಸಂಬಂಧವಿದೆ. ನಾನು ಇವೆಲ್ಲವನ್ನೂ ಪುಸ್ತಕ ರೂಪದಲ್ಲಿ ಸಂರಕ್ಷಿಸಲು ನಿರ್ಧರಿಸಿದ್ದೇನೆ ಎಂದು ಅವರು ತಮ್ಮ ಪುಸ್ತಕದ ಬಗ್ಗೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ರೈಲ್ವೆ ಪ್ರಯಾಣ, ಟಿಕೆಟ್​ ಬುಕಿಂಗ್​ ಎಲ್ಲವೂ ಬಲು ಸುಲಭ : ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್​ನಲ್ಲಿ!