ಬಿಗ್ ಮೆಸೇಜ್ ಪಾಸ್ ಮಾಡಿದ ಸೋನಂ ವಾಂಗ್ಚುಕ್.. ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ 3 ಕಂಡೀಷನ್ಸ್

Published : Jul 20, 2026, 08:54 AM IST
Sonam Wangchuk

ಸಾರಾಂಶ

ಕಳೆದ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್ಚುಕ್, ತಮ್ಮ ಮುಷ್ಕರವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರದ ಮುಂದೆ ಮೂರು ಕಟ್ಟುನಿಟ್ಟಿನ ಷರತ್ತುಗಳನ್ನು ಇಟ್ಟಿದ್ದಾರೆ. ಪರೀಕ್ಷಾ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಸರ್ಕಾರದ ಹೊಣೆಗಾರಿಕೆ, ಸಂಸತ್ತಿಗೆ ತೆರಳಲು ಅವಕಾಶ, ಮತ್ತು ಶಿಕ್ಷಣ ಸುಧಾರಣೆಯ ಭರವಸೆ ಈ ಷರತ್ತುಗಳಲ್ಲಿ ಸೇರಿವೆ.

ನವದೆಹಲಿ: ಕಳೆದ 21 ದಿನಗಳಿಂದಲೂ ಪ್ರತಿಭಟಿಸುತ್ತಿರುವ ಲಡಾಖ್‌ನ ಖ್ಯಾತ ಪರಿಸರ ಮತ್ತು ಶಿಕ್ಷಣ ಹೋರಾಟಗಾರ ಸೋನಮ್ ವಾಂಗ್ಚುಕ್, ಇಂದು (ಜುಲೈ 20) ತಮ್ಮ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ. ಇದಕ್ಕಾಗಿ ಅವರು ಕೇಂದ್ರ ಸರ್ಕಾರ ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಂದೆ 3 ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದಾರೆ. ಈ ಷರತ್ತುಗಳು ಈಡೇರಿದರೆ ಮಾತ್ರ ತಮ್ಮ ಮುಷ್ಕರಕ್ಕೆ ಮಂಗಲ ಹಾಡುವುದಾಗಿ ತಿಳಿಸಿದ್ದಾರೆ.

ವಾಂಗ್ಚುಕ್ ವಿಧಿಸಿರುವ ಆ 3 ಷರತ್ತುಗಳು

'ಎಕ್ಸ್' (X) ಮೂಲಕ ಆಸ್ಪತ್ರೆಯ ಹಾಸಿಗೆಯಿಂದಲೇ ಸಂದೇಶ ರವಾನಿಸಿರುವ ವಾಂಗ್ಚುಕ್, ಈ ಕೆಳಗಿನ ಪರಿಸ್ಥಿತಿಗಳಲ್ಲಿ ಮಾತ್ರ ಉಪವಾಸ ಕೈಬಿಡುವುದಾಗಿ ಹೇಳಿದ್ದಾರೆ.

  • ಸರ್ಕಾರದ ಹೊಣೆಗಾರಿಕೆ: ಶಿಕ್ಷಣ ವ್ಯವಸ್ಥೆಯಲ್ಲಿ ಉಂಟಾಗಿರುವ ಇತ್ತೀಚಿನ ಸರಣಿ ವೈಫಲ್ಯಗಳು ಮತ್ತು ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ (Paper Leaks) ಪ್ರಕರಣಗಳಿಗೆ ಕೇಂದ್ರ ಸರ್ಕಾರವು ನೇರ ಹೊಣೆಗಾರಿಕೆ ವಹಿಸಿಕೊಳ್ಳಬೇಕು.
  • ಸಂಸತ್ ಮೆಟ್ಟಿಲಿಗೆ ಅವಕಾಶ: ತಮಗೆ ಮತ್ತು ಅವರ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕತ್ವಕ್ಕೆ ಸಂಸತ್ತಿನ ಮೆಟ್ಟಿಲುಗಳವರೆಗೆ ತೆರಳಲು ಅವಕಾಶ ನೀಡಬೇಕು. ಅಲ್ಲಿ ಸಂಸದರು ಮತ್ತು ವಿವಿಧ ಪಕ್ಷಗಳ ನಾಯಕರು ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸುವುದಾಗಿ ಭರವಸೆ ನೀಡಬೇಕು.
  • ಆಸ್ಪತ್ರೆಗೆ ಭೇಟಿ: ಒಂದು ವೇಳೆ ಆರೋಗ್ಯದ ಸಮಸ್ಯೆಯಿಂದ ತಮಗೆ ಸಂಸತ್ತಿಗೆ ಹೋಗಲು ಸಾಧ್ಯವಾಗದಿದ್ದರೆ, ಗೌರವಾನ್ವಿತ ಸಂಸದರು ಅಥವಾ ರಾಜಕೀಯ ನಾಯಕರೇ ತಾವು ದಾಖಲಾಗಿರುವ ಸಫ್ದರ್‌ಜಂಗ್ ಆಸ್ಪತ್ರೆಗೆ ಭೇಟಿ ನೀಡಿ. ಶಿಕ್ಷಣ ವ್ಯವಸ್ಥೆಯ ಸುಧಾರಣೆ ಬಗ್ಗೆ ಭರವಸೆ ನೀಡಬೇಕು.

ಇಂದೇ ಏಕೆ?

ಇಂದಿನಿಂದ (ಸೋಮವಾರ) ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ. ಇದೇ ಸಂದರ್ಭದಲ್ಲಿ ವಾಂಗ್ಚುಕ್ ಅವರ ಬೆಂಬಲಿಗರು 'ಚಲೋ ಸಂಸದ್' (ಸಂಸತ್ತಿಗೆ ನಡಿ) ಮೆರವಣಿಗೆಯನ್ನು ಹಮ್ಮಿಕೊಂಡಿದ್ದಾರೆ. ಈ ಮೆರವಣಿಗೆಯ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮುಖ್ಯ ಬೇಡಿಕೆ ಏನು?

ನೀಟ್ (NEET) ಪರೀಕ್ಷೆಯ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂಬುದು ಸೋನಮ್ ವಾಂಗ್ಚುಕ್ ಮತ್ತು ಸಿಜೆಪಿಯ ಪ್ರಮುಖ ಆಗ್ರಹವಾಗಿದೆ. ತಮ್ಮನ್ನು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ವಾಂಗ್ಚುಕ್ ಕಿಡಿಕಾರಿದ್ದಾರೆ. ನನ್ನ ವಾಕ್ ಸ್ವಾತಂತ್ರ್ಯ, ಚಲನವಲನ ಮತ್ತು ಎಲ್ಲಾ ರೀತಿಯ ಸಂವಹನವನ್ನು ಇಲ್ಲಿ ನಿರ್ಬಂಧಿಸಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಜುಲೈ 18 ರಂದು ಪೊಲೀಸರು ಅವರನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸೋನಮ್ ವಾಂಗ್ಚುಕ್ ಅವರ ಈ ಷರತ್ತುಗಳಿಗೆ ಸರ್ಕಾರ ಅಥವಾ ಸಂಸದರು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಇಂದು ಅವರ 21 ದಿನಗಳ ಉಪವಾಸಕ್ಕೆ ತೆರೆ ಬೀಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದ್ಯಾರ್ಥಿನಿಯ ಖಾಸಗಿ ಫೋಟೋ ಇಟ್ಕೊಂಡು ಬ್ಲಾಕ್‌ಮೇಲ್; IPL ಸ್ಟಾರ್ ಬ್ಯಾಟರ್‍‌ನ ಬಂಧನಕ್ಕೆ ಹೈಕೋರ್ಟ್‌ ಆದೇಶ
National News Live: 'ರೋಹಿತ್ ಶತಕ ಬಾರಿಸಿಯೂ ಬ್ಯಾಟ್ ಎತ್ತಲಿಲ್ಲ' ಇದು ಕೊನೆಯ ODI ಆಗಿತ್ತಾ? ಗಿಲ್ ಹೇಳಿದ್ದೇನು?