ಜಾತ್ಯತೀತ ಪದ ನೆಲಬಾಂಬ್‌ ಇದ್ದಂತೆ, ತೆಗೀರಿ : ಆರ್ಗನೈಸರಲ್ಲಿ ಲೇಖನ

Kannadaprabha News   | Kannada Prabha
Published : Jul 15, 2025, 04:32 AM IST
ORGANIZER

ಸಾರಾಂಶ

‘ದೇಶದಲ್ಲಿ ತುರ್ತುಸ್ಥಿತಿ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳು ಸೈದ್ಧಾಂತಿಕ ನೆಲಬಾಂಬ್‌ಗಳಿದ್ದಂತೆ’ ಎಂದು ಕರ್ನಾಟಕ ಮೂಲದ ಡಾ।ನಿರಂಜನ್‌ ಪೂಜಾರ್‌, ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಬರೆದಿದ್ದಾರೆ.

ನವದೆಹಲಿ: ‘ದೇಶದಲ್ಲಿ ತುರ್ತುಸ್ಥಿತಿ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳು ಸೈದ್ಧಾಂತಿಕ ನೆಲಬಾಂಬ್‌ಗಳಿದ್ದಂತೆ’ ಎಂದು ಕರ್ನಾಟಕ ಮೂಲದ ಡಾ।ನಿರಂಜನ್‌ ಪೂಜಾರ್‌, ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಬರೆದಿದ್ದಾರೆ.

ಆ 2 ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಸಂಘದ ಪರ್ಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಆಗ್ರಹದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

‘ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತತೆಯ ಪುನರ್ವಿಮರ್ಶೆ’ ಎಂಬ ತಲೆಬರಹದ ಲೇಖನದಲ್ಲಿ, ‘ಧಾರ್ಮಿಕ ಮೌಲ್ಯಗಳನ್ನು ಬುಡಮೇಲು ಮಾಡಲು ಮತ್ತು ರಾಜಕೀಯ ಓಲೈಕೆಗಾಗಿ ಸಮಾಜವಾದಿ, ಜಾತ್ಯತೀತ ಪದಗಳ ಸೇರ್ಪಡೆಯಾಗಿತ್ತು. ಇವು ಭಾರತದ ನಾಗರಿಕತೆಯ ಗುರುತು ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿವೆ. ಇವುಗಳನ್ನು ಸಂವಿಧಾನ ಸಭೆಯಲ್ಲಿ ಅಂಗೀಕರಿಸಲಾಗಿರಲಿಲ್ಲ. ತುರ್ತುಸ್ಥಿತಿ ಸಮಯದಲ್ಲಿ ಅವುಗಳ ಸೇರ್ಪಡೆ ಸಾಂವಿಧಾನಿಕ ವಂಚನೆ’ ಎಂದು ಪೂಜಾರ್‌ ಬರೆದಿದ್ದಾರೆ. ಅಂತೆಯೇ, ‘ನಿಜವಾಗಿಯೂ ಅಂಬೆಡ್ಕರ್‌ ಅವರನ್ನು, ಪ್ರಜಾಪ್ರಭುತ್ವವನ್ನು ಗೌರವಿಸುವುದಾದರೆ, ಭಾರತದಲ್ಲಿ ನಂಬಿಕೆಯಿದ್ದರೆ, ಭಾರತವು ಮೂಲ ಪೀಠಿಕೆಗೆ ಮರಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

  •  ದೇಶದಲ್ಲಿ ತುರ್ತುಸ್ಥಿತಿ ವೇಳೆ ಸಂವಿಧಾನದ ಪೀಠಿಕೆಗೆ ಸೇರಿಸಲಾದ ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳು
  • ಸಮಾಜವಾದಿ ಮತ್ತು ಜಾತ್ಯತೀತ ಎಂಬ ಪದಗಳು ಸೈದ್ಧಾಂತಿಕ ನೆಲಬಾಂಬ್‌ಗಳಿದ್ದಂತೆ
  • ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನ
  • ಕರ್ನಾಟಕ ಮೂಲದ ಡಾ।ನಿರಂಜನ್‌ ಪೂಜಾರ್‌ರ ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್‌ನಲ್ಲಿ ಪ್ರಕಟವಾದ ಲೇಖನ

ಆ 2 ಪದಗಳನ್ನು ಸಂವಿಧಾನದಿಂದ ತೆಗೆದುಹಾಕಬೇಕು ಎಂದು ಸಂಘದ ಪರ್ಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರ ಆಗ್ರಹದ ಬೆನ್ನಲ್ಲೇ ಈ ಬೆಳವಣಿಗೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’
ಅರುಣಾಚಲದ ಮೇಲೆ ಚೀನಾ ಕಣ್ಣು : ಅಮೆರಿಕ