ಆಹಾ... ತಂಪಾದ ಎಸಿ ಗಾಳಿಗೆ ಕನ್ನ ಹಾಕಲು ಹೊರಟ ಮನೆಯಲ್ಲೇ ನಿದ್ದೆಗೆ ಜಾರಿದ ಕಳ್ಳ!

Published : Sep 19, 2020, 05:08 PM IST
ಆಹಾ... ತಂಪಾದ ಎಸಿ ಗಾಳಿಗೆ ಕನ್ನ ಹಾಕಲು ಹೊರಟ ಮನೆಯಲ್ಲೇ ನಿದ್ದೆಗೆ ಜಾರಿದ ಕಳ್ಳ!

ಸಾರಾಂಶ

ಕಳ್ಳತನ ಮಾಡಲು ಹೀದ ಮನೆಯಲ್ಲೇ ನಿದ್ದೆಗೆ ಜಾರಿದ ಕಳ್ಳ| ಎಸಿ ಗಾಳಿಗೆ ಕಳ್ಳ ಫುಲ್ ಫಿದಾ| ಬೆಳಗ್ಗೆದ್ದಾಗ ಪೊಲೀಸರು ಹಾಜರ್

ಅಮರಾವತಿ(ಸೆ. 19): ಕೆಲಸದ ಒತ್ತಡ ಹಚ್ಚಿದಾಗ ಚಿಕ್ಕದೊಂದು ಬ್ರೇಕ್ ಪಡೆಯಬೇಕೆಂಬ     ಫೀಲ್ ಹುಟ್ಟಿಕೊಳ್ಳುವುದು ಸಹಜ, ಹೀಗಿರುವಾಗ ತಂಪಾದ ಎಸಿ ಗಾಳಿ ಬೀಸುತ್ತಿದ್ದರೆ? ನಿದ್ದೆಗೆ ಜಾರದಂತೆ ತಡೆಯಲು ಸಾಧ್ಯವೇ ಇಲ್ಲ. ಸದ್ಯ ಇದೇ ಪಸ್ಥಿತಿ ಕಳ್ಳನೊಬ್ಬನಿಗೆ ಎದುರಾಗಿದೆ. ಎಸಿ ಗಾಳಿಗೆ ಮನಸೋತ ಈ ಕಳ್ಳ, ಕನ್ನ ಹಾಕಲು ಬಂದ ಮನೆಯಲ್ಲೇ ನಿದ್ದೆಗೆ ಜಾರಿದ್ದಾನೆ. 

ಹೌದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ 22 ವರ್ಷದ ಕಳ್ಳನೊಬ್ಬ ಕನ್ನ ಹಾಕಲು ಬಂದ ಮನೆಯಲ್ಲಿ ಎಸಿ ಹಾಕಿದ್ದ ಕೋಣೆಯಲ್ಲೇ ನಿದ್ದೆಗೆ ಜಾರಿದ್ದಾನೆ. ಸದ್ಯ ಈ ಕಳ್ಳನನ್ನು ಬಾಬು ಎಂದು ಗುರುತಿಸಲಾಗಿದ್ದು, ಈತ ಪೆಟ್ರೋಲ್ ಬಂಕ್ ಮಾಲೀಕನೊಬ್ಬನ ಮನೆಗೆ ಕನ್ನ ಹಾಕಲು ಬಂದಿದ್ದ. ಈತ ಕಳ್ಳತನಕ್ಕೂ ಮೊದಲು ಈ ಮನೆ ಬಳಿ ತೆರಳಿ ಎಲ್ಲಾ ಬಗೆಯ ಯೋಜನೆ ಹಾಕಿಕೊಂಡಿದ್ದ. 

ಇಷ್ಟೆಲ್ಲಾ ನಡೆದ ಬಳಿಕ ಆತ ಸೆಪ್ಟೆಂಬರ್ 12ರಂದು ಇಲ್ಲಿ ಕಳ್ಳತನ ಮಾಡಲು ಯೋಜನೆ ಹಾಕಿಕೊಂಡಿದ್ದ. ತನ್ನ ಯೋಜನೆಯಂತೆ ಈತ ಬೆಳಗ್ಗಿನ ಜಾವ  4 ಗಂಟೆಗೆ ಶಕ್ತಿ ವೆಂಕಟ ರೆಡ್ಡಿ ಮನೆಗೆ  ಎಂಟ್ರಿ ಕೊಟ್ಟಿದ್ದ. ಎಸಿ ರೂಂಗೆ ಎಂಟ್ರಿ ಕೊಡುವವರೆಗೂ ಎಲ್ಲವೂ ಅಂದುಕೊಂಡಂತೆ ನಡೆದಿತ್ತು. ಆದರೆ ತಂಪಾದ ಗಾಳಿ ಬೀಸುತ್ತಿದ್ದಂತೆಯೇ ಸುಸ್ತಾಗಿದ್ದ ಬಾಬು ಅಲ್ಲೇ ನಿದ್ದೆಗೆ ಜಾರಿದ್ದ. 

ಕೆಲ ಸಮಯ ರೆಸ್ಟ್ ತೆಗೆದುಕೊಂಡು ತೆರಳುವುದಾಗಿ ಯೋಚಿಸಿದ ಕಳ್ಳ ಮಾಲೀಕನ ಬೆಡ್‌ ಮೇಲೇ ನಿದ್ದೆಗೆ ಜಾರಿದ. ಆದರೆ ಎಲ್ಲವೂ ಉಲ್ಟಾ ಹೊಡೆದಿತ್ತು. ಕೆಲ ಮಯ ಅಂದುಕೊಂಡ ಕಳ್ಳನಿಗೆ ಗಾಢವಾಗಿ ನಿದ್ದೆ ಆವರಿಸಿತ್ತು. 

ಆದರೆ ಕಳ್ಳನ ಗೊರಕೆ ಸದ್ದಿನಿಂದ ಎಚ್ಚೆತ್ತ ಮನೆ ಮಂದಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಬೆಳಗ್ಗೆ 7.30 ರ ಸಮಯಕ್ಕೆ ತಲುಪಿ ಬಾಬುನನ್ನು ಬಂಧಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು: ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ
India Latest News Live: ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು - ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ