
ತಿರುವನಂಥಪುರಂ(ಜು.09): 2ನೇ ಅಲೆ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಮೂರನೇ ಅಲೆ ಆರಂಭದ ಭೀತಿ ಉಂಟಾಗಿದೆ. ಹೌದು ಕೇರಳದಲ್ಲಿ ಸಕ್ರಿಯ ಸೋಂಕಿನ ಪ್ರಮಾಣ ಕೇವಲ 10 ದಿನಗಳಲ್ಲಿ 12,000 ಹೆಚ್ಚಾಗಿದೆ. ಜೂ.28ರಂದು ಕೇರಳದಲ್ಲಿ 96,012 ಸಕ್ರಿಯ ಕೇಸ್ ಇತ್ತು. ಜೂ.8ರ ವೇಳೆ ಅದೀಗ 1.10ಲಕ್ಷಕ್ಕೆ ಏರಿಕೆಯಾಗಿದೆ.
ಜು.5ರಿಂದ ಮೂರೇ ದಿನದ ಅಂತದಲ್ಲಿ 7,300 ಸಕ್ರಿಯ ಪ್ರಕರಣಗಳು ಹೆಚ್ಚಾಗಿವೆ. ಅಷ್ಟೇ ಅಲ್ಲದೆ ರಾಜ್ಯದ ದೈನಂದಿನ ಸೋಂಕು ಪ್ರಮಾಣವೂ ದ್ವಿಗುಣವಾಗುತ್ತಿದೆ. ಜೂ.28ರಂದು 8,063 ಪ್ರಕರಣಗಳು ದೃಢಪಟ್ಟಿದ್ದವು, ಆದರೆ ಗುರುವಾರ ಒಂದೇ ದಿನ 13,772 ಕೇಸ್ ಪತ್ತೆಯಾಗಿದೆ. ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ 1.23 ಲಕ್ಷ ಪ್ರಕರಣಗಳು ದೃಢಪಟ್ಟಿವೆ.
ಜೊತೆಗೆ ಸಾವಿನ ಪ್ರಮಾಣವೂ ದ್ವಿಗುಣವಾಗುತ್ತಿದೆ. ಜೂ.28ರಿಂದೀಚೆಗೆ 1119 ಸಾವು ಸಂಭವಿಸಿದೆ. ಗುರುವಾರ ಒಂದೇ ದಿನ 57 ಮಂದಿ ಮೃತಪಟ್ಟಿದ್ದಾರೆ. ಕೇವಲ 2 ತಿಂಗಳಲ್ಲಿ ಕೋವಿಡ್ ಸೋಂಕಿಗೆ ಬಲಿಯಾದವರ ಸಂಖ್ಯೆ ದುಪ್ಪಟ್ಟಾಗಿದೆ. ಮೇ 6ರಂದು ರಾಜ್ಯದಲ್ಲಿ ಕೋವಿಡ್ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 6,339 ಇತ್ತು. ಆದರೆ ಜೂ.16ರ ವೇಳೆ ಈ ಸಂಖ್ಯೆ 11,508ಕ್ಕೆ ಏರಿಕೆಯಾಗಿದೆ. ಈಗ ಒಟ್ಟು ಆವಿನ ಪ್ರಮಾಣ 14,250ಕ್ಕೆ ತಲುಪಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ