
ಕೋಲ್ಕತಾ[ನ.21]: ಗರಿಗರಿಯಾದ 2000, 500 ಮತ್ತು 100 ರು. ಮೌಲ್ಯದ ನೋಟುಗಳ ಸುರಿಮಳೆಯಾಗುತ್ತೆ ಎಂದರೆ ನಂಬಲು ಸಾಧ್ಯವೇ? ಇಂಥದೆಲ್ಲಾ ಕನಸಲ್ಲಿ ಮಾತ್ರ ನಡೆಯಲು ಸಾಧ್ಯ ಅಂದುಕೊಂಡರೆ ತಪ್ಪಾದೀತು.
ಹೌದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದ ಬೃಹತ್ ಕಟ್ಟಡವೊಂದರ 6ನೇ ಮಹಡಿಯಿಂದ ನೋಟುಗಳ ಸುರಿಮಳೆಯಾಗಿದೆ. ಈ ಕುರಿತಾದ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿವೆ.
ಅಷ್ಟಕ್ಕೂ ಆಗಿದ್ದೇನು ಅಂದರೆ, ಇಲ್ಲಿನ ಬೃಹತ್ ಕಟ್ಟಡದಲ್ಲಿರುವ ಆಮದು-ರಫ್ತು ಕಾರ್ಯ ಚಟುವಟಿಕೆಯಲ್ಲಿ ತಲ್ಲೀನವಾದ ಕಂಪನಿಯೊಂದು ಸುಂಕ ಪಾವತಿಸದೇ ವಂಚಿಸುತ್ತಿದೆ ಎಂಬ ಆರೋಪವಿತ್ತು. ಈ ಹಿನ್ನೆಲೆ, ಈ ಕಂಪನಿ ಮೇಲೆ ಬುಧವಾರ ಕಂದಾಯ ಗುಪ್ತಚರ ನಿರ್ದೇಶನಾಲಯದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಈ ವೇಳೆ ಆತಂಕಕ್ಕೀಡಾದ ಕಂಪನಿ ಸಿಬ್ಬಂದಿ, 2000, 500 ಮತ್ತು 100 ರು. ಮೌಲ್ಯದ ಕಂತೆ-ಕಂತೆಯ ನೋಟುಗಳನ್ನು ಕಿಟಕಿಯ ಮೂಲಕ ಹೊರಗೆ ಬಿಸಾಡಿದ್ದಾರೆ.
ಆದರೆ, ಕಂದಾಯ ಗುಪ್ತಚರ ನಿರ್ದೇಶನಾಲಯದ ದಾಳಿಗೆ ಹಾಗೂ ಕಂತೆ-ಕಂತೆ ನೋಟುಗಳನ್ನು ಬಿಸಾಡಿದ ಘಟನೆಗೆ ಸಂಬಂಧವಿದೆಯೇ ಎಂಬುದರ ಬಗ್ಗೆ ಇದುವರೆಗೂ ಸ್ಪಷ್ಟವಾಗಿಲ್ಲ. ಈ ಹಿನ್ನೆಲೆ ಈ ಕುರಿತು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ