Minimum Balance: ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದಕ್ಕೆ 8,000 ಕೋಟಿ ರೂ. ದಂಡ ವಸೂಲಿ ಮಾಡಿದ ಬ್ಯಾಂಕುಗಳು!

Published : Feb 10, 2026, 08:13 AM IST
Banks Collect Rs 8000 Crore Penalty for Non Maintenance

ಸಾರಾಂಶ

ಕಳೆದ ಮೂರು ವರ್ಷಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 8,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ಹೆಚ್ಚು ದಂಡ ಸಂಗ್ರಹಿಸಿದ್ದು, ಎಸ್‌ಎಂಎಸ್ ಸೇವೆಗಳಿಗಾಗಿಯೂ ಬ್ಯಾಂಕುಗಳು ಸಾವಿರಾರು ಕೋಟಿ ಶುಲ್ಕ ವಿಧಿಸಿವೆ.

ನವದೆಹಲಿ (ಫೆ.10): ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೇವೆ ಹತ್ತಿರವಾಗಬೇಕು ಎಂಬ ಆಶಯದ ನಡುವೆಯೇ, ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಂದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳದ ಕಾರಣಕ್ಕೆ ದೇಶದ 12 ಪ್ರಮುಖ ಬ್ಯಾಂಕುಗಳು ಬರೋಬ್ಬರಿ 8,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ.

ದಂಡ ವಸೂಲಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂಬರ್ 1

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, ಕನಿಷ್ಠ ಬ್ಯಾಲೆನ್ಸ್ ದಂಡ ವಸೂಲಿ ಮಾಡುವಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಗ್ರಸ್ಥಾನದಲ್ಲಿದೆ. ಈ ಬ್ಯಾಂಕ್ ಒಂದೇ ಕಳೆದ ಮೂರು ವರ್ಷಗಳಲ್ಲಿ ಗ್ರಾಹಕರಿಂದ 1,500 ಕೋಟಿ ರೂಪಾಯಿಗಳನ್ನು ದಂಡದ ರೂಪದಲ್ಲಿ ಪಡೆದಿದೆ. ಇದು ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಅತಿ ಹೆಚ್ಚಿನ ವಸೂಲಿಯಾಗಿದೆ.

ಇತರೆ ಪ್ರಮುಖ ಬ್ಯಾಂಕುಗಳ ಅಂಕಿಅಂಶ

ಪಿಎನ್‌ಬಿ ನಂತರದ ಸ್ಥಾನಗಳಲ್ಲಿ ದೊಡ್ಡ ಬ್ಯಾಂಕುಗಳೇ ಕಾಣಿಸಿಕೊಂಡಿವೆ. ಬ್ಯಾಂಕ್ ಆಫ್ ಬರೋಡಾ 1,272 ಕೋಟಿ ರೂ. ವಸೂಲಿ ಮಾಡಿದ್ದರೆ, ಇಂಡಿಯನ್ ಬ್ಯಾಂಕ್ 1,166 ಕೋಟಿ ರೂ.ಗಳನ್ನು ದಂಡದ ರೂಪದಲ್ಲಿ ಪಡೆದಿದೆ. ಕರ್ನಾಟಕ ಮೂಲದ ಕೆನರಾ ಬ್ಯಾಂಕ್ 1,027 ಕೋಟಿ ರೂ. ಹಾಗೂ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 932 ಕೋಟಿ ರೂ.ಗಳಷ್ಟು ಶುಲ್ಕವನ್ನು ಗ್ರಾಹಕರಿಂದ ಕಲೆ ಹಾಕಿವೆ.

SMS ಸೇವೆಗೂ ಕತ್ತರಿ: 3,388 ಕೋಟಿ ರೂ. ಶುಲ್ಕ

ಕೇವಲ ಕನಿಷ್ಠ ಬ್ಯಾಲೆನ್ಸ್ ಮಾತ್ರವಲ್ಲದೆ, ಬ್ಯಾಂಕುಗಳು ನೀಡುವ ಎಸ್‌ಎಂಎಸ್ (SMS) ಅಲರ್ಟ್ ಸೌಲಭ್ಯಕ್ಕೂ ಗ್ರಾಹಕರು ಭಾರೀ ಬೆಲೆ ತೆತ್ತಿದ್ದಾರೆ. ಎಸ್‌ಬಿಐ ಹೊರತುಪಡಿಸಿ ಉಳಿದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಒಟ್ಟಾಗಿ ಕಳೆದ ಮೂರು ವರ್ಷಗಳಲ್ಲಿ ಎಸ್‌ಎಂಎಸ್ ಸೌಲಭ್ಯಕ್ಕಾಗಿ ಗ್ರಾಹಕರಿಂದ 3,388 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾಗೆ ಶಾಕ್‌ ಕೊಟ್ಟ BCCI; ಕ್ರಿಕೆಟ್ ದಿಗ್ಗಜರಿಗೆ ಇಂಥ ಗತಿ ಬಂತಾ?
SIR: ಮಮತಾ ಬ್ಯಾನರ್ಜಿ ಕಾನೂನು ಹೋರಾಟಕ್ಕೆ ಹಿನ್ನಡೆ; ಸುಪ್ರೀಂಕೋರ್ಟ್‌ ಖಡಕ್ ಎಚ್ಚರಿಕೆ!