
ಮುಂಬೈ(ಏ. 20) ಕೊರೋನಾ ಆತಂಕ ಈಗ ಪತ್ರಕರ್ತರ ಬೆನ್ನು ಬಿದ್ದಿದೆ. ಮುಂಬೈನ 53 ಪತ್ರಕರ್ತರಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.
ಒಟ್ಟು 167 ಜನ ಜರ್ನಲಿಸ್ಟ್ ಗಳ ಪರೀಕ್ಷೆ ನಡೆಸಲಾಗಿದ್ದು ವರದಿ ಬಂದಿದೆ. ಶಿವಸೇನಾ ನಾಯಕ, ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ನ ಆರೋಗ್ಯ ಸಮಿತಿಯ ಸದಸ್ಯ ಅಮಯ್ ಘೋಲೆ ಈ ಆತಂಕಕಾರಿ ಮಾಹಿತಿ ನೀಡಿದ್ದಾರೆ.
ಮಾಧ್ಯಮಗಳು ಹೇಗೆ ತಮ್ಮ ಹೊಣೆ ನಿಭಾಯಿಸುತ್ತವೆ?
ವರದಿಗಾರರು, ಕ್ಯಾಮರಾ ಮನೆ ಗಳು ಮತ್ತು ಪೋಟೋ ಜರ್ನಲಿಸ್ಟ್ ಗಳಿಗೆ ಕೊರೋನಾ ತಾಗಿದೆ. ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯಂತೆ ಪತ್ರಕರ್ತರು ಸಹ ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ದಿನದ ಘಟನಾವಳಿಗಳನ್ನು ಜನರ ಮುಂದ ಕಟ್ಟಿಕೊಡುತ್ತ ನಿರಂತರವಾಗಿ ಕೆಲಸ ಮಾಡುತ್ತಿರುವ ಮಂದಿ ಅಭಿನಂದನೆಗೆ ಅರ್ಹರು. ಮುಂಬೈನ ಪತ್ರಕರ್ತರು ಗುಣಮುಖರಾಗಲಿ ಎಂದು ಹಾರೈಸುವುದಷ್ಟೇ ನಮಗೆ ಉಳಿದಿರುವ ದಾರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ