ಇಟಲಿಯಲ್ಲಿ ಕುಳಿತು ದೇಶ ಉಳಿಸಿ ಎಂದ ರಾಹುಲ್ ಗಾಂಧಿ!

Published : Dec 28, 2020, 09:13 PM IST
ಇಟಲಿಯಲ್ಲಿ ಕುಳಿತು ದೇಶ ಉಳಿಸಿ ಎಂದ ರಾಹುಲ್ ಗಾಂಧಿ!

ಸಾರಾಂಶ

ಕೇಂದ್ರದ ಕೃಷಿ ಕಾಯಿದೆ ತಿದ್ದುಪಡಿ ಮಸೂದೆ/ ಇಟಲಿಗೆ ಹಾರಿದ ರಾಹುಲ್ ಗಾಂಧಿ/ ಅಲ್ಲಿಂದಲೇ ದೇಶವನ್ನು ಉಳಿಸಿ ಎಂದು ಟ್ವೀಟ್ / ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಆಹಾರ

ನವದೆಹಲಿ (ಡಿ.  28)  ತಮ್ಮ ಪಕ್ಷದ 136 ನೇ ವರ್ಷಾಚರಣೆ ಕಾರ್ಯಕ್ರಮಕ್ಕೂ ಗೈರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಇಟಲಿಯಿಂದಲೇ ಟ್ವೀಟ್ ಮಾಡಿದ್ದಾರೆ.

ಕೇಂದ್ರ  ಸರ್ಕಾರದ   ರೈತ ಮಸೂದೆಗಳನ್ನು  ವಿರೋಧಿಸಿರುವ ಗಾಂಧಿ 'ರೈತರನ್ನು ಉಳಿಸಿ, ದೇಶವನ್ನು ಉಳಿಸಿ' ಎಂದು ಕರೆ ಕೊಟ್ಟಿದ್ದಾರೆ. ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸುವವರೆಗೆ ದೇಶ ಆರ್ಥಿಕ ಸ್ವಾವಲಂಬಿಯಾಗಲು ಸಾಧ್ಯವಿಲ್ಲ ಎಂದು ಹಿಂದಿಯಲ್ಲಿ ರಾಹುಲ್ ಟ್ವಿಟ್ ಮಾಡಿ ಹೇಳಿದ್ದಾರೆ.

ರಾಹುಲ್ ಗೆ ಮೋದಿ ಕೊಟ್ಟಿದ್ದು ಅಂಥಿಂಥ ಟಾಂಗ್ ಅಲ್ಲ

ರಾಹುಲ್ ಮಾತ್ರವಲ್ಲದೆ ಸೋನಿಯಾ ಸಹ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಗೈರಾಗಿದ್ದಾರೆ. ರಾಹುಲ್  ಗಾಂಧಿ ರೈತ ಮಸೂದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು.  ನಂತರ ರೈತ ಪ್ರತಿಭಟನೆಗೆ ಬೆಂಬಲ ಎನ್ನುತ್ತಲೇ ಇಟಲಿಗೆ ಪ್ರಯಾಣ  ಬೆಳೆಸಿದ್ದರು.

ಹೊರದೇಶದಲ್ಲಿ ಕುಳಿತು ದೇಶವನ್ನು ಉಳಿಸಿ ಎಂದು ರಾಹುಲ್ ಟ್ವೀಟ್ ಮಾಡಿರುವುದು ಟೀಕೆಗೂ ಆಹಾರವಾಗಿದೆ. ಇನ್ನೊಂದು ಕಡೆ ರೈತ ಪ್ರತಿಭಟನೆ  ಜೋರಾಗಿ ನಡೆಯುತ್ತಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು