ಶಾಂತಿ ಜಪದ ಮಧ್ಯೆಯೇ ಚೀನಾದಿಂದ ಗಡಿಯಲ್ಲಿ ಸೇನೆ ಜಮಾವಣೆ!

Published : Jun 25, 2020, 09:56 AM ISTUpdated : Jun 25, 2020, 10:59 AM IST
ಶಾಂತಿ ಜಪದ ಮಧ್ಯೆಯೇ ಚೀನಾದಿಂದ ಗಡಿಯಲ್ಲಿ ಸೇನೆ ಜಮಾವಣೆ!

ಸಾರಾಂಶ

ಶಾಂತಿ ಜಪದ ಮಧ್ಯೆಯೇ ಚೀನಾದಿಂದ ಸೇನೆ ಜಮಾವಣೆ!| ಶಾಂತಿ ಕಾಪಾಡುವುದರಿಂದ ಇಬ್ಬರಿಗೂ ಪ್ರಯೋಜನ ಎಂದ ಬೆನ್ನಲ್ಲೇ ಗಡಿಗೆ ಭಾರೀ ಸಂಖ್ಯೆಯ ಸೈನಿಕರ ರವಾನೆ

ನವದೆಹಲಿ/ಬೀಜಿಂಗ್‌(ಜೂ.25): ಗಲ್ವಾನ್‌ ಕಣಿವೆಯಲ್ಲಿ ಉದ್ಭವವಾಗಿರುವ ತ್ವೇಷಮಯ ಪರಿಸ್ಥಿತಿಯನ್ನು ತಿಳಿಗೊಳಿಸಲು ಒಂದೆಡೆ ಶಾಂತಿ ಮಂತ್ರ ಜಪಿಸಲು ಆರಂಭಿಸಿರುವ ಚೀನಾ, ಮತ್ತೊಂದೆಡೆ ಸದ್ದಿಲ್ಲದೆ ಸೇನಾ ಜಮಾವಣೆ ಪ್ರಾರಂಭಿಸುವ ಮೂಲಕ ತನ್ನ ಕಪಟ ಬುದ್ಧಿ ಪ್ರದರ್ಶಿಸಿದೆ.

‘ನಾವಿಬ್ಬರೂ ಬಹುಮುಖ್ಯ ನೆರೆರಾಷ್ಟ್ರಗಳು. ಗಡಿಯಲ್ಲಿ ಶಾಂತಿ ಕಾಪಾಡುವುದರಿಂದ ಎರಡೂ ದೇಶಗಳಿಗೆ ಪ್ರಯೋಜನವಿದೆ. ಇದಕ್ಕೆ ಎರಡೂ ದೇಶಗಳ ಜಂಟಿ ಪ್ರಯತ್ನ ಅಗತ್ಯ’ ಎಂದು ಬುಧವಾರ ಚೀನಾದ ವಿದೇಶಾಂಗ ಸಚಿವಾಲಯ ಮತ್ತು ರಕ್ಷಣಾ ಸಚಿವಾಲಯಗಳು ಪ್ರತ್ಯೇಕ ಹೇಳಿಕೆ ಬಿಡುಗಡೆ ಮಾಡಿವೆ.

ಚೀನಾಗೆ ಭಾರೀ ಮುಖಭಂಗ, ಭಾರತಕ್ಕೆ ರಷ್ಯಾದ S-400!

ಇದೇ ವೇಳೆ, ಬುಧವಾರ ಎರಡೂ ದೇಶಗಳ ವಿದೇಶಾಂಗ ಇಲಾಖೆಯ ನಡುವೆ ಆನ್‌ಲೈನ್‌ನಲ್ಲಿ ರಾಜತಾಂತ್ರಿಕ ಮಾತುಕತೆ ಕೂಡ ನಡೆದಿದ್ದು, ಈ ವೇಳೆ ಗಡಿಯಲ್ಲಿ ಶಾಂತಿ ಕಾಪಾಡಲು ಗಲ್ವಾನ್‌ ಕಣಿವೆಯಿಂದ ಮೊದಲೇ ನಿರ್ಧರಿಸಿದ ರೀತಿಯಲ್ಲಿ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಪುನರುಚ್ಚಾರ ಮಾಡಿವೆ.

ಇದೆಲ್ಲದರ ಮಧ್ಯೆ, ಗಡಿಯಲ್ಲಿ ಭಾರತದ ಜತೆಗೆ ಘರ್ಷಣೆ ಇರುವ ಪ್ರದೇಶಗಳಾದ ಪಾಂಗೋಂಗ್‌ ತ್ಸೋ, ಗಲ್ವಾನ್‌ ಕಣಿವೆ ಸೇರಿದಂತೆ ವಿವಿಧೆಡೆ ಭಾರಿ ಸಂಖ್ಯೆಯ ಯೋಧರನ್ನು ನಿಯೋಜನೆ ಮಾಡಿದೆ. ಈ ಸಂಖ್ಯೆ 10 ಸಾವಿರಕ್ಕೂ ಅಧಿಕವಿದೆ. ಶಸ್ತ್ರ ಸಜ್ಜಿತ ರೆಮಿಮೆಂಟ್‌ಗಳು, ಭಾರೀ ಗಾತ್ರದ ಫಿರಂಗಿಗಳು ಮತ್ತು ರಕ್ಷಣಾ ಸಾಮಗ್ರಿಗಳನ್ನು ಗಡಿಯಲ್ಲಿ ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ