ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಪತಂಜಲಿ!

Published : Jun 25, 2020, 09:30 AM ISTUpdated : Jun 25, 2020, 10:59 AM IST
ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಪತಂಜಲಿ!

ಸಾರಾಂಶ

ಕೆಮ್ಮಿನ ಔಷಧ ಎಂದು ಲೈಸೆನ್ಸ್‌ ಪಡೆದಿದ್ದ ಬಾಬಾ ರಾಮದೇವ್‌!| ಕೊರೋನಾ ಔಷಧ ಎಂದು ಉತ್ತರಾಖಂಡಕ್ಕೆ ಹೇಳೇ ಇರಲಿಲ್ಲ| ನೋಟಿಸ್‌ ಜಾರಿ ಮಾಡಲು ಆಯುರ್ವೇದ ಇಲಾಖೆ ನಿರ್ಧಾರ

ಡೆಹ್ರಾಡೂನ್(ಜೂ.25)‌: ಯೋಗಗುರು ಬಾಬಾ ರಾಮದೇವ್‌ ಅವರ ಪತಂಜಲಿ ಸಂಸ್ಥೆಯ ಕೊರೋನಿಲ್‌ ಕಿಟ್‌ಗೆ ಕೇಂದ್ರ ಆಯುಷ್‌ ಸಚಿವಾಲಯ ಬ್ರೇಕ್‌ ಹಾಕಿದ ಬೆನ್ನಲ್ಲೇ, ಔಷಧ ಮಾರಾಟಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ವೇಳೆ ಪತಂಜಲಿ ಕಂಪನಿಯು ಇದು ಕೊರೋನಾ ಔಷಧ ಎಂಬ ಅಂಶವನ್ನೇ ಪ್ರಸ್ತಾಪಿಸಿರಲಿಲ್ಲ ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಕುರಿತು ಹೇಳಿಕೆ ನೀಡಿರುವ ಉತ್ತರಾಖಂಡದ ಆಯುರ್ವೇದ ಇಲಾಖೆಯ ಔಷಧ ಲೈಸೆನ್ಸ್‌ ವಿತರಣಾ ಅಧಿಕಾರಿಯೊಬ್ಬರು, ‘ಕೆಮ್ಮು ಮತ್ತು ಜ್ವರ ಬರದಂತೆ ತಡೆಯಲು ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧದ ಹೆಸರಲ್ಲಿ ಪತಂಜಲಿ ಸಂಸ್ಥೆ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿತ್ತು. ಅದರಂತೆ ನಾವು ಕಂಪನಿಗೆ ಔಷಧ ಮಾರಾಟಕ್ಕೆ ಅನುಮತಿ ನೀಡಿದ್ದೆವು. ಆದರೆ ಅವರು ಅದನ್ನು ಕೋವಿಡ್‌ 19ಗೆ ಔಷಧ ಕಿಟ್‌ ಎಂದು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ನಾವು ಅವರಿಗೆ ನೋಟಿಸ್‌ ಜಾರಿ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ.

ಕೊರೋನಾಕ್ಕೆ ಔಷಧಿ ಕಂಡುಹಿಡಿದೆವು ಎಂದು ಬೀಗುತ್ತಿದ್ದ ಪತಂಜಲಿಗೆ ಆಯುಷ್ ಶಾಕ್!

ಮಂಗಳವಾರವಷ್ಟೇ ಪತಂಜಲಿ ಸಂಸ್ಥೆ ‘ಕೊರೊನಿಲ್‌, ಶ್ವಾಸಾರಿ ಮತ್ತು ಅನುತೈಲ’ ಎಂಬ 3 ಔಷಧಗಳನ್ನು ಒಳಗೊಂಡ ಔಷಧ ಕಿಟ್‌ ಬಿಡುಗಡೆ ಮಾಡಿತ್ತು. 545 ರು.ನ ಈ ಕಿಟ್‌ ಬಳಸಿದರೆ ಕೇವಲ 7 ದಿನದಲ್ಲಿ ಕೊರೋನಾದಿಂದ ಗುಣುಮಖರಾಗಬಹುದು ಎಂದು ಹೇಳಿತ್ತು. ಆದರೆ ಔಷಧ ಬಿಡುಗಡೆಯಾದ ಕೆಲ ಹೊತ್ತಿನಲ್ಲೇ ಔಷಧದ ಕುರಿತು ತನಗೇನೂ ಮಾಹಿತಿ ಇಲ್ಲ ಎಂದಿದ್ದ ಆಯುಷ್‌ ಸಚಿವಾಲಯ, ಔಷಧದಲ್ಲಿ ಏನೇನು ಅಂಶಗಳಿವೆ, ಅದರ ಪ್ರಯೋಗ ಎಲ್ಲಿ ನಡೆಯಿತು? ಪರೀಕ್ಷಾ ಸ್ಯಾಂಪಲ್‌, ಸ್ಥಳ, ಆಸ್ಪತ್ರೆ, ರೋಗಿಗಳ ಅಂಕಿ- ಅಂಶ ಸೇರಿದಂತೆ ಎಲ್ಲಾ ವಿವರಗಳನ್ನು ತನಗೆ ಸಲ್ಲಿಸಬೇಕು ಎಂದು ಕಂಪನಿಗೆ ಸೂಚಿಸಿತ್ತು. ಅಲ್ಲದೆ ಔಷಧ ಕಿಟ್‌ ಕುರಿತು ಪ್ರಚಾರ ಮಾಡದಂತೆಯೂ ಸೂಚಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್