
ಮುಂಬೈ(ಏ.05): ಮುಕೇಶ್ ಅಂಬಾನಿ ಮನೆ ಮುಂದೆ ಪತ್ತೆಯಾದ ಕಾರು ಬಾಂಬ್ ಮತ್ತು ಅದರ ಮಾಲೀಕ ಮನ್ಸೂಕ್ ಹಿರೇನ್ ಅವರ ನಿಗೂಢ ಸಾವಿನ ಪ್ರಕರಣದಲ್ಲಿ ಸಿಲುಕಿರುವ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಬಂಧನದ 1 ವಾರದ ಬಳಿಕ ವಾಝೆ ಬ್ಯಾಂಕ್ ಖಾತೆಯಿಂದ 26.50 ಲಕ್ಷ ರು. ತೆಗೆಯಲಾಗಿರುವ ವಿಚಾರವನ್ನು ರಾಷ್ಟ್ರೀಯ ತನಿಖಾ ದಳ(ಎನ್ಐಎ)ದಿಂದ ಬಯಲಾಗಿದೆ.
ಈ ಸಂಬಂಧ ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಎನ್ಐಎ ತಂಡ, ‘ಈ ಪ್ರಕರಣದಲ್ಲಿ ಬಂಧನವಾದ 1 ವಾರದ ಬಳಿಕ ವಾಝೆ ತನ್ನ ಆಪ್ತನ ಜೊತೆ ಹೊಂದಿದ್ದ ಜಂಟಿ ಬ್ಯಾಂಕ್ ಖಾತೆಯಿಂದ 26.50 ಲಕ್ಷ ರು. ಹಣ ತೆಗೆಯಲಾಗಿದೆ.
ಅಂದರೆ ಮಾ.14ರಂದು ವಾಝೆ ಬಂಧನವಾಗಿದ್ದು, ಮಾ.18ರಂದು ಬ್ಯಾಂಕ್ನಿಂದ ಹಣ ಹಾಗೂ ದೋಷಾರೋಪಕ್ಕೆ ಸಂಬಂಧಿಸಿದ ಕೆಲ ವಸ್ತುಗಳನ್ನು ಬ್ಯಾಂಕ್ ಲಾಕರ್ನಿಂದ ಹೊರತೆಗೆಯಲಾಗಿದೆ’ ಎಂದಿದೆ. ಆದರೆ ವಾಝೆ ಜೊತೆ ಜಂಟಿ ಖಾತೆ ಹೊಂದಿದ ವ್ಯಕ್ತಿಯ ಹೆಸರನ್ನು ಎನ್ಐಎ ಬಹಿರಂಗಪಡಿಸಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ