
ಅಹಮದಾಬಾದ್ (ನ.12): ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ನವೆಂಬರ್ 10 ರಂದು ನಡೆಸಿದ ದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮೂವರು ವ್ಯಕ್ತಿಗಳನ್ನು ಬಂಧಿಸಿತು. ಬಂಧಿತ ಉಗ್ರರಿಂದ ಅಪಾರ ಪ್ರಮಾಣದ ಸ್ಫೋಟಕ, ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಂಡಿತು. ಅವರು ಅತ್ಯಂತ ವಿಷಕಾರಿ ರಿಸಿನ್ ರಾಸಾಯನಿಕವನ್ನು ಬಳಸಿ ದೇಶಾದ್ಯಂತ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದರೆಂಬುದು ತಿಳಿದು ದೇಶವೇ ಬೆಚ್ಚಿಬಿದ್ದಿತು. ಜಗತ್ತಿನ ಕಣ್ಣಿಗೆ ವೈದ್ಯರ ವೇಷ ತೊಟ್ಟಿದ್ದ ಉಗ್ರರು ಒಳಗಡೆ ಭಾರೀ ಸಂಚು ನಡೆಸಲು ಯೋಜಿಸುತ್ತಿದ್ದರು. ಬಂಧಿತರಲ್ಲಿ ಹೈದರಾಬಾದ್ನ ಡಾ. ಅಹ್ಮದ್ ಮೊಹಿಯುದ್ದೀನ್ ಸೈಯದ್, ಅಹಮದಾಬಾದ್ನ ಆಜಾದ್ ಸುಲೇಮಾನ್ ಶೇಖ್ ಮತ್ತು ಉತ್ತರ ಪ್ರದೇಶದ ಮೊಹಮ್ಮದ್ ಸುಹೇಲ್ ಸಲೀಂ ಖಾನ್ ಸೇರಿದ್ದಾರೆ.
ATS ಪ್ರಕಾರ, ಈ ಗುಂಪು ದೆಹಲಿ, ಅಹಮದಾಬಾದ್ ಮತ್ತು ಲಕ್ನೋದ ನೀರಿನ ಮೂಲಗಳು ಮತ್ತು ದೇವಾಲಯಗಳ ಪ್ರಸಾದವನ್ನು ಕಲುಷಿತಗೊಳಿಸುವ ಅಂದರೆ ಅವುಗಳಲ್ಲಿ ರಿಸಿನ್ ವಿಷ ಸೇರಿಸಿ ಲಕ್ಷಾಂತರ ಜನರ ಸಾಮೂಹಿಕ ಹತ್ಯೆ ಪ್ಲಾನ್ ಮಾಡಿದ್ದರು.
ಏನಿದು ರಿಸಿನ್: ರಿಸಿನ್ ಕ್ಯಾಸ್ಟರ್ ಬೀನ್ಸ್ನ ತ್ಯಾಜ್ಯದಿಂದ ಪಡೆದ ಅತ್ಯಂತ ಮಾರಕ ವಿಷವಾಗಿದ್ದು, 1888ರಲ್ಲಿ ಜರ್ಮನ್ ವಿಜ್ಞಾನಿ ಪೀಟರ್ ಹರ್ಮನ್ ಸ್ಟಿಲ್ಮಾರ್ಕ್ ಅದನ್ನು ಮೊದಲಿಗೆ ಬೆಳಕಿಗೆ ತಂದರು. ಇದು ಜೀವಕೋಶಗಳಲ್ಲಿ ಪ್ರೋಟೀನ್ ಸಂಶ್ಲೇಷಣೆಯನ್ನು ತಡೆಯುತ್ತದೆ, ಇದರಿಂದ ಸಣ್ಣ ಪ್ರಮಾಣದ ಸೇವನೆಯೂ ಸಾವಿಗೆ ಕಾರಣವಾಗಬಹುದು. ಯಾವುದೇ ಪ್ರತಿವಿಷ ಅಥವಾ ಲಸಿಕೆ ಇಲ್ಲದ ಕಾರಣ ಇದು ಜಾಗತಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ.
ಉಸಿರಾಟ ತೊಂದರೆ ಜ್ವರ, ಎದೆ ಬಿಗಿತ, ಶ್ವಾಸಕೋಶದಲ್ಲಿ ದ್ರವ ಸಂಗ್ರಹ (ಪಲ್ಮನರಿ ಎಡಿಮಾ). ಇದು ಚರ್ಮವನ್ನು ನೀಲಿ ಬಣ್ಣಕ್ಕೆ ತಿರುಗಿಸಿ, ರಕ್ತದೊತ್ತಡ ಕಡಿಮೆಯಾಗಿ ಸಾವಿಗೆ ಕಾರಣವಾಗಬಹುದು.
ಸೇವಿಸಿದರೆ: ತೀವ್ರ ವಾಂತಿ, ಅತಿಸಾರ (ರಕ್ತ ಮಿಶ್ರಿತ), ನಿರ್ಜಲೀಕರಣ, ಭ್ರಮೆ, ಮೂತ್ರದಲ್ಲಿ ರಕ್ತ, ಯಕೃತ್ತು-ಮೂತ್ರಪಿಂಡ ವೈಫಲ್ಯ. ಚಿಕಿತ್ಸೆಯು supportive care ಮೂಲಕ ಪರಿಣಾಮಗಳನ್ನು ಕಡಿಮೆ ಮಾಡಬಹುದು ಮಾತ್ರ.
ಹಿಂದೆ ರಿಸಿನ್ ಬಳಸಿ ಹಲವು ದಾಳಿಗಳು ಸಂಭವಿಸಿವೆ. 1978ರಲ್ಲಿ ಲಂಡನ್ನಲ್ಲಿ ಬಲ್ಗೇರಿಯನ್ ಭಿನ್ನಮತೀಯ ಜಾರ್ಜಿ ಮಾರ್ಕೊವ್ ಅವರನ್ನು ರಿಸಿನ್ ಹೊಂದಿರುವ ಛತ್ರಿಯಿಂದ ಕಾಲಿಗೆ ಚುಚ್ಚಿ ಹತ್ಯೆ ಮಾಡಲಾಯಿತು. 1981ರಲ್ಲಿ ಸೋವಿಯತ್ ಕೆಜಿಬಿ ರಿಸಿನ್ ಪೆಲೆಟ್ನಿಂದ ಸಿಐಎ ಏಜೆಂಟ್ ಬೋರಿಸ್ ಕೊರ್ಜಾಕ್ ಅವರ ಮೇಲೆ ದಾಳಿ ನಡೆಸಿತು. 2014ರಲ್ಲಿ ಅಮೆರಿಕದ ಜೇಮ್ಸ್ ಎವೆರೆಟ್ ಡಟ್ಷ್ಕೆ ಅವರು ಒಬಾಮಾ ಸೇರಿ ಅಧಿಕಾರಿಗಳಿಗೆ ರಿಸಿನ್ ಮಿಶ್ರಿತ ಪತ್ರಗಳನ್ನು ಕಳುಹಿಸಿದ್ದಕ್ಕೆ 25 ವರ್ಷ ಜೈಲು ಶಿಕ್ಷೆಗೊಳಗಾದರು. ATS ಈ ಕಾರ್ಯಾಚರಣೆಯ ಮೂಲಕ ದೊಡ್ಡ ಭಯೋತ್ಪಾದಕ ಯೋಜನೆಯನ್ನು ವಿಫಲಗೊಳಿಸಿದ್ದು, ರಿಸಿನ್ನಂತಹ ಜೈವಿಕ ಆಯುಧಗಳ ವಿರುದ್ಧ ಎಚ್ಚರಿಕೆ ಹೆಚ್ಚಿಸಿದೆ. ತನಿಖೆಗಳು ಮುಂದುವರಿದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ