ಅಪ್ರಾಪ್ತ ಮಕ್ಕಳ ಬಳಿ 1.25 ಕೋಟಿ ಮೊತ್ತದ ಎರಡು ತಲೆ ಹಾವು!

Published : Dec 30, 2019, 12:25 PM ISTUpdated : Dec 30, 2019, 12:59 PM IST
ಅಪ್ರಾಪ್ತ ಮಕ್ಕಳ ಬಳಿ 1.25 ಕೋಟಿ ಮೊತ್ತದ ಎರಡು ತಲೆ ಹಾವು!

ಸಾರಾಂಶ

ಅಪ್ರಾಪ್ತರ ಬಳಿ ಕೋಟಿಗೂ ಅಧಿಕ ಬೆಲೆ ಬಾಳುವ ಹಾವು!| ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಪೊಲೀಸರು| ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಪ್ರಾಪ್ತರು

ಭೋಪಾಲ್[ಡಿ.30]: ರಾಜ್ ಘಡ್ ಜಿಲ್ಲೆಯ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿ, ಅವರ ಬಳಿ ಇದ್ದ 1.25 ಕೋಟಿ ಮೌಲ್ಯದ ಎರಡು ತಲೆ ಹಾವನ್ನು ವಶಪಡಿಸಿಕೊಂಡಿದ್ದಾರೆ. 

ಇಲ್ಲಿನ ನರಸಿಂಹಘಡ ಠಾಣೆಯ ಪೊಲೀಸ್ ಅಧಿಕಾರಿ ಕೈಲಾಶ್ ಭಾರದ್ವಾಜ್ ಘಟನೆ ಸಂಬಂಧ ಮಾಹಿತಿ ನೀಡುತ್ತಾ 'ನಾವು ಭಾನುವಾರದಂದು ಎರಡು ತಲೆಯ ಹಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರನ್ನು ಬಂಧಿಸಿದ್ದೇವೆ. ಅಲ್ಲದೇ ಅವರ ವಶದಲ್ಲಿದ್ದ 1.25 ಕೋಟಿ ಮೌಲ್ಯದ ಎರಡು ತಲೆ ಹಾವನ್ನೂ(Red Sand Boa Snake) ವಶಪಡಿಸಿಕೊಂಡಿದ್ದೇವೆ' ಎಂದಿದ್ದಾರೆ.

ಮುತ್ತು ಕೊಡಲು ಹೋದವನಿಗೆ ಕಚ್ಚಿ ಹರಿದ ಹಾವು

ಅಲ್ಲದೇ 'ನರಸಿಂಹಘಡ ಬಸ್ ನಿಲ್ದಾಣ ಬಳಿ ಮೂವರು ಅನುಮನಾಸ್ಪದ ವ್ಯಕ್ತಿಗಳಿದ್ದಾರೆ. ಇವರು ಹಾವು ಮಾರಾಟ ಹಾಗೂ ಖರೀದಿ ಕುರಿತು ಯಾರ ಬಳಿಯೋ ಮಾತನಾಡುತ್ತಿದ್ದಾರೆಂಬ ಗೌಪ್ಯ ಮಾಹಿತಿ ಲಭ್ಯವಾಗಿತ್ತು. ಈ ಗೌಪ್ಯ ಮಾಹಿತಿಯನ್ನಾಧರಿಸಿ ನಾವು ಬಸ್ ನಿಲ್ದಾಣದ ಬಳಿ ತಲುಪಿದಾಗ, ಲ್ಲಿ ನಿಂತಿದ್ದವರ ಪೈಕಿ ಒಬ್ಬಾತ ಓಡಲಾರಂಭಿಸಿದ್ದಾರೆ. ಹೀಗಿರುವಾಗ ಪೊಲೀಸರು ಆತನನ್ನು ಸುತ್ತುವರೆದು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೊಳಪಡಿಸಿ ಆತನ ಸಹಚರರನ್ನೂ ಬಂಧಿಸಿದ್ದೇವೆ' ಎಂದಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಪವನ್ ನಾಗರ್ ಹಾಗೂ ಶ್ಯಾಮ್ ಗುರ್ಜರ್ ಇಬ್ಬರು ವಯಸ್ಕರಾಗಿದ್ದರೆ, ಇನ್ನುಳಿದ ಮೂವರು ಆರೋಪಿಗಳು ಅಪ್ರಾಪ್ತರು. ಇನ್ನು ಪವನ್ ಬಳಿ ಇದ್ದ ಪ್ಲಾಸ್ಟಿಕ್ ಚೀಲ ಪರಿಶೀಲಿಸಿದಾಗ ಅದರೊಳಗೆ ಹಾವು ಪತ್ತೆಯಾಗಿದೆ. 

ಪೊಲೀಸರು ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಬಂಧಿತ ಆರೋಪಿಗಳಲ್ಲೊಬ್ಬನಾದ ನಾಗರ್ ಈ ಎರಡು ತಲೆ ಹಾವನ್ನು ತಾವು ಮಧ್ಯಪ್ರದೇಶದ ಸಿಹೋರಾ ಜಿಲ್ಲೆಯಲ್ಲಿ ಖರೀದಿಸಿದ್ದೇವೆ. ಇದನ್ನು ತನ್ನ ಸಹಚರರೊಂದಿಗೆ ಸೇರಿ ನರಸಿಂಹಘಡದಲ್ಲಿ ಮಾರಲು ಬಂದಿದ್ದೆ ಎಂದು ಬಾಯ್ಬಿಟ್ಟಿದ್ದಾನೆ.

ಎರಡು ತಲೆಯ ಹಾವು ಪತ್ತೆ, ಹಾಲೆರೆದು ಪೂಜಿಸಿದ ಜನ!

 ಅಳಿವಿನಂಚಿನಲ್ಲಿರುವ ಈ ಎರಡು ತಲೆ ಹಾವಿನ್ನು ಹಿಡಿದು ಈ ಐವರು ಅಕ್ರಮವಾಗಿ ಹಣ ಸಂಪಾದಿಸಲು ಪ್ಲಾನ್ ಮಾಡಿದ್ದರು. ಸದ್ಯ ಇವರನ್ನು ಬಂಧಿಸಲಾಗಿದ್ದು, ವನ್ಯಜೀವಿ ಸಂರಕ್ಷಣಾ ನಿಯಮದಡಿ ಬರುವ ಸೆಕ್ಷನ್ ಅನ್ವಯ ಕೇಸ್ ದಾಖಲಿಸಲಾಗಿದೆ. 

ಅಳಿವಿನಂಚಿನಲ್ಲಿರುವ ಈ ಹಾವನ್ನು ಔಷಧ ತಯಾರಿ ಹಾಗೂ ಸೌಂದರ್ಯವರ್ಧಕ ತಯಾರಿಯಲ್ಲಿ ಬಳಸಲಾಗುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಾವಿಗೆ ಭಾರೀ ಬೇಡಿಕೆ ಇದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?