ನಿವೃತ್ತರಾದ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆಗೆ ಗೊಗೊಯ್ ಗುಡ್ ಬೈ!

Published : Nov 21, 2019, 05:54 PM IST
ನಿವೃತ್ತರಾದ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆಗೆ ಗೊಗೊಯ್ ಗುಡ್ ಬೈ!

ಸಾರಾಂಶ

ನಿವೃತ್ತರಾದ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆಗೆ ಗೊಗೊಯ್ ಗುಡ್ ಬೈ| ದೆಹಲಿಯ 5 ಕೃಷ್ಣಾ ಮೆನನ್ ಮಾರ್ಗ್’ನಲ್ಲಿರುವ ಸರ್ಕಾರಿ  ಬಂಗಲೆ| ನಿವೃತ್ತರದ ಮೂರೇ ದಿನದಲ್ಲಿ ಅಧಿಕೃತ ಬಂಗಲೆಯಿಂದ ಹೊರಬಂದ ಗೊಗೊಯ್| ಕಡಿಮೆ ಅವಧಿಯಲ್ಲಿ ಬಂಗಲೆ ತೆರವುಗೊಳಿಸಿದ ಮೊದಲ ಸಿಜೆಐ ಎಂಬ ಹೆಗ್ಗಳಿಕೆ| ಅಯೋಧ್ಯೆ ಸೇರಿದಂತೆ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿದ್ದ ಗೊಗೊಯ್|

ನವದೆಹಲಿ(ನ.21): ಅಯೋಧ್ಯೆ ಸೇರಿದಂತೆ ಹಲವು ಐತಿಹಾಸಿಕ ತೀರ್ಪುಗಳನ್ನು ಪ್ರಕಟಿಸಿ ನಿವೃತ್ತರಾಗಿರುವ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನಿವೃತ್ತಾರದ ಮೂರೇ ದಿನದಲ್ಲಿ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.

ದೆಹಲಿಯ 5 ಕೃಷ್ಣಾ ಮೆನನ್ ಮಾರ್ಗ್’ನಲ್ಲಿರುವ ಸರ್ಕಾರಿ  ಬಂಗಲೆಯನ್ನು ರಂಜನ್ ಗೊಗೊಯ್ ನಿವೃತ್ತರಾದ ಮೂರೇ ದಿನದಲ್ಲಿ ತೆರವುಗೊಳಿಸಿದ್ದಾರೆ.

ಇತಿಹಾಸ ಸೃಷ್ಟಿಸಿ ತೆರೆಯ ಮರೆಗೆ ಸಿಜೆಐ ಗೊಗೋಯ್

ಈ ಮೂಲಕ ನಿವೃತ್ತರಾದ ಕೇವಲ ಮೂರೇ ದಿನದಲ್ಲಿ ಸರ್ಕಾರಿ ಬಂಗಲೆ ತೆರವುಗೊಳಿಸಿದ ಮೊದಲ ಸಿಜೆಐ ಎಂಬ ಹೆಗ್ಗಳಿಕೆಗೆ ರಂಜನ್ ಗೊಗೊಯ್ ಪಾತ್ರರಾಗಿದ್ದಾರೆ.

ಈ ಹಿಂದೆ ಮಾಜಿ ಸಿಜೆಐ ಜ. ಜೆಎಸ್ ಖೆಹರ್ ನಿವೃತ್ತರಾದ ಒಂದು ವಾರದಲ್ಲಿ ತಮ್ಮ ಅಧಿಕೃತ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಿದ್ದರು.

ಇಂದು ರಂಜನ್ ಗೊಗೋಯ್ ನಿವೃತ್ತಿ: ಬಿಟ್ಟು ಹೊರಟರು ರಂಜನೀಯ ತೀರ್ಪುಗಳ ಬುತ್ತಿ!

ನಿಯಮದ ಪ್ರಕಾರ ಸಿಜೆಐ ನಿವೃತ್ತರಾದ ಒಂದು ತಿಂಗಳೊಳಗಾಗಿ ತಮಗೆ ನೀಡಲಾಗಿದ್ದ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಬೇಕು. 

ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದ ತೀರ್ಪು, ಶಬರಿಮಲೆಗೆ ಮಹಿಳೆಯರ ಪ್ರವೇಶ, ಸಲಿಂಗ ಕಾಮ ಅಪರಾಧವಲ್ಲ ಎಂಬಂತಹ ಹಲವು ಐತಿಹಾಸಿಕ ತೀರ್ಪನ್ನು ಗೊಗೊಯ್ ಪ್ರಕಟಿಸಿದ್ದರು.

ಎನ್‌ಆರ್‌ಸಿ ಭಾರತದ ಭವಿಷ್ಯಕ್ಕೆ ಒಳ್ಳೆಯದು ಎಂದ ಸಿಜೆಐ ಗಗೋಯ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಶಿಲ್ಪಾ ಶೆಟ್ಟಿ ಅವರ ಎಐ ಫೋಟೋ ತೆಗೆಯಲು ಕೋರ್ಟ್ ಆದೇಶ
ಬಾಂಗ್ಲಾ ಹಿಂದೂ ಹಂತಕರ ಶಿಕ್ಷಿಸಿ : ಭಾರತ ಆಗ್ರಹ