ರಾಜೀವ್ ಗಾಂಧಿ ಪೇಂಟಿಂಗ್ ಖರೀದಿಗೆ ಯೆಸ್ ಬ್ಯಾಂಕ್ ಸಂಸ್ಥಾಪಕನ ಮೇಲೆ ಒತ್ತಡ ಹೇರಿದ್ದ ಕಾಂಗ್ರೆಸ್ ನಾಯಕ!

Published : Mar 10, 2020, 04:32 PM ISTUpdated : Mar 10, 2020, 05:50 PM IST
ರಾಜೀವ್ ಗಾಂಧಿ ಪೇಂಟಿಂಗ್ ಖರೀದಿಗೆ ಯೆಸ್ ಬ್ಯಾಂಕ್ ಸಂಸ್ಥಾಪಕನ ಮೇಲೆ ಒತ್ತಡ ಹೇರಿದ್ದ ಕಾಂಗ್ರೆಸ್ ನಾಯಕ!

ಸಾರಾಂಶ

ಕರೋನಾ ಮತ್ತು ಯೆಸ್ ಬ್ಯಾಂಕ್/ ರಾಜೀವ್ ಗಾಂಧಿ ಪೇಂಟಿಂಗ್ ಖರೀದಿ ಮಾಡಲು ರಾಣಾ ಕಪೂರ್ ಮೇಲೆ ಒತ್ತಡ ಹೇರಲಾಗಿತ್ತಾ/ ಅನುಮಾನಕ್ಕೆ ಕಾರಣವಾದ ಮಿಲಿಂದ್ ದೋರಾ ಅಂದೆಂದೋ ಬರೆದೊದ್ದ ಪತ್ರ

ನವದೆಹಲಿ[ಮಾ. 10]  ಪ್ರಿಯಾಂಕಾ ವಾದ್ರಾ ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಡುವಿನ ಲಿಂಕ್ ಬಗ್ಗೆ ಒಂದೊಂದೆ ವಿಚಾರಗಳು ಬಹಿರಂಗವಾಗುತ್ತಿವೆ. ದೊಡ್ಡ ಮೊತ್ತಕ್ಕೆ ಎಂಎಫ್ ಹುಸೇನ್ ಅವರ ಪೇಂಟಿಂಗ್ ಖರೀದಿ ಮಾಡಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.

ತಮ್ಮ ಕುಟುಂಬ ಮತ್ತು ಸಂಬಂಧಿಕರ ವಿರೋಧದ ನಡುವೆಯೂ ರಾಣಾ ಕಪೂರ್ ರಾಜೀವ್ ಗಾಂಧಿ ಪೇಂಟಿಂಗ್ ಖರೀದಿ ಮಾಡಿದ್ದರು ಎಂಬುದು ಅವರದ್ದೇ ಹೇಳಿಕೆಯಿಂದ ಬಹಿರಂಗವಾಗಿದೆ.

ಕೇಂದ್ರದ ಮಾಜಿ ಸಚಿವ ಮಿಲಿಂದ್ ದೋರಾ ಈ ಪೇಂಟಿಂಗ್ ಖರೀದಿ ಮಾಡಲು ನನ್ನ ಮೇಲೆ ಒತ್ತಡ ತಂದಿದ್ದರು ಎಂದು ರಾಣಾ ಕಪೂರ್ ಒಂದು ಕಡೆ ಹೇಳಿದ್ದಾರೆ.

ಯೆಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದಾಗ ರಾಜಕೀಯ ವಿಚಾರಗಳು ಹರಿದು ಬಂದಿದ್ದವು. ವಾದ್ರಾ ಮತ್ತು ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನಡುವಿನ ವಿಚಾರ ಇಟ್ಟುಕೊಂಡು ಬಿಜೆಪಿ ವಿಚಾರವನ್ನು ಬೇರೆ ಕಡೆ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.  ಪೇಂಟಿಂಗ್ ಸೇಲ್ ಆಗಿದ್ದು 2010ರಲ್ಲಿ ಆದರೆ 2014ರಲ್ಲಿ 50 ಸಾವಿರ ಕೋಟಿ ಸಾಲ ಇದ್ದಿದ್ದು  2019ರ ವೇಳೆಗೆ 2 ಲಕ್ಷ ಕೋಟಿ ರೂ. ಗೆ ಏರಿದ್ದು ಹೇಗೆ ಎಂದು ಕಾಂಗ್ರೆಸ್ ವಾದ ಮುಂದಿಡುತ್ತದೆ.

ಕೇಳಿದವರಿಗೆಲ್ಲ ಯೆಸ್ ಎಂದು ಸಾಲ ಕೊಟ್ಟಿದ್ದೆ ಇದಕ್ಕೆಲ್ಲ ಕಾರಣ

ರಾಣಾ ಕಪೂರ್‌ ಗೆ ದೋರಾ ಪತ್ರ: ಕಾಂಗ್ರೆಸ್ ನಾಯಕ ಮಿಲಿಂದ್ ದೋರಾ ರಾಣಾ ಕಪೂರ್ ಗೆ 2010 ಪತ್ರ ಬರೆದಿದ್ದಾರೆ ಎನ್ನಲಾಗಿದ್ದು  ಎಂಎಫ್ ಹುಸೇನ್ ರಚಿಸಿರುವ ರಾಜೀವ್ ಗಾಂಧಿ ಕಲಾಕೃತಿ  ಖರೀದಿ ಮಾಡಿ ಈ ಬಗ್ಗೆ ಪ್ರಿಯಾಂಕಾ ವಾದ್ರಾ ಅವರನ್ನು ಸಂಪರ್ಕಿಸಿ ಎಂದು ಕೋರಿರುವ ವಿಚಾರವೂ ಬೆಳಕಿಗೆ ಬಂದಿದೆ.

ರಾಣಾ ಕಪೂರ್ ಗೆ ಇಡಿ ಡ್ರಿಲ್: ಇನ್ನೊಂದು ಕಡೆ  ಜಾರಿ ನಿರ್ದೇಶನಾಲಯ ರಾಣಾ ಕಪೂರ್ ವಿಚಾರಣೆ ಮಾಡುತ್ತಿದ್ದು ಶೆಲ್ ಕಂಪನಿಯಿಂದ 600 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ವಿಚಾರವನ್ನು ಎತ್ತಿಕೊಂಡ್ರಿ. ಡಿಎಚ್‌ಎಫ್ ಎಲ್ ಕಂಪನಿಗೆ ದೊಡ್ಡ ಮೊತ್ತದ ಸಾಲ ಮಂಜೂರು ಮಾಡಿದ್ದು, ಈ  ಹಣ ಅಲ್ಲಿಂದ 79 ಡಮ್ಮಿ ಕಂಪನಿಗಳಿಗೆ ವರ್ಗಾವಣೆಯಾಗಿದ್ದು ಸೇರಿದಂತೆ ಅನೇಕ  ವಿಚಾರಗಳನ್ನು ತನಿಖೆಗೆ ಕೖಗೆತ್ತಿಕೊಂಡಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?