ರಾಮಮಂದಿರ ಕಾಣಿಕೆ ಲೂಟಿ ಪ್ರಕರಣ: 17 ವರ್ಷದ ಬಳಿಕ RMO ವರ್ಗಾವಣೆ; ನೌಕರನ ಸ್ಯಾಲರಿ 20,000, ಆದ್ರೆ ಸಿಕ್ಕಿದ್ದು ಕೋಟಿ ಕೋಟಿ ಹಣ

Published : Jun 30, 2026, 11:49 AM IST
ram mandir donation

ಸಾರಾಂಶ

RMO Arjun Dev Transfer: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣದಲ್ಲಿ ನಡೆದಿದೆ ಎನ್ನಲಾದ ಭಾರಿ ಅಕ್ರಮದ ತನಿಖೆ ಈಗ ತಾರ್ಕಿಕ ಅಂತ್ಯದತ್ತ ಸಾಗುತ್ತಿದೆ. ಎಸ್‌ಐಟಿ (SIT) ವರದಿಯ ಬೆನ್ನಲ್ಲೇ ಕಳೆದ 17 ವರ್ಷಗಳಿಂದ ಅಯೋಧ್ಯೆಯಲ್ಲಿ ಬೀಡುಬಿಟ್ಟಿದ್ದ ರೇಡಿಯೋ ಮೇಂಟೆನೆನ್ಸ್ ಆಫೀಸರ್ (RMO) ಅರ್ಜುನ್ ದೇವ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಯೋಧ್ಯೆ ರಾಮ ಮಂದಿರದ ಕಾಣಿಕೆ ಹಣದ ಕಳ್ಳತನ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದೆ. ವಿಶೇಷ ತನಿಖಾ ತಂಡದ (SIT) ವರದಿಯಲ್ಲಿ ಅನೇಕ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಭದ್ರತಾ ಲೋಪ ಮತ್ತು ಸಿಬ್ಬಂದಿಗಳ ಶಾಮೀಲಾಗಿರುವಿಕೆ ದೃಢಪಟ್ಟಿದೆ.

17 ವರ್ಷಗಳ ಬಳಿಕ ಅರ್ಜುನ್ ದೇವ್ ವರ್ಗಾವಣೆ

ರಾಮ ಮಂದಿರದ ಸಿಸಿಟಿವಿ ಕ್ಯಾಮೆರಾಗಳು ಮತ್ತು ವೈರ್‌ಲೆಸ್ ವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದ ರೇಡಿಯೋ ಮೇಂಟೆನೆನ್ಸ್ ಆಫೀಸರ್ (RMO) ಅರ್ಜುನ್ ದೇವ್ ಅವರನ್ನು ಗೋರಖ್‌ಪುರಕ್ಕೆ ವರ್ಗಾವಣೆ ಮಾಡಲಾಗಿದೆ. 2009 ರಿಂದ ಅಯೋಧ್ಯೆಯಲ್ಲೇ ಇದ್ದ ಇವರು, ಅನೇಕ ಬಾರಿ ವರ್ಗಾವಣೆಯಾದರೂ ಪ್ರಭಾವ ಬಳಸಿ ಅದನ್ನು ರದ್ದುಗೊಳಿಸುತ್ತಿದ್ದರು. ಎಸ್‌ಐಟಿ ವರದಿಯಲ್ಲಿ ಇವರು ತಮ್ಮ ಜವಾಬ್ದಾರಿಯನ್ನು ಮೀರಿ ವಿವಿಐಪಿ ದರ್ಶನ ವ್ಯವಸ್ಥೆ ಮತ್ತು ಮಂದಿರ ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

6 ಬ್ಯಾಂಕ್‌ಗಳಿಗೆ ನೋಟಿಸ್

ಈ ಹಗರಣದ ಬೇರುಗಳು ಬ್ಯಾಂಕ್ ನೌಕರರವರೆಗೆ ಹರಡಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಸ್‌ಬಿಐ (SBI), ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್ ಸೇರಿದಂತೆ ಒಟ್ಟು ಆರು ಬ್ಯಾಂಕ್‌ಗಳಿಗೆ ನೋಟಿಸ್ ನೀಡಿದ್ದಾರೆ. ಕಾಣಿಕೆ ಎಣಿಕೆಯಲ್ಲಿ ಭಾಗಿಯಾಗಿದ್ದ ಬ್ಯಾಂಕ್ ನೌಕರರ ಪಟ್ಟಿಯನ್ನು ಪೊಲೀಸರು ಕೇಳಿದ್ದಾರೆ. ವಿಶೇಷವಾಗಿ ಎಸ್‌ಬಿಐ ನೌಕರರಾದ ರತ್ನೇಶ್ ಚತುರ್ವೇದಿ ಮತ್ತು ಗಗನ್‌ದೀಪ್ ಎಂಬುವವರ ಪಾತ್ರದ ಬಗ್ಗೆ ತೀವ್ರ ಶಂಕೆ ವ್ಯಕ್ತವಾಗಿದೆ.

ಆರೋಪಿಗಳ ಕೋಟಿ ಕೋಟಿ ಆಸ್ತಿ ಕಂಡು ಪೊಲೀಸರೇ ಶಾಕ್

ಬಂಧಿತ 8 ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದಾಗ ಭಾರಿ ಪ್ರಮಾಣದ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರಗಳು ಸಿಕ್ಕಿವೆ. ಆರೋಪಿ ಲವಕುಶ್ ಮಿಶ್ರಾ ಎಂಬುವವನ ಪತ್ನಿ ಹೆಸರಿನಲ್ಲಿರುವ ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಮೂರು ಅಂತಸ್ತಿನ ಐಷಾರಾಮಿ ಕಟ್ಟಡದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇವಲ 20 ಸಾವಿರ ರೂಪಾಯಿ ಸಂಬಳ ಪಡೆಯುವ ಈ ನೌಕರರು ಇಷ್ಟೊಂದು ಆಸ್ತಿ ಮಾಡಿದ್ದು ಹೇಗೆ ಎಂಬುದು ಈಗ ತನಿಖೆಯ ವಿಷಯವಾಗಿದೆ. ಮನಿಶ್ ಕುಮಾರ್ ಎಂಬ ಆರೋಪಿಯ ಮನೆಯಲ್ಲಿ 36 ಲಕ್ಷ ರೂ. ನಗದು ಪತ್ತೆಯಾಗಿದೆ.

ಡಿಜಿಟಲ್ ಸಾಕ್ಷ್ಯಗಳ ಶೋಧ

ಆರೋಪಿಗಳು ತಮ್ಮ ಫೋನ್‌ಗಳಲ್ಲಿನ ವಾಟ್ಸಾಪ್ ಚಾಟ್‌ಗಳನ್ನು ಡಿಲೀಟ್ ಮಾಡಿದ್ದು, ಅವುಗಳನ್ನು ಮರುಪಡೆಯಲು ಫೋನ್‌ಗಳನ್ನು ಫೋರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಜುಲೈ 14 ರವರೆಗೆ ಇವರೆಲ್ಲರೂ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ.

ವ್ಯವಸ್ಥೆಯಲ್ಲಿ ಬದಲಾವಣೆ

ಮುಂದೆ ಇಂತಹ ಕಳ್ಳತನ ನಡೆಯದಂತೆ ತಡೆಯಲು ಮಂದಿರ ಟ್ರಸ್ಟ್ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಇನ್ನು ಮುಂದೆ ಕೇವಲ ಒಂದು ಕಾಣಿಕೆ ಡಬ್ಬಿ ಇಡಲಾಗುವುದು ಮತ್ತು ಕ್ಯೂಆರ್ ಕೋಡ್ (QR Code) ಮೂಲಕ ಡಿಜಿಟಲ್ ಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಟ್ಸಾಪ್‌ನಲ್ಲಿ ಇತಿಹಾಸದಲ್ಲೇ ಅತಿ ದೊಡ್ಡ ಬದಲಾವಣೆ: ಇನ್ಮುಂದೆ ಫೋನ್ ನಂಬರ್ ಇಲ್ಲದೆಯೂ ಚಾಟ್! ಸೆಟ್ಟಿಂಗ್ ಬದಲಾಯಿಸಿ!
Indus Water Treaty dispute: ಆಪರೇಷನ್ ಸಿಂದೂರ್ ಬಳಿಕವೂ ಬುದ್ಧಿ ಕಲಿಯದ ಪಾಕ್; ಭಾರತಕ್ಕೆ ಮತ್ತೆ ನೇರ ಬೆದರಿಕೆ! (Video))