ಪ್ರಧಾನಿಗೆ ಗೌರವ ನೀಡ್ತೇವೆ, ರೈತರಿಗೂ ಗೌರವ ಸಿಗಬೇಕು: ಟಿಕಾಯತ್‌!

Published : Feb 01, 2021, 10:02 AM IST
ಪ್ರಧಾನಿಗೆ ಗೌರವ ನೀಡ್ತೇವೆ, ರೈತರಿಗೂ ಗೌರವ ಸಿಗಬೇಕು: ಟಿಕಾಯತ್‌!

ಸಾರಾಂಶ

ಪ್ರಧಾನಿಗೆ ಗೌರವ ನೀಡ್ತೇವೆ, ರೈತರಿಗೂ ಗೌರವ ಸಿಗಬೇಕು: ಟಿಕಾಯತ್‌| ಬಂಧಿತರ ಬಿಡಿ, ಚರ್ಚೆಗೆ ವೇದಿಕೆ ಸಿದ್ಧಪಡಸಿ

 ನವದೆಹಲಿ(ಫೆ.01): ‘ರೈತರ ಜತೆಗೆ ಮಾತುಕತೆಗೆ ಈಗಲೂ ಬದ್ಧ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ಮುಖಂಡ ನರೇಶ್‌ ಟಿಕಾಯತ್‌, ‘ಪ್ರಧಾನಿ ಹುದ್ದೆಗೆ ನಾವು ಗೌರವ ನೀಡುತ್ತೇವೆ. ಆದರೆ ಇದೇ ವೇಳೆ ರೈತರ ಆತ್ಮಗೌರವ ಕಾಯುವುದೂ ಅಷ್ಟೇ ಮುಖ್ಯ’ ಎಂದಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜತೆ ಭಾನುವಾರ ಮಾತನಾಡಿದ ಅವರು, ‘ರೈತ ಕಾಯ್ದೆ ಪ್ರತಿಭಟನೆಗೆ ಸಂಬಂಧಿಸಿದಂತೆ ಬಂಧಿತರಾಗಿರುವ ನಮ್ಮವರನ್ನು ಬಿಡಬೇಕು ಹಾಗೂ ಮಾತುಕತೆಗೆ ಪೂರಕವಾದ ವಾತಾವರಣ ಸೃಷ್ಟಿಸಬೇಕು. ಒಂದು ಗೌರವಯುತ ಪರಿಹಾರ ಸಿಗಬೇಕು. ಒತ್ತಡಕ್ಕೆ ಒಳಗಾಗಿ ಯಾವುದಕ್ಕೂ ನಾವು ಒಪ್ಪಿಕೊಳ್ಳುವುದಿಲ್ಲ’ ಎಂದರು.

‘ಪ್ರಧಾನಿ ಹುದ್ದೆಗೆ ನಾವು ಗೌರವ ನೀಡುತ್ತೇವೆ. ಸಂಸತ್ತು ಅಥವಾ ಸರ್ಕಾರ ನಮ್ಮ ಮುಂದೆ ತಲೆಬಾಗಬೇಕು ಎಂದು ನಾವು ಬಯಸುವುದಿಲ್ಲ. ಆದರೆ ರೈತರ ಆತ್ಮಗೌರವದ ರಕ್ಷಣೆ ಕೂಡ ಏಗಬೇಕು. ಸಂಧಾನಕ್ಕೆ ಮಧ್ಯದ ಮಾರ್ಗ ಕಂಡುಕೊಳ್ಳಬೇಕು. ಮಾತುಕತೆ ನಡೆಯಬೇಕು’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು