ವೈದ್ಯರ ಮೇಲೆ ದೌರ್ಜನ್ಯ ಎಸ​ಗಿ​ದರೆ 7 ವರ್ಷ ಜೈಲು!

Published : Sep 20, 2020, 01:39 PM IST
ವೈದ್ಯರ ಮೇಲೆ ದೌರ್ಜನ್ಯ ಎಸ​ಗಿ​ದರೆ 7 ವರ್ಷ ಜೈಲು!

ಸಾರಾಂಶ

ವೈದ್ಯರ ಮೇಲೆ ದೌರ್ಜನ್ಯ ಎಸ​ಗಿ​ದರೆ 7 ವರ್ಷ ಜೈಲು|  ವೈದ್ಯರು, ವೈದ್ಯ​ಕೀಯ ಸಿಬ್ಬಂದಿಗೆ ಸರ್ಕಾ​ರದ ರಕ್ಷ​ಣೆ| ರಾಜ್ಯ​ಸ​ಭೆ​ಯಲ್ಲಿ ಮಹ​ತ್ವದ ವಿಧೇ​ಯಕ ಪಾಸ್‌

ನವ​ದೆ​ಹ​ಲಿ(ಸೆ.20): ಕೊರೋನಾ ವಿರುದ್ಧ ಹೋರಾಟ ನಡೆ​ಸು​ತ್ತಿ​ರುವ ವೈದ್ಯರು ಹಾಗೂ ವೈದ್ಯ​ಕೀಯ ಸಿಬ್ಬಂದಿಗೆ ಬಲ ತುಂಬುವ ವಿಧೇ​ಯ​ಕ​ವನ್ನು ರಾಜ್ಯ​ಸಭೆ ಶನಿ​ವಾರ ಅಂಗೀ​ಕ​ರಿ​ಸಿದೆ. ಈ ಪ್ರಕಾರ, ಕೊರೋನಾ ಕರ್ತ​ವ್ಯ​ದಲ್ಲಿ ನಿರ​ತ​ರಾ​ಗಿ​ರುವ ಅಥವಾ ಇತರ ಆರೋಗ್ಯ ಸೇವೆ​ಗ​ಳಲ್ಲಿ ತೊಡ​ಗಿರುವ ವೈದ್ಯರು ಹಾಗೂ ವೈದ್ಯ​ಕೀಯ ಸಿಬ್ಬಂದಿ ಮೇಲೆ ದಾಳಿ ಮಾಡಿ​ದರೆ 7 ವರ್ಷದವ​ರೆ​ಗೆ ಜೈಲು ಶಿಕ್ಷೆ​ಯಾ​ಗ​ಲಿ​ದೆ.

ಈ ಕುರಿ​ತಾದ ‘ಸಾಂಕ್ರಾ​ಮಿಕ ರೋಗ​ಗಳ (ತಿ​ದ್ದು​ಪ​ಡಿ) ಕಾಯ್ದೆ ಮಸೂ​ದೆ-2020’ ವಿಧೇ​ಯ​ಕ​ವನ್ನು ಸರ್ವಾ​ನು​ಮ​ತ​ದಿಂದ ಸದನ ಅಂಗೀ​ಕ​ರಿ​ಸಿತು. ಕಳೆದ ಏಪ್ರಿ​ಲ್‌​ನಲ್ಲೇ ಈ ಕುರಿತ ಸುಗ್ರೀ​ವಾ​ಜ್ಞೆ​ಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಈಗ ಅಂಗೀ​ಕಾ​ರ​ವಾ​ಗಿ​ರುವ ಮಸೂ​ದೆಯು ಸುಗ್ರೀ​ವಾ​ಜ್ಞೆಯ ಸ್ಥಾನ​ವನ್ನು ಅಲಂಕ​ರಿ​ಸ​ಲಿ​ದೆ.

‘ಕೊರೋನಾ ಆರಂಭ​ವಾದ ಬಳಿಕ ದೇಶದ ಹಲವು ಭಾಗ​ಗ​ಳಲ್ಲಿ ವೈದ್ಯರು ಹಾಗೂ ವೈದ್ಯ​ಕೀಯ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆ​ದಿವೆ. ಇದು ನೋವಿನ ವಿಚಾರ. ಈ ಕಾರ​ಣಕ್ಕೆ ಇವರ ರಕ್ಷಣೆಗೆ ಇಡೀ ದೇಶಕ್ಕೆ ಅನ್ವ​ಯ​ವಾಗುವ ಬಲ​ವಾದ ಕಾನೂನು ಅಗತ್ಯ ಎಂದು ಭಾವಿಸಿ ಈ ಕಠಿಣ ಕಾನೂನು ತರ​ಲಾ​ಗಿದೆ’ ಎಂದು ಆರೋಗ್ಯ ಸಚಿವ ಡಾ| ಹರ್ಷ​ವ​ರ್ಧನ್‌ ಹೇಳಿ​ದ​ರು.

ಈ ಕುರಿತು ನಡೆದ ಚರ್ಚೆಯ ವೇಳೆ, ಆಸ್ಪ​ತ್ರೆಯ ಸ್ವಚ್ಛತಾ ಸಿಬ್ಬಂದಿ, ಆಶಾ ಕಾರ್ಯ​ಕ​ರ್ತೆ​ಯ​ರು, ತುರ್ತು ಸೇವೆ​ಗ​ಳಲ್ಲಿ ನಿರ​ತ​ರಾ​ಗಿ​ರುವ ಪೊಲೀ​ಸರು ಹಾಗೂ ಇತರ ಸಿಬ್ಬಂದಿ​ಗ​ಳ​ನ್ನೂ ಕಾಯಿ​ದೆಯ ವ್ಯಾಪ್ತಿಗೆ ತರ​ಬೇಕು ಎಂಬ ಆಗ್ರಹ ಸದ​ಸ್ಯ​ರಿಂದ ಕೇಳಿ​ಬಂತು. ಇನ್ನೂ ಕೆಲ​ವರು ಖಾಸಗಿ ಆಸ್ಪ​ತ್ರೆ​ಗಳು ಕೊರೋನಾ ಸಂದ​ರ್ಭ​ವನ್ನು ದುರ್ಬ​ಳಕೆ ಮಾಡಿ​ಕೊಂಡು ವಸೂಲಿ ದಂಧೆ​ಯಲ್ಲಿ ನಿರ​ತ​ವಾ​ಗಿವೆ ಎಂದೂ ಆರೋ​ಪಿ​ಸಿ​ದ​ರು.

ಕಾಯ್ದೆ​ಯ​ಲ್ಲೇ​ನಿ​ದೆ?

- ವೈದ್ಯರು, ವೈದ್ಯ ಸಿಬ್ಬಂದಿಗೆ ಹಿಂಸಿಸಿದರೆ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು. 50 ಸಾವಿರ​ದಿಂದ 2 ಲಕ್ಷ ರು.ವರೆಗೆ ದಂಡ

- ಗಂಭೀರ ಸ್ವರೂಪದ ಗಾಯ ಮಾಡಿದರೆ 6 ತಿಂಗಳಿನಿಂದ 7 ವರ್ಷಗಳವರೆಗೆ ಜೈಲು. 1 ಲಕ್ಷ ರು.ನಿಂದ 5 ಲಕ್ಷ ರು.ವರೆಗೆ ದಂಡ

- ಮನೆ ಮಾಲೀಕರು ಅಥವಾ ನೆರೆಹೊರೆಯ​ವರು ವೈದ್ಯಕೀಯ ಸಿಬ್ಬಂದಿಗೆ ಕಿರು​ಕುಳ ಕೊಟ್ಟರೆ ಅವ​ರಿಗೂ ಶಿಕ್ಷೆ

- ಗಂಭೀರ, ಜಾಮೀನುರಹಿತ ಅಪರಾಧ ಎಂದು ಪರಿಗಣನೆ. ಪೊಲೀಸರು ಬಂಧಿಸಿದರೆ ಠಾಣಾ ಜಾಮೀನಿಲ್ಲ

- ಹಿಂಸೆ ವೇಳೆ ಆಸ್ತಿಪಾಸ್ತಿ ಹಾನಿ ಮಾಡಿದರೆ ನಷ್ಟವಸೂಲಿ. ಮಾರುಕಟ್ಟೆಯ ದುಪ್ಪಟ್ಟು ಮೌಲ್ಯದಂತೆ ಬೆಲೆ ತೆರಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇವಸ್ಥಾನದ ಕಾರ್ತಿಕ ದೀಪದ ಪರವಾಗಿ ತೀರ್ಪು ನೀಡಿದ ಜಡ್ಜ್‌, ಸೇಡು ತೀರಿಸಿಕೊಳ್ಳಲು ಮುಂದಾದ ತಮಿಳುನಾಡು ಸರ್ಕಾರ!
15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ