ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

Published : Jun 23, 2020, 11:11 AM ISTUpdated : Jun 23, 2020, 11:16 AM IST
ಚೀನಾ ಭಾರತ ಗಡಿ ಬಿಕ್ಕಟ್ಟಿನ ನಡುವೆ ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

ಸಾರಾಂಶ

ರಷ್ಯಾ ತಲುಪಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್!| 4 ತಿಂಗಳಲ್ಲಿ ವಿದೇಶಕ್ಕೆ ತೆರಳಿದ ಮೊದಲ ಸಚಿವ| ಭಾರತಕ್ಕೆ ಎಸ್‌-400 ಕ್ಷಿಪಣಿ ನಿರೋಧಕ ಬೇಗ ನೀಡಲು ಕೋರಿಕೆ| ಈಗಾಗಲೇ ಚೀನಾಗೆ ಎಸ್‌-400 ನೀಡಿರುವ ರಷ್ಯಾ

ಮಾಸ್ಕೋ(ಜೂ.23): ನವದೆಹಲಿ: ಚೀನಾ ಜತೆ ಗಡಿ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆಯೇ ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು 3 ದಿನಗಳ ಪ್ರವಾಸಕ್ಕೆ ರಷ್ಯಾಗೆ ತಲುಪಿದ್ದಾರೆ. ಈ ವೇಳೆ ಅವರು ರಷ್ಯಾದ ಉನ್ನತ ಸೇನಾಧಿಕಾರಿಗಳ ಜತೆ ಮಾತುಕತೆ ನಡೆಸಲಿದ್ದಾರೆ ಹಾಗೂ ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿ ವಿರುದ್ಧ ಸೋವಿಯತ್‌ ಒಕ್ಕೂಟ ಜಯ ಸಾಧಿಸಿದ 75ನೇ ವರ್ಷಾಚರಣೆಯ ಪಥಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. 

ಕೊರೋನಾ ವೈರಸ್‌ ಹರಡುವಿಕೆ ಆರಂಭವಾದ ನಂತರ 4 ತಿಂಗಳ ಅವಧಿಯಲ್ಲಿ ಭಾರತದ ಸಚಿವರೊಬ್ಬರು ವಿದೇಶಕ್ಕೆ ತೆರಳುತ್ತಿರುವುದು ಇದೇ ಮೊದಲು. ಎಸ್‌-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಸಕಾಲದಲ್ಲಿ ಹಸ್ತಾಂತರಿಸುವಂತೆ ರಷ್ಯಾ ಮೇಲೆ ರಾಜನಾಥ್‌ ಒತ್ತಡ ಹೇರುವ ನಿರೀಕ್ಷೆ ಇದೆ.

ಶೀಘ್ರವೇ S-400 ಮಿಸೈಲ್ ಪೂರೈಸಲು ರಷ್ಯಾ ಒತ್ತಾಯಿಸಿದ ರಾಜನಾಥ್ ಸಿಂಗ್!

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜನಾಥ್‌, ‘ಈ ಭೇಟಿಯಿಂದ ಭಾರತ-ರಷ್ಯಾ ರಕ್ಷಣಾ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳುವ ಸಂಬಂಧ ರಷ್ಯಾ ಜತೆ ಮಾತುಕತೆ ನಡೆಸಲಿದ್ದೇನೆ’ ಎಂದಿದ್ದಾರೆ.

ಎಸ್‌-400 ಟ್ರೈಂಫ್‌ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತಕ್ಕೆ ಬೇಗ ಒದಗಿಸಿ ಎಂದು ಭೇಟಿಯ ವೇಳೆ ರಾಜನಾಥ್‌ ಮನವಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಏಕೆಂದರೆ ಕೊರೋನಾ ಕಾರಣ ಚೀನಾ ಈ ವ್ಯವಸ್ಥೆಯನ್ನು ಭಾರತಕ್ಕೆ ಹಸ್ತಾಂತರಿಸುವುದು ವಿಳಂಬವಾಗಿದೆ. ತನ್ನ ಜತೆ ಉತ್ತಮ ಬಾಂಧವ್ಯ ಹೊಂದಿದ ಚೀನಾಗೆ ರಷ್ಯಾ ಈಗಾಗಲೇ ಎಸ್‌-400 ವ್ಯವಸ್ಥೆ ನೀಡಿದೆ ಎಂಬುದು ಇಲ್ಲಿ ಗಮನಾರ್ಹ.

ಸೋವಿಯತ್‌ ಗೆಲುವಿನ ವರ್ಷಾಚರಣೆಯ ಪಥಸಂಚನದಲ್ಲಿ ಭಾರತದ 75 ಯೋಧರು ಕೂಡ ಪಲ್ಗೊಳ್ಳಲಿದ್ದು, ಅವರು ಈಗಾಗಲೇ ರಷ್ಯಾಗೆ ತೆರಳಿದ್ದಾರೆ. ಚೀನಾ ಯೋಧರು ಸೇರಿದಂತೆ 11 ರಾಷ್ಟ್ರಗಳ ಯೋಧರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ವಿಶ್ವಯುದ್ಧದಲ್ಲಿ ಭಾರತದ ಯೋಧರೂ ಪಾಲ್ಗೊಂಡಿದ್ದರು. ಹೀಗಾಗಿ ಪಥಸಂಚಲನದಲ್ಲಿ ಅವರು ಭಾಗಿಯಾಗಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!