Bikaner Manisha murder case ಅನೈತಿಕ ಸಂಬಂಧಕ್ಕೆ ನಾದಿನಿಯನ್ನು ಸುಟ್ಟು ಹಾಕಿದ ಅತ್ತಿಗೆ!

ರಾಜಸ್ಥಾನದ ಬಿಕಾನೇರ್ ಜಿಲ್ಲಾ ಪೊಲೀಸರು ಮನೀಷಾ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ. ಈ ಕೊಲೆಯನ್ನು ಬೇರೆ ಯಾರೂ ಅಲ್ಲ, ಆಕೆಯ ಅತ್ತಿಗೆಯೇ ಮಾಡಿದ್ದಾಳೆ. ಕಾರಣ ಆಕೆಯ ಬಯಕೆ ಮತ್ತು ಅನೈತಿಕ ಸಂಬಂಧ. ಅದಕ್ಕಾಗಿ ಕೊಲೆಗೆ ಸಂಚು ರೂಪಿಸಲಾಗಿತ್ತು.

Rajasthan Police Solve Bikaner Manisha Murder Case Illicit Affair Motive gow

ರಾಜಸ್ಥಾನದ ಬಿಕಾನೇರ್ ಪೊಲೀಸರಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇತ್ತೀಚೆಗೆ ಬಿಕಾನೇರ್‌ನ ಮುಕ್ತಾ ಪ್ರಸಾದ್ ಪ್ರದೇಶದಲ್ಲಿ ನಡೆದ ಮನೀಷಾ ಕೊಲೆ ಪ್ರಕರಣವನ್ನು (Bikaner Manisha murder case ) ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಮನೀಷಾಳ ಅತ್ತಿಗೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ವಾಸ್ತವವಾಗಿ ಮಾರ್ಚ್ 7 ರಂದು ಬಿಕಾನೇರ್‌ನಲ್ಲಿ ಮಹಿಳೆಯೊಬ್ಬಳ ಅರ್ಧ ಸುಟ್ಟ ಸ್ಥಿತಿಯಲ್ಲಿ ಮನೆಯಲ್ಲಿಯೇ ಪತ್ತೆಯಾಗಿತ್ತು. ಆಕೆಯನ್ನು ಮನೀಷಾ ಎಂದು ಗುರುತಿಸಲಾಯಿತು. ಪ್ರಾಥಮಿಕವಾಗಿ ಶವವನ್ನು ನೋಡಿದಾಗ ಇದು ಕೊಲೆ ಎಂದು ಪೊಲೀಸರಿಗೆ ಅನ್ನಿಸಿತ್ತು. ನಂತರ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಪೊಲೀಸರು ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳ ಫೂಟೇಜ್ ಮತ್ತು ಇತರ ಅಂಶಗಳನ್ನು ಪರಿಶೀಲಿಸಿದಾಗ ಮನೀಷಾಳ ಅತ್ತಿಗೆ ಸುಮನ್ ಮತ್ತು ಆಕೆಯ ಪ್ರಿಯಕರ ಗೋಪಾಲ್ ಅನುಮಾನಾಸ್ಪದವಾಗಿ ಕಂಡುಬಂದರು.

ರಾಜ್ಯದ ಇತಿಹಾಸದಲ್ಲೇ ದೊಡ್ಡ ಡ್ರಗ್ಸ್ ಬೇಟೆ: ಮಂಗಳೂರು ಸಿಸಿಬಿ ಪೊಲೀಸರಿಂದ 75 ಕೋಟಿ ಮಾಲು ವಶ

ಒಂದು ವರ್ಷದಿಂದ ಅನೈತಿಕ ಸಂಬಂಧವಿತ್ತು:
ಗೋಪಾಲ್ ಮೂಲತಃ ಚುರು ಜಿಲ್ಲೆಯ ನಿವಾಸಿ. ಆತನಿಗೆ ಮನೀಷಾಳ ಅತ್ತಿಗೆ ಸುಮನ್ ಜೊತೆ ಸುಮಾರು ಒಂದು ವರ್ಷದಿಂದ ಅನೈತಿಕ ಸಂಬಂಧವಿತ್ತು. ಈ ವಿಷಯ ಮನೀಷಾಗೆ ತಿಳಿದಾಗ ಆಕೆ ವಿರೋಧಿಸಲು ಪ್ರಾರಂಭಿಸಿದಳು. ಸುಮನ್, ಮನೀಷಾ ಈ ವಿಷಯವನ್ನು ಯಾರಿಗಾದರೂ ಹೇಳುತ್ತಾಳೆ ಎಂದು ಭಾವಿಸಿದಳು. ಅದಕ್ಕಾಗಿ ಆಕೆ ಗೋಪಾಲ್ ಜೊತೆ ಸೇರಿ ಮನೀಷಾಳನ್ನು ಕೊಲೆ ಮಾಡಲು ಯೋಜನೆ ರೂಪಿಸಿದಳು.

Latest Videos

ಅಘಾತಕಾರಿ ಘಟನೆ: ಕ್ಲಿನಿಕ್‌ಗೆ ನುಗ್ಗಿ ವೈದ್ಯನ ಮೇಲೆ ಹಲ್ಲೆ, ಖಾಸಗಿ ಅಂಗ ಕತ್ತರಿಸಿ ಪರಾರಿಯಾದ ಪಾಪಿಗಳು!

200ಕ್ಕೂ ಹೆಚ್ಚು ಪೊಲೀಸರು ತನಿಖೆ ನಡೆಸಿದರು:

  • ಈ ಸಂಪೂರ್ಣ ಪ್ರಕರಣವನ್ನು ಭೇದಿಸಲು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಅದರಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ಸೇರಿಸಲಾಗಿತ್ತು. ಆರೋಪಿ ಗೋಪಾಲ್ ಕೊಲೆ ಮಾಡುವ ಸಲುವಾಗಿ ಅನೇಕ ವೆಬ್ ಸರಣಿ ಮತ್ತು ಕ್ರೈಮ್ ಎಪಿಸೋಡ್‌ಗಳನ್ನು ನೋಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪ್ರೇಯಸಿ ಸುಮನ್ ಮನೀಷಾ ಬಗ್ಗೆ ಎಲ್ಲಾ ಮಾಹಿತಿಯನ್ನು ಗೋಪಾಲ್‌ಗೆ ನೀಡಿದ್ದಳು.

  • ನಂತರ ಮಾರ್ಚ್ 7 ರಂದು ಗೋಪಾಲ್ ಮನೀಷಾಳ ಮನೆಗೆ ಹೋದನು. ಅಲ್ಲಿ ನಂಬಿಕೆ ಬರುವಂತೆ ಆಕೆಯೊಂದಿಗೆ ಚಹಾ ಕುಡಿದು, ನಂತರ ಮೋಸದಿಂದ ತಲೆಗೆ ಸುತ್ತಿಗೆಯಿಂದ ಹೊಡೆದು ಮನೀಷಾಳನ್ನು ಕೊಲೆ ಮಾಡಿದನು. ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆರೋಪಿ ಗೋಪಾಲ್ ಶವವನ್ನು ಸುಟ್ಟನು.

ಕೊಲೆಯ ನಂತರ ಅತ್ತಿಗೆ ಅಂತ್ಯಕ್ರಿಯೆಯಲ್ಲಿ ಭಾಗಿ:
ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕುಟುಂಬಸ್ಥರು ಧರಣಿ ನಡೆಸುತ್ತಿದ್ದಾಗ ಆರೋಪಿ ಗೋಪಾಲ್ ಕೂಡ ಅದರಲ್ಲಿ ಭಾಗವಹಿಸಲು ಬಂದಿದ್ದನು ಎಂದು ತಿಳಿದುಬಂದಿದೆ. ಸುಮನ್ ಅತ್ತಿಗೆ ಆಗಿದ್ದರಿಂದ ಅಂತ್ಯಕ್ರಿಯೆ ಸೇರಿದಂತೆ ಎಲ್ಲಾ ಕಾರ್ಯಗಳಲ್ಲಿ ಭಾಗವಹಿಸಿದ್ದಳು. ಪೊಲೀಸರ ಪ್ರಕಾರ ಸುಮನ್ ಮೃತ ಮನೀಷಾಳ ಸೋದರತ್ತೆಯ ಮಗಳು.

vuukle one pixel image
click me!