
ಜೈಪುರ(ಏ.20): ಬಿಡಾಡಿ ಹಸುಗಳ ಹಾವಳಿ ತಪ್ಪಿಸಲು ಹಾಗೂ ನೈರ್ಮಲ್ಯ ಕಾಪಾಡಲು ರಾಜ್ಯದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹಸು ಅಥವಾ ಎಮ್ಮೆಗಳನ್ನು ಸಾಕಲು ಪರವಾನಗಿ ಕಡ್ಡಾಯಗೊಳಿಸಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ. ಅಲ್ಲದೆ ಜಾನುವಾರುಗಳನ್ನು ರಸ್ತೆಗೆ ಬಿಟ್ಟರೆ 10,000 ರು. ದಂಡ ವಿಧಿಸಲು ನಿರ್ಧರಿಸಿದೆ.
ಇತ್ತೀಚೆಗಷ್ಟೆಗುಜರಾತ್ ಸರ್ಕಾರ ಕೂಡ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಸುಗಳನ್ನು ಸಾಕಲು ಲೈಸನ್ಸ್ ಕಡ್ಡಾಯಗೊಳಿಸಿತ್ತು. ಅದರ ಬೆನ್ನಲ್ಲೇ ಅಂತಹುದೇ ಕ್ರಮಗಳಿಗೆ ರಾಜಸ್ಥಾನ ಸರ್ಕಾರ ಮುಂದಾಗಿದೆ.
‘ನಗರ ಹಾಗೂ ಪಟ್ಟಣ ಪ್ರದೇಶಗಳ ವ್ಯಾಪ್ತಿಯಲ್ಲಿ ಒಂದು ಮನೆಯಲ್ಲಿ ಒಂದು ಹಸು ಮತ್ತು ಕರುವನ್ನು ಸಾಕಲು ಪರವಾನಗಿ ಅಗತ್ಯವಿಲ್ಲ. ಅದಕ್ಕಿಂತ ಹೆಚ್ಚು ಹಸು ಹಾಗೂ ಎಮ್ಮೆಗಳನ್ನು ಸಾಕಲು ಕನಿಷ್ಠ 900 ಚದರಡಿಯ ಪ್ರತ್ಯೇಕ ಜಾಗ ಹೊಂದಿರಬೇಕು. ಆ ಬಗ್ಗೆ ದಾಖಲೆ ಸಲ್ಲಿಸಿ, 1000 ರು. ಪಾವತಿಸಿ ಒಂದು ವರ್ಷದ ಪರವಾನಗಿ ಪಡೆಯಬೇಕು. ಸಗಣಿಯನ್ನು ನಗರದ ಹೊರಗೆ ವಿಲೇವಾರಿ ಮಾಡಬೇಕು. ಕೊಟ್ಟಿಗೆಯಲ್ಲಿ ಸರಿಯಾದ ನೈರ್ಮಲ್ಯ ವ್ಯವಸ್ಥೆ ಇರಬೇಕು.
ಇದನ್ನು ಉಲ್ಲಂಘಿಸಿದರೆ 500 ರು. ದಂಡ ವಿಧಿಸಲಾಗುತ್ತದೆ. ಹಸುಗಳನ್ನು ರಸ್ತೆಗೆ ಬಿಟ್ಟರೆ 10,000 ರು. ದಂಡ ವಿಧಿಸಲಾಗುತ್ತದೆ. ಎಲ್ಲ ಜಾನುವಾರುಗಳನ್ನು ಅದರ ಮಾಲಿಕರ ಹೆಸರು ಹಾಗೂ ಫೋನ್ ನಂಬರ್ ಜೊತೆ ಜೋಡಿಸಬೇಕು. ಅನುಮತಿಯಿಲ್ಲದೆ ಪಶು ಆಹಾರ ಮಾರಿದರೂ 500 ರು. ದಂಡ ವಿಧಿಸಲಾಗುವುದು’ ಎಂದು ಆದೇಶದಲ್ಲಿ ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ