
ಬೆಂಗಳೂರು (ಅ. 07): ರಾಜಸ್ಥಾನದ ಕಾಂಗ್ರೆಸ್ನಲ್ಲಿ ಇಷ್ಟೆಲ್ಲ ತಿಕ್ಕಾಟಗಳು ನಡೆಯುತ್ತಿರುವಾಗ ‘ಮಹಾರಾಣಿ’ ವಸುಂಧರಾ ರಾಜೇ ಮೌನದ ಬಗ್ಗೆ ಮಾತ್ರ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಕಡೆ ಭಾರಿ ಕುತೂಹಲವಿದೆ. ಮೋದಿ, ಅಮಿತ್ ಶಾ ಹಾಗೂ ಆರ್ಎಸ್ಎಸ್ ಜೊತೆಗೆ ವಸುಂಧರಾ ಸಂಬಂಧ ಅಷ್ಟಕಷ್ಟೆ.
ಬಿಹಾರದಲ್ಲಿ ಕುಸಿಯುತ್ತಿದೆ ನಿತೀಶ್ ಕುಮಾರ್ ಜನಪ್ರಿಯತೆ
ಈಗ ಅಶೋಕ್ ಗೆಹ್ಲೋಟ್ ಅಮಿತ್ ಶಾ ಮತ್ತು ಕೇಂದ್ರ ಸಚಿವ ಕಿಶೋರ್ ಶೆಖಾವತ್ ಮೇಲೆ ಸರ್ಕಾರ ಬೀಳಿಸುವ ಆರೋಪ ಮಾಡುತ್ತಿದ್ದಾರೆಯೇ ಹೊರತು ವಸುಂಧರಾ ಬಗ್ಗೆ ಒಂದು ಮಾತೂ ಆಡುತ್ತಿಲ್ಲ. ಮೂಲಗಳು ಹೇಳುತ್ತಿರುವ ಪ್ರಕಾರ ಸಚಿನ್ ಪೈಲಟ್ ಜೊತೆ ಬಿಜೆಪಿ ಸಖ್ಯ ಬೆಳೆಸುವುದು ವಸುಂಧರಾಗೆ ಇಷ್ಟವಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ವಸುಂಧರಾಗೆ ಇವತ್ತು ಕೂಡ ಬಿಜೆಪಿಯ 70ರಲ್ಲಿ 42 ಶಾಸಕರ ಪಕ್ಕಾ ಬೆಂಬಲವಿದೆ. ಇಲ್ಲಿಯವರೆಗಂತೂ ಮಹಾರಾಣಿ ತನ್ನ ಎಲೆ ಎಸೆದಿಲ್ಲ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ