ಕೃಷಿ ಕಾಯ್ದೆ​ ವಿರು​ದ್ಧ ರಾಹುಲ್‌ ‘ಟ್ರ್ಯಾಕ್ಟರ್‌ ರ‍್ಯಾಲಿ’!

Published : Feb 23, 2021, 08:41 AM ISTUpdated : Feb 23, 2021, 02:58 PM IST
ಕೃಷಿ ಕಾಯ್ದೆ​ ವಿರು​ದ್ಧ ರಾಹುಲ್‌ ‘ಟ್ರ್ಯಾಕ್ಟರ್‌ ರ‍್ಯಾಲಿ’!

ಸಾರಾಂಶ

ಕೃಷಿ ಕಾಯ್ದೆ​ ವಿರು​ದ್ಧ ರಾಹುಲ್‌ ‘ಟ್ರ್ಯಾಕ್ಟರ್‌ ರಾರ‍ಯಲಿ’| 6 ಕಿ.ಮೀ ದೂರ​ದ​ವ​ರೆಗೆ ಟ್ರ್ಯಾಕ್ಟರ್‌ ಹೊಡೆದ ರಾಹು​ಲ್‌| ಈ ಹಿಂದೆ ಮೋದಿಗೆ ನರೇಗಾ ಮಹ​ತ್ವವೂ ತಿಳಿ​ದಿ​ರ​ಲಿ​ಲ್ಲ| ಪ್ರಧಾ​ನಿಗೆ ನರೇಗಾ ಮಹತ್ವ ಅರ್ಥೈ​ಸಿದ ಕೊರೋನಾ ಸಂಕ​ಷ್ಟ

ವಯ​ನಾ​ಡ್(ಫೆ.23)‌: ಕೇಂದ್ರದ ಕೃಷಿ ಕಾಯ್ದೆ​ಗಳ ವಿರುದ್ಧ ಕಾಂಗ್ರೆಸ್‌ ನಾಯ​ಕ ರಾಹುಲ್‌ ಗಾಂಧಿ ಅವರು ತಮ್ಮ ಲೋಕ​ಸಭಾ ಕ್ಷೇತ್ರ ಕೇರ​ಳದ ವಯ​ನಾ​ಡಿ​ನಲ್ಲಿ ರೈತ​ರೊಂದಿಗೆ ಟ್ರ್ಯಾಕ್ಟರ್‌ ರಾರ‍ಯಲಿ ನಡೆ​ಸಿ​ದ​ರು. ವಿಧಾ​ನ​ಸಭೆ ಚುನಾ​ವಣೆ ಹಿನ್ನೆ​ಲೆ​ಯಲ್ಲಿ 2 ದಿನ​ಗಳ ಪ್ರವಾ​ಸ​ಕ್ಕಾಗಿ ಕ್ಷೇತ್ರಕ್ಕೆ ಬಂದಿ​ರುವ ರಾಹುಲ್‌ ಅವರು 6 ಕಿ. ಮೀ ದೂರದ ರಾರ‍ಯಲಿ ವೇಳೆ ತಾವೇ ಟ್ರ್ಯಾಕ್ಟರ್‌ ಅನ್ನು ಚಾಲನೆ ಮಾಡಿದ್ದು ಗಮನ ಸೆಳೆ​ಯಿತು.

ಬಳಿಕ ಮೋದಿ ಸರ್ಕಾ​ರದ ವಿರುದ್ಧ ವಾಗ್ದಾಳಿ ನಡೆ​ಸಿದ ರಾಹುಲ್‌, ‘ಈ ದೇಶದ ಕೃಷಿ ವಲ​ಯವು ಭಾರತ ಮಾತೆಗೆ ಸೇರಿ​ದ್ದಾ​ಗಿದ್ದು, ನೂತನ 3 ಕಾಯ್ದೆ​ಗ​ಳ ಹಿಂಪ​ಡೆ​ತ​ಕ್ಕಾಗಿ ಕೇಂದ್ರ ಸರ್ಕಾ​ರಕ್ಕೆ ಜನ ಸಾಮಾ​ನ್ಯರು ಒತ್ತಾ​ಯಿ​ಸ​ಬೇ​ಕು’ ಎಂದು ಕರೆ ನೀಡಿ​ದರು.

2014ರಲ್ಲಿ ಪ್ರಧಾನಿ ಪಟ್ಟ​ಕ್ಕೇ​ರಿದ ಮೋದಿ ಗ್ರಾಮೀಣ ಜನ​ತೆಗೆ ಉದ್ಯೋಗ ಕಲ್ಪಿ​ಸಲು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜ​ನೆ​ ಟೀಕಿ​ಸಿ​ದ್ದರು. ಆದರೆ ಕೊರೋನಾ ಅವ​ಧಿ​ಯಲ್ಲಿ ನರೇಗಾ ಯೋಜ​ನೆಯ ಮಹ​ತ್ವ​ವನ್ನು ಮೋದಿ ಅವರು ಮನ​ಗಂಡರು. ಭಾರ​ತದ ರೈತರ ಸಂಕ​ಷ್ಟ​ಗ​ಳ ಕುರಿ​ತಾಗಿ ಪಾಪ್‌ ಗಾಯ​ಕಿ​(ರಿಹಾ​ನಾ) ಸೇರಿ​ದಂತೆ ಇಡೀ ವಿಶ್ವಕ್ಕೆ ಅರ್ಥವಾ​ಗಿದೆ. ಆದರೆ ದಿಲ್ಲಿ​ಯ​ಲ್ಲಿ​ರುವ ನಮ್ಮ ಸರ್ಕಾ​ರಕ್ಕೆ ಈ ಬಗ್ಗೆ ಕಾಳ​ಜಿಯೇ ಇಲ್ಲ ಎಂದು ಕಿಡಿ​ಕಾ​ರಿ​ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಐತಿಹಾಸಿಕ ಕ್ಲೀನ್‌ ಸ್ವೀಪ್ - ವಿಶ್ವದಾಖಲೆ ಬರೆದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ!
2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ