'ರಾಹುಲ್ ಗಾಂಧಿಗೆ ಈ ವಿಚಾರದಲ್ಲಿ ತಿಳಿವಳಿಕೆ ಸಿಕ್ಕಾಪಟ್ಟೆ ಕಮ್ಮಿ'

Published : May 30, 2020, 06:18 PM ISTUpdated : May 30, 2020, 06:25 PM IST
'ರಾಹುಲ್ ಗಾಂಧಿಗೆ ಈ ವಿಚಾರದಲ್ಲಿ ತಿಳಿವಳಿಕೆ ಸಿಕ್ಕಾಪಟ್ಟೆ ಕಮ್ಮಿ'

ಸಾರಾಂಶ

ರಾಹುಲ್ ಗಾಂಧಿ ಮೇಲೆ ಜೆಪಿ ನಡ್ಡಾ ವಾಗ್ದಾಳಿ/ ರಾಹುಲ್ ಗೆ ತಿಳಿವಳಿಕೆ ಕಮ್ಮಿ ಎಂದ ನಡ್ಡಾ/ ಕೊರೋನಾ ವಿಚಾರದಲ್ಲಿಯೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ/ ಕಾಂಗ್ರೆಸ್ ಹೇಳಿಕೆಗಳು ಪರಿಹಾರ ಸೂಚಿಸುವಂತೆ ಇಲ್ಲ

ನವದೆಹಲಿ(ಮೇ 30)  ಕೇಂದ್ರದ ಮೋದಿ ಸರ್ಕಾರ ಕೊರೋನಾ ಪರಿಸ್ಥಿತಿ ನಿಭಾಯಿಸಲು ವಿಫಲವಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸರಿಯಾದ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕ ಎನಿಸಿಕೊಂಡಿರುವ ರಾಹುಲ್ ಗಾಂಧಿಯಯವರಿಗೆ ಕೊರೋನಾ ವೈರಸ್ ವಿಚಾರದಲ್ಲಿ ಅಲ್ಪ ತಿಳಿವಳಿಕೆ ಇದೆ. ಅವರ ಎಲ್ಲ ಹೇಳಿಕೆಗಳು ಸಮಸ್ಯೆ ಬಗೆಹರಿಸುವ ಕುರಿತಾಗಿ ಇಲ್ಲ, ಎಲ್ಲವೂ ರಾಜಕಾರಣದ ಮಯ ಎಂದು ನಡ್ಡಾ ಹೇಳಿದ್ದಾರೆ.

ಜಗತ್ತಿನೆಲ್ಲೆಡೆ ಮೋದಿ ಹವಾ; ಕೊರೋನಾ ನಿರ್ವಹಣೆ ನಂಬರ್ ಒನ್

ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಮಾತನಾಡಿದ ನಡ್ಡಾ, ನಾವು ಕಳೆದ ಒಂದು ವರ್ಷದ ಅವಧಿಯಲ್ಲಿ ಅನೇಕ ದಿಟ್ಟ ತೀರ್ಮಾನ ತೆಗೆದುಕೊಂಡಿದ್ದೇವೆ. ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೇ ಕೊರೋನಾ  ವಿರುದ್ಧ ಹೋರಾಡಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ನಮ್ಮ ರಾಷ್ಟ್ರ ವಿಷಮ ಪರಿಸ್ಥಿತಿಯನ್ನು ನಿಭಾಯಿಸಿದೆ ಎಂದಿದ್ದಾರೆ.

ದಿಟ್ಟ ಮತ್ತು ಸಮಯೋಚಿತ ತೀರ್ಮಾನಗಳೆ ಈ ಒಂದು ವರ್ಷದ ಹೈಲೈಟ್ಸ್. ಕೊರೋನಾ ವಿರುದ್ಧ ತೆಗೆದುಕೊಂಡ ಸಮಯೋಚಿತ ನಿರ್ಧಾರಗಳೆ ನಮ್ಮನ್ನು ಕಾಪಾಡುತ್ತಿವೆ ಎಂದಿದ್ದಾರೆ.

ಲಾಕ್ ಡೌನ್ ವಿಚಾರದಲ್ಲಿಯೂ ರಾಹುಲ್ ಗಾಂಧಿಗೆ ತಿಳಿವಳಿಕೆ ಇಲ್ಲ. ಅವರ ಗೊಂದಲಕಾರಿ ಹೇಳಿಕೆಗಳೇ ಅವರ ಜ್ಞಾನ ಮಟ್ಟ ಬಿಂಬಿಸುತ್ತದೆ ಎಂದು ಟೀಕಿಸಿದ್ದಾರೆ. 

ಅವರ ಎಲ್ಲ ಹೇಳಿಕೆಗಳು ರಾಜಕಾರಣದ ಸುತ್ತವೇ ಗಿರಕಿ ಹೊಡೆಯುತ್ತಿವೆ. ಅವರದ್ದು ಬರೀ ರಾಜಕಾರಣವೇ ಹೊರತು ಜನಪರ ಚಿಂತನೆ ಅಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯಂತೆ ಕಾಂಗ್ರೆಸ್ ಸಹ ಕೊರೋನಾ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ನಡ್ಡಾ ಆರೋಪ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!