
ನವದೆಹಲಿ (ಮಾ.04) ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ನಡೆಸುತ್ತಿರುವ ದಾಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಖಮನೈ ಹತ್ಯೆ ಬಳಿಕ ಇರಾನ್ ನಡೆಸುತ್ತಿರುವ ಪ್ರತಿದಾಳಿ ಗುರಿ ತಪ್ಪುತ್ತಿದೆ. ಅಮೆರಿಕ ಸೇನಾ ನೆಲೆಗಳ ಗುರಿಯಾಗಿಸಿ ನಡೆಸುತ್ತಿರುವ ದಾಳಿಯಲ್ಲಿ ಗಲ್ಫ್ ರಾಷ್ಟ್ರಗಳು ಹೈರಾಣಾಗಿದೆ. ಖತಾರ್ ಮೇಲೆ ಇರಾನ್ ನಡೆಸಿದ ದಾಳಿಯಿಂದ ಖತಾರ್ನ ಸಿಎನ್ಜಿ ಘಟಕ ಸ್ಥಗಿತಗೊಳಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಘಟಕ ಸಂಪೂರ್ಣ ಬಂದ್ ಮಾಡಲಾಗಿದೆ. ಇದು ಭಾರತಕ್ಕೆ ಸಂಕಷ್ಟಕ್ಕೆ ಸಲುಕಿಸಿದೆ. ಖತಾರ್ನಿಂದ ಭಾರತಕ್ಕೆ ಬರುತ್ತಿದ್ದ ಗ್ಯಾಸ್ ಆಮದು ನಿಂತಿದೆ. ಭಾರತ ಆಮದು ಮಾಡುವ ವಾರ್ಷಿಕ ಅನಿಲದಲ್ಲಿ ಶೇಕಡಾ 40ರಷ್ಟು ಅನಿಲ ಖತಾರ್ನಿಂದ ಆಮದು ಮಾಡಲಾಗುತ್ತದೆ.
ಖತಾರ್ನಿಂದ ಪೂರೈಕೆಯಾಗುತ್ತಿದ್ದ ಅನಿಲ್ ಸಾಗಾಣೆ ಸಂಪೂರ್ಣ ಬಂದ್ ಆಗಿದೆ. ಇದರಿಂದ ಸದ್ಯಕ್ಕೆ ಭಾರತದಲ್ಲಿ ಅನಿಲ ವ್ಯತ್ಯಯ ಸಮಸ್ಯೆಯಾಗುವುದಿಲ್ಲ. ಆದರೆ ಯುದ್ಧ ಇದೇ ರೀತಿ ಮುಂದುವರಿದರೆ ಸಮಸ್ಯೆ ಹೆಚ್ಚಾಗಲಿದೆ. ಕಾರಣ ಹೊರ್ಮುಜ್ ಜಲಸಂಧಿ ಬಂದ್ ಮಾಡಲಾಗಿದೆ. ಹೀಗಾಗಿ ಅನಿಲ, ತೈಲ ಸೇರಿದಂತೆ ಯಾವುದೇ ಸಾಗಾಣೆಗಳು ಈ ಜಲಸಂಧಿ ಮೂಲಕ ನಡೆಯುವುದಿಲ್ಲ. ಸದ್ಯ ಶೇಖರಣೆಗೊಂಡಿರುವ ಗ್ಯಾಸ್ ಬರಿದಾಗುತ್ತಿದ್ದಂತೆ ಸಮಸ್ಯೆಗಳು ತೀವ್ರಗೊಳ್ಳಲಿದೆ.
ಭಾರತಕ್ಕೆ ಅನಿಲ ಪೂರೈಕೆ ಸ್ಥಗತಿಗೊಂಡರೆ ಅಡುಗೆ ಅನಿಲ, ವಾಹನಗಳ ಸಿಎನ್ಜಿ ಪೂರೈಕೆ ಸಮಸ್ಯೆಯಾಗಲಿದೆ.ಇದರಿಂದ ಭಾರತದಲ್ಲಿ ಗ್ಯಾಸ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಯುದ್ಧ ಕೆಲ ದಿನಗಳಲ್ಲಿ ಅಂತ್ಯಗೊಂಡರೆ ಭಾರತ ಸವಾಲು ನಿಭಾಯಿಸಲಿದೆ. ಯುದ್ಧ ಮುಂದುವರಿದರೆ ಸಮಸ್ಯೆ ತೀವ್ರಗೊಳ್ಳಲಿದೆ.
ಗುತ್ತಿಗೆ ಆಧಾರದಲ್ಲಿ ಭಾರತ ಖತಾರ್ನಿಂದ ಅನಿಲ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಈ ವ್ಯವಸ್ಥೆ ಬಂದ್ ಆಗಿದೆ. ಇದೀಗ ಮುಕ್ತ ಮಾರುಕಟ್ಟೆಯಿಂದ ಅನಿಲ ಆಮದು ಭಾರತಕ್ಕೆ ದುಬಾರಿಯಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ