ಕೊರೋನಾಕ್ಕೆ ಬಲಿಯಾದ ಅಪ್ಪ, ಶಾಕ್ ತಾಳದೆ ಇಹಲೋಕ ತ್ಯಜಿಸಿದ ಅಂಧ ಮಗಳು!

Published : Aug 12, 2020, 09:37 PM ISTUpdated : Aug 12, 2020, 09:38 PM IST
ಕೊರೋನಾಕ್ಕೆ ಬಲಿಯಾದ ಅಪ್ಪ, ಶಾಕ್ ತಾಳದೆ ಇಹಲೋಕ ತ್ಯಜಿಸಿದ ಅಂಧ ಮಗಳು!

ಸಾರಾಂಶ

ಪೊಲೀಸ್ ಇಲಾಖೆಯಲ್ಲಿದ್ದ ತಂದೆ ಕೊರೋನಾಕ್ಕೆ ಬಲಿ/ ಅಪ್ಪನ ದಾರಿಯನ್ನೇ ಹಿಡಿದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಮಗಳು/  ಪಂಜಾಬ್ ನಲ್ಲೊಂದು ಮನ ಕಲಕುವ ಘಟನೆ

ಲೂಧಿಯಾನ (ಆ. 12)   ತಂದೆ ಸಾವಿಗೀಡಾಗಿ ಕೆಲವೇ ಗಂಟೆಗಳಲ್ಲಿ ಮಗಳು ಅಪ್ಪನ ದಾರಿ ಹಿಡಿದಿದ್ದಾಳೆ.  ಮಗಳನ್ನು ತಂದೆ ಪ್ರೀತಿಯಿಂದ 'ಮೋಟಾ ಪುಟ್' ಎಂದು ಕರೆಯುತ್ತಿದ್ದ ಕ್ಷಣಗಳು ಇನ್ನು ನೆನಪು ಮಾತ್ರ.

ಮಗಳು ಗೋಬಿ ಮಂಚೂರಿ ಆಸೆಪಟ್ಟು  ಬೇಡಿಕೆ ಇಟ್ಟಾಗ  ಒಂದೇ ಕಾರಣಕ್ಕೆ ದೂರದ ಲೂಧಿಯಾನಕ್ಕೆ ತೆರಳಿ ತಂದುಕೊಟ್ಟ ದಾಖಲೆಗಳು ಇವೆ.  ಮಗಳು 18  ವರ್ಷಗಳ ಕಾಲ  ಸಕ್ಕರೆ ಕಾಯಿಲೆಯಿಂದ ನರಳಿದಳು. ಇದೊಂದು ತಂದೆ-ಮಗಳ ಮುರಿಯದ ಬಾಂಧವ್ಯದ ಕತೆ.

ಸಕ್ಕರೆಕಾಯಿಲೆ ಮಗಳನ್ನು ಆವರಿಸಿಕೊಂಡು ಕಿಡ್ನಿಯನ್ನು ಮೊದಲು ಬಲಿ ಪಡೆದಿದೆ. ನಂತರ ಕಣ್ಣಿನ ದೃಷ್ಟಿ ಕಿತ್ತುಕೊಂಡಿದೆ. ತಂದೆ ಪಾಯಲ್ ಠಾಣೆಯ ಅಸಿಸ್ಟಂಟ್ ಸಬ್ ಇನ್ಸ್ ಪೆಕ್ಟರ್ ಜಸ್ಪಾಲ್ ಸಿಂಗ್ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆದಾಡಿದ್ದಾರೆ.

ಕೊರೋನಾಕ್ಕೆ ರಷ್ಯಾ ಲಸಿಕೆ; ಏನು? ಏತ್ತ?

ಇಂಥ ಜಸ್ಪಾಲ್ ಸಿಂಗ್( 49) ಕೊರೋನಾ ಸೋಂಕಿಗೆ ಗುರಿಯಾಗಿ ಸಾವನ್ನಪ್ಪುತ್ತಾರೆ. ಸೋಮವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ.   ಆಘಾತಕ್ಕೆ ಒಳಗಾದ ಮಗಳು  ನವ್ ಪ್ರೀತ್ ಕೌರ್  (24)   ಕೆಲವೇ ಗಂಟೆ ನಂತರ ಮನೆಯಲ್ಲಿ ನಿಧನರಾಗುತ್ತಾರೆ. ನಿಧನವಾಗುವುದಕ್ಕೂ ಮುನ್ನ 'ಡ್ಯಾಡಿ ಜಿ, ಡ್ಯಾಡಿ ಜಿ' ಎಂದು ಕರೆಯುತ್ತಲೇ ಪ್ರಾಣ ಬಿಟ್ಟಳು ಎಂದು ಕುಟುಂಬಸ್ಥರು ಕೊನೆಯ ನೋವಿನ ಕ್ಷಣಗಳನ್ನು ವಿವರಿಸುತ್ತಾರೆ.

ಜಸ್ಪಾಲ್ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ 25 ವರ್ಷಕ್ಕೂ ಅಧಿಕ ಕಾಲ ಕೆಲಸ ಮಾಡಿತ್ತು ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಲೂಧಿಯಾನ ಕಮಿಷನರತ್ ರಾಕೇಶ್ ಅಗರ್‌ ವಾಲ್ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?